ಆ್ಯಪ್ನಗರ

ಸೊಳ್ಳೆ ಮುಕ್ತ ಠಾಗೋರ್‌ ಪಾರ್ಕ್‌ಗೆ ದುಡಿದ ಆರೋಗ್ಯಇಲಾಖೆ !

.ಮಂಗಳೂರಿನ ಹೃದಯಭಾಗದಲ್ಲಿರುವ ಠಾಗೋರ್‌ ಪಾರ್ಕ್‌ನ ಫೌಂಟೇನ್‌ಗಳಲ್ಲಿ ಮಳೆ ನೀರು ನಿಂತು ಸೊಳ್ಳೆ ಉತ್ಪಾದನಾ ತಾಣವಾಗುತ್ತಿದೆ ಎನ್ನುವ ವಿಜಯ ಕರ್ನಾಟಕದ ವರದಿ ಇಡೀ ಆರೋಗ್ಯ ಇಲಾಖೆ ಸೇರಿದಂತೆ ಮಂಗಳೂರು ಮಹಾನಗರ ಪಾಲಿಕೆಯ ಸಿಬ್ಬಂದಿಗಳನ್ನು ಎಚ್ಚರಗೊಳಿಸುವ ಕೆಲಸವಾಗಿದೆ.

Vijaya Karnataka 27 Jun 2019, 5:00 am
ಮಂಗಳೂರು: ಮಂಗಳೂರಿನ ಹೃದಯಭಾಗದಲ್ಲಿರುವ ಠಾಗೋರ್‌ ಪಾರ್ಕ್‌ನ ಫೌಂಟೇನ್‌ಗಳಲ್ಲಿ ಮಳೆ ನೀರು ನಿಂತು ಸೊಳ್ಳೆ ಉತ್ಪಾದನಾ ತಾಣವಾಗುತ್ತಿದೆ ಎನ್ನುವ ವಿಜಯ ಕರ್ನಾಟಕದ ವರದಿ ಇಡೀ ಆರೋಗ್ಯ ಇಲಾಖೆ ಸೇರಿದಂತೆ ಮಂಗಳೂರು ಮಹಾನಗರ ಪಾಲಿಕೆಯ ಸಿಬ್ಬಂದಿಗಳನ್ನು ಎಚ್ಚರಗೊಳಿಸುವ ಕೆಲಸವಾಗಿದೆ.
Vijaya Karnataka Web 26my park (1)


ವಿಜಯ ಕರ್ನಾಟಕ ಪತ್ರಿಕೆ ಜೂ.26ರಂದು 'ಸೊಳ್ಳೆಗಳಿಗೊಂದು ಠಾಗೋರ್‌ ಪಾರ್ಕ್‌' ಹೆಸರಿನಲ್ಲಿ ಬಂದ ವರದಿಯನ್ನು ಗಮನಿಸಿದ ಆರೋಗ್ಯ ಇಲಾಖೆ ಡಿಎಚ್‌ಒ ಸೇರಿದಂತೆ ನಾನಾ ಹಿರಿಯ ಅಧಿಕಾರಿಗಳು ಬೆಳಗ್ಗೆ 9.30ಕ್ಕೆ ಠಾಗೋರ್‌ ಪಾರ್ಕ್‌ಗೆ ಭೇಟಿ ನೀಡಿದ್ದರು. ಈ ಬಳಿಕ ಬಂದ ಮನಪಾ ಸಿಬ್ಬಂದಿಗಳನ್ನು ಜತೆ ಸೇರಿಸಿಕೊಂಡು ಫೌಂಟೇನ್‌ಗಳಲ್ಲಿ ನಿಂತಿರುವ ನೀರನ್ನು ಶುಚಿಗೊಳಿಸುವುದರ ಜತೆಗೆ ಗಪ್ಪಿ ಮೀನನ್ನು ಹಾಕುವ ಮೂಲಕ ಸೊಳ್ಳೆ ನಿಯಂತ್ರಣಕ್ಕೆ ಒತ್ತು ನೀಡಿದರು.

ಬೆಳಗ್ಗೆ ಬಂದ ಡಿಎಚ್‌ಒ ಅವರ ಜತೆಗಿದ್ದ ತಂಡ ನೇರವಾಗಿ ಪ್ಲಾಸ್ಟಿಕ್‌ ಹೆಕ್ಕುವ ಕಾರ‍್ಯಕ್ಕೆ ಇಳಿದು ಬಿಟ್ಟರು. ಈ ಬಳಿಕ ಪಾರ್ಕ್‌ನ ಕಾವಲುಗಾರನಿಂದ ಪೂರ್ಣ ಪ್ರಮಾಣದಲ್ಲಿ ಫೌಂಟೇನ್‌ಗಳಿಗೆ ಇಳಿಸಿಕೊಂಡು ಕೊಳೆತು ನಾರು ನೀರನ್ನು ತೆಗೆದು ಬಳಿಕ ಹೊಸ ನೀರನ್ನು ಹಾಕಿ ಅದಕ್ಕೆ ಗಪ್ಪಿ ಮೀನನ್ನು ಹಾಕುವ ಕೆಲಸ ಮಾಡಲಾಯಿತು. ಇದರ ಜತೆಗೆ ಮನಪಾ ಸಿಬ್ಬಂದಿಗಳು ಕೂಡ ಕಸ ಹೆಕ್ಕುವ, ಗುಡಿಸುವ ಕಾರ‍್ಯವನ್ನು ಕೈಗೆತ್ತಿಕೊಂಡು ಮಧ್ಯಾಹ್ನದ ವರೆಗೆ ಪೂರ್ಣ ಪ್ರಮಾಣದಲ್ಲಿ ದುಡಿದು ಮರಳಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ