ಆ್ಯಪ್ನಗರ

ಗುರುಮಠ ಕಾಳಿಕಾಂಬಾ ದೇವಸ್ಥಾನಕ್ಕೆ ಕಾಳಹಸ್ತೇಂದ್ರ ಸ್ವಾಮೀಜಿ ಭೇಟಿ

ಮೂಡುಬಿದಿರೆ: ಶ್ರೀಮತ್‌ ಆನೆಗುಂದಿ ಸಂಸ್ಥಾನ ಸರಸ್ವತಿ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿಯವರು ಚಾತುರ್ಮಾಸ ವೃತಾಚರಣೆಯ ಪೂರ್ವಭಾವಿಯಾಗಿ ಕರಾವಳಿಯ ಕಾಳಿಕಾಂಬಾ ದೇವಾಲಯಗಳ ಸಂದರ್ಶನ ಹಮ್ಮಿಕೊಂಡಿದ್ದು ಶುಕ್ರವಾರ ಇಲ್ಲಿನ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನಕ್ಕೆ ಸಂದರ್ಶಿಸಿ ದೇವರ ದರ್ಶನ ಪಡೆದರು.

Vijaya Karnataka 13 Jul 2019, 5:00 am
ಮೂಡುಬಿದಿರೆ: ಶ್ರೀಮತ್‌ ಆನೆಗುಂದಿ ಸಂಸ್ಥಾನ ಸರಸ್ವತಿ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿಯವರು ಚಾತುರ್ಮಾಸ ವೃತಾಚರಣೆಯ ಪೂರ್ವಭಾವಿಯಾಗಿ ಕರಾವಳಿಯ ಕಾಳಿಕಾಂಬಾ ದೇವಾಲಯಗಳ ಸಂದರ್ಶನ ಹಮ್ಮಿಕೊಂಡಿದ್ದು ಶುಕ್ರವಾರ ಇಲ್ಲಿನ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನಕ್ಕೆ ಸಂದರ್ಶಿಸಿ ದೇವರ ದರ್ಶನ ಪಡೆದರು.
Vijaya Karnataka Web gurumatha kalikamba temple
ಗುರುಮಠ ಕಾಳಿಕಾಂಬಾ ದೇವಸ್ಥಾನಕ್ಕೆ ಕಾಳಹಸ್ತೇಂದ್ರ ಸ್ವಾಮೀಜಿ ಭೇಟಿ


ಬಳಿಕ ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿ ನಮ್ಮ ಬದುಕಿನಲ್ಲಿ ದೇವರ ಸೇವೆ ಮಾಡಲು ನಮಗೆ ಅವಕಾಶ ನೀಡಿದ್ದು ದೇವರಸೇವೆ ಮಾಡಿದರೆ ನಾವು ಜೀವನದಲ್ಲಿ ಮಾಡಿದ ಪಾಪಕರ್ಮಗಳು ಕಳೆದುಹೋಗುತ್ತವೆ ಎಂಬ ನಂಬಿಕೆಯಿದೆ. ಇಂದಿನ ಶಿಕ್ಷ ಣ ವ್ಯವಸ್ಥೆಯಿಂದಾಗಿ ಯುವಜನರು ಧಾರ್ಮಿಕತೆಯಿಂದ ವಿಮುಖರಾಗುತ್ತಿದ್ದಾರೆ. ಇಂಗ್ಲೀಷ್‌ ಶಿಕ್ಷ ಣದ ಗುಂಗಿನಲ್ಲಿ ನಮ್ಮ ಸಂಸ್ಕೃತಿ ಸಂಸ್ಕಾರವನ್ನು ಮರೆಯುತ್ತಿದ್ದಾರೆ. ನಮ್ಮ ಮುಂದಿನ ಪೀಳಿಗೆ ವಿದ್ಯಾವಂತರಾಗುವುದರರೊಂದಿಗೆ ಪ್ರಜ್ಞಾವಂತರೂ ವಿವೇಕವಂತರೂ ಆಗಬೇಕು. ಅದಕ್ಕಾಗಿ ಸಂಸ್ಕಾರವನ್ನು ಮನೆಗಳಲ್ಲಿ, ಶಾಲೆಗಳಲ್ಲಿ ಕಲಿಸಬೇಕು. ಆದರೆ ಈಗ ಕೆಲವು ಶಾಲೆಗಲಲ್ಲಿಯೇ ಹಿಂದೂ ಸಂಸ್ಕೃತಿ ಸಂಸ್ಕಾರ ಕಲಿಸದಂತಹ ವಿಚಿತ್ರ ಕಾನೂನುಗಳನ್ನು ರೂಪಿಸಲಾಗುತ್ತಿದೆ. ಇದು ಅನಾರೋಗ್ಯಕರ ಬೆಳವಣಿಗೆಗೂ ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ಮಠದ ವತಿಯಿಂದ ಸಂಸ್ಕಾರಯುತ ಶಿಕ್ಷ ಣದೊಂದಿಗೆ ಲೌಕಿಕ ಶಿಕ್ಷ ಣವನ್ನು ಕಲಿಸುವ ವಿದ್ಯಾಸಂಸ್ಥೆಯನ್ನು ಸ್ಥಾಪಿಸುವ ಗುರಿ ಹೊಂದಿರುವುದಾಗಿ ಹೇಳಿದರು.

ಆನೆಗುಂದಿ ಸಂಸ್ಥಾನ ಸರಸ್ವತಿ ಪೀಠ ಸಮಿತಿಯ ಅಧ್ಯಕ್ಷ ಬಿ.ಸೂರ್ಯಕುಮಾರ್‌, ಉಪಾಧ್ಯಕ್ಷ ಹರೀಶ್‌ ಆಚಾರ್ಯ ಉಪಸ್ಥಿತರಿದ್ದರು. ಆನೆಗುಂದಿ ಎಜ್ಯುಕೇಶನ್‌ ಟ್ರಸ್ಟ್‌ನ ಅಧ್ಯಕ್ಷ ತ್ರಾಸಿ ಸುಧಾಕರ ಆಚಾರ್ಯ ಮಾತನಾಡಿ, ಶಿಕ್ಷ ಣ ಸಂಸ್ಥೆಯ ಸ್ಥಾಪನೆಗಾಗಿ ಈಗಾಗಲೇ 4.78 ಎಕರæ ಸ್ಥಳವನ್ನು ಖರೀದಿಸಿದ್ದು ದೊಡ್ಡ ಮೊತ್ತದ ನಿಧಿಯೊಂದನ್ನು ಸ್ಥಾಪಿಸುವ ಬಗ್ಗೆ ಯೋಜನೆ ರೂಪಿಸಲಾಗಿದೆ. ಈಗಾಗಲೇ ಮಠದಲ್ಲಿ ಸುಮಾರು 50ರಷ್ಟು ವಿದ್ಯಾರ್ಥಿಗಳು ವೈದಿಕ ಶಿಕ್ಷ ಣದೊಂದಿಗೆ ಲೌಕಿಕ ಶಿಕ್ಷ ಣವನ್ನು ಪಡೆಯುತ್ತಿದ್ದಾರೆ ಎಂದರು. ಸಮಿತಿಯ ಕಾರ‍್ಯದರ್ಶಿ ಸುಧಾಕರ ಆಚಾರ್ಯ ಮಠದಲ್ಲಿ ನಡೆಯುತ್ತಿರುವ ಚಟುವಟಿಕೆಗಳು, ಮುಂದಿನ ಯೋಜನೆಗಳನ್ನು ವಿವರಿಸಿದರು.

ಕ್ಷೇತ್ರದ ಆಡಳಿತ ಮೊಕ್ತೇಸರ ಜಯಕರ ಆಚಾರ್ಯ ಸ್ವಾಮೀಜಿ ಅವರನ್ನು ಗೌರವಿಸಿದರು. ಮೊಕ್ತೇಸರರಾದ ಬಾಲಕೃಷ್ಣ ಆಚಾರ್ಯ ಉಳಿಯ, ಶಿವರಾಮ ಆಚಾರ್ಯ ಉಳಿಯ, ಕಾಳಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷ ಶಿವಪ್ರಸಾದ್‌ ಎನ್‌. ಗಂಟಾಲ್ಕಟ್ಟೆ, ಕಾಳಿಕಾಂಬಾ ಮಹಿಳಾ ಸಮಿತಿಯ ಅಧ್ಯಕ್ಷೆ ಸಂಧ್ಯಾ ಜಯಕರ ಆಚಾರ್ಯ, ಚಿನ್ನದ ಕೆಲಸಗಾರರ ಹಿತರಕ್ಷ ಣಾ ವೇದಿಕೆಯ ಅಧ್ಯಕ್ಷ ಮಹೇಶ್‌ ಎನ್‌. ಗಂಟಾಲ್ಕಟ್ಟೆ, ಗುರುಕಾಷ್ಠಶಿಲ್ಪ ಕೆಲಸಗಾರರ ಸಮಿತಿಯ ಅಧ್ಯಕ್ಷ ಜಗದೀಶ ಆಚಾರ್ಯ ಉಪಸ್ಥಿತರಿದ್ದರು.

ಮೊಕ್ತೇಸರ ಶಿವರಾಮ ಆಚಾರ್ಯ ಉಳಿಯ ಸ್ವಾಗತಿಸಿದರು. ಭಾಸ್ಕರ ಆಚಾರ್ಯ ಬೆಳುವಾಯಿ ಕಾರ‍್ಯಕ್ರಮ ನಿರ್ವಹಿಸಿದರು. ಜಯಕರ ಆಚಾರ್ಯ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ