ಆ್ಯಪ್ನಗರ

ವಿಶೇಷಚೇತನರ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಸವಾಲುಗಳನ್ನು ಎದುರಿಸಲು ಶಕ್ತಿ ಸಿಗುತ್ತದೆ. ಬದುಕಿನ ಯಶಸ್ವಿಗೆ ಇದು ಸ್ಫೂರ್ತಿಯಾಗುತ್ತದೆ ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ ಹೇಳಿದರು.

Vijaya Karnataka 16 Dec 2018, 3:50 pm
ಮಂಗಳೂರು : ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಸವಾಲುಗಳನ್ನು ಎದುರಿಸಲು ಶಕ್ತಿ ಸಿಗುತ್ತದೆ. ಬದುಕಿನ ಯಶಸ್ವಿಗೆ ಇದು ಸ್ಫೂರ್ತಿಯಾಗುತ್ತದೆ ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ ಹೇಳಿದರು.
Vijaya Karnataka Web kabaddi


ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಮಾತೃ ಪ್ರತಿಷ್ಠಾನ ಸಂಸ್ಥೆಯು ರಾಜ್ಯ ವಿಕಲಚೇತ®ರ ಕಬಡ್ಡಿ ಸಂಸ್ಥೆ ಮತ್ತು ಯುವಜನ ಕ್ರೀಡಾ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶೇಷಚೇತನರ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಾಜಿ ಶಾಸಕ ಜೆ.ಆರ್‌. ಲೋಬೊ ಮಾತನಾಡಿ, ವಿಶೇಷಚೇತನರಲ್ಲಿ ಆತ್ಮವಿಶ್ವಾಸ ಮೂಡಿಸುವ ಮಾತೃ ಪ್ರತಿಷ್ಠಾನ ಸಂಸ್ಥೆಯ ಕಾರ್ಯ ಸಮಾಜಕ್ಕೆ ಮಾದರಿ ಎಂದರು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಪಂದ್ಯಾಟ ಉದ್ಘಾಟಿಸಿದರು. ಇಂಡಿಯನ್‌ ರೆಡ್‌ಕ್ರಾಸ್‌ ಸೊಸೈಟಿಯ ಕರ್ನಾಟಕ ಘಟಕದ ಅಧ್ಯಕ್ಷ ಬಸ್ರೂರು ರಾಜೀವ್‌ ಶೆಟ್ಟಿ, ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಶಾಂತರಾಮ ಶೆಟ್ಟಿ, ದಾಯ್ಜಿ ವರ್ಲ್ಡ್‌ ಮುಖ್ಯಸ್ಥ ವಾಲ್ಟರ್‌ ಡಿಸೋಜ ,

ಯುವಜನ ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್‌ ಡಿಸೋಜ, ಮಾತೃ ಪ್ರತಿಷ್ಠಾನದ ಅಧ್ಯಕ್ಷ ಎಂ.ಆರ್‌.ಮಹೇಶ್‌ ಗೌಡ , ಸಂಘಟನಾ ಕಾರ್ಯದರ್ಶಿ ಡೆನ್ಸಿಲ್‌ ಫರ್ನಾಂಡಿಸ್‌ ಉಪಸ್ಥಿತರಿದ್ದರು.

ಸವಾಲೊಡ್ಡುವ ಕ್ರೀಡೆಯಾಗಿರುವ ಕಬಡ್ಡಿಯಲ್ಲಿ ದಾಳಿ ನಡೆಸಲು, ಎದುರಾಳಿಯನ್ನು ಹಿಡಿಯಲು ಬಲಿಷ್ಠ ದೈಹಿಕ ಸಾಮರ್ಥ್ಯ‌ ಮುಖ್ಯ. ಇಲ್ಲಿ ತೀರಾ ಭಿನ್ನವಾದ ಕಬಡ್ಡಿ ಪ್ರೇಕ್ಷಕರ ಗಮನ ಸೆಳೆಯಿತು. ದೈಹಿಕವಾಗಿ ಸ್ವಲ್ಪ ನ್ಯೂನತೆ ಇದ್ದ ಆಟಗಾರರು ಕಬಡ್ಡಿಯಲ್ಲಿ ತಮ್ಮ ಸಾಮರ್ಥ್ಯ‌ ಪ್ರದರ್ಶಿಸುವ ಮೂಲಕ ಅಚ್ಚರಿ ಮೂಡಿಸಿದರು. ಒಂದು ಕೈ ಇಲ್ಲದವರು, ಒಂದು ಕಾಲು ಇಲ್ಲದವರು ಕೂಡ ಕಬಡ್ಡಿ ಆಡುವ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸಿದರು.

ಪ್ರಥಮ ಬಾರಿಗೆ ಮಾತೃ ಪ್ರತಿಷ್ಠಾನ ಸಂಸ್ಥೆ ಈ ವಿಶಿಷ್ಟ ಕಬಡ್ಡಿ ಪಂದ್ಯಾಟ ಆಯೋಜಿಸಿ ವಿಶೇಷಚೇತನರು ಇತರರಿಗಿಂತ ಕಡಿಮೆ ಇಲ್ಲ ಎನ್ನುವುದನ್ನು ಸಾಬೀತುಪಡಿಸಲು ಅವಕಾಶ ನೀಡಿತು.

12 ತಂಡಗಳು : ಕರ್ನಾಟಕ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ತೆಲಂಗಾಣ, ಗೋವಾ, ಜಾರ್ಖಂಡ್‌, ತಮಿಳುನಾಡು, ಮಧ್ಯಪ್ರದೇಶ, ಪಾಂಡಿಚೇರಿ, ರಾಜಸ್ಥಾನ, ಕೇರಳ ಹೀಗೆ 12 ತಂಡಗಳು ಪಂದ್ಯದಲ್ಲಿ ಭಾಗವಹಿಸಿದ್ದವು. ಗೋವಾ ಮತ್ತು ಜಾರ್ಖಂಡ್‌ ತಂಡಗಳ ನಡುವೆ ಮೊದಲ ಪಂದ್ಯ ನಡೆಯಿತು. ಶನಿವಾರ ಲೀಗ್‌ ಪಂದ್ಯಗಳು ನಡೆದಿದ್ದು, ಭಾನುವಾರ ನಾಕೌಟ್‌ ಪಂದ್ಯಗಳು ಜರುಗಲಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ