ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಲ್ಲಿ ಸುರಿದ ಮಳೆ ಭಾನುವಾರ ಕೂಡ ಮುಂದುವರಿದಿದೆ. ಹವಾಮಾನ ಇಲಾಖೆಯ ಪ್ರಕಾರ ಮತ್ತೆರಡು ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆಯಿದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ.
ಭಾನುವಾರ ಬೆಳಗ್ಗೆಯಿಂದಲೇ ಮಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣದ ಜತೆಯಲ್ಲಿ ಆಗಾಗ ಮಳೆಯಾಗಿದೆ, ಮಧ್ಯಾಹ್ನ ಬಳಿಕ ನಗರ ಭಾಗದಲ್ಲಿ ಎರಡು ಗಂಟೆಗಳ ಕಾಲ ಸುರಿದ ಮಳೆಯಿಂದ ನಗರದ ಕೆಲವು ಭಾಗದಲ್ಲಿ ಮಳೆ ನೀರು ನುಗ್ಗಿ ಸಾಕಷ್ಟು ಸಮಸ್ಯೆ ಸೃಷ್ಟಿಯಾಗಿದೆ. ನಗರದ ಹೊರವಲಯದ ಮಹಾಕಾಳಿಪಡ್ಪುವಿನಲ್ಲಿ ಸುರಿದ ಮಳೆಯ ನೀರು ರಸ್ತೆಯಲ್ಲೇ ಹರಿದುಕೊಂಡು ಹೋಗಿ ವಾಹನ ಸವಾರರಿಗೆ ಸೇರಿದಂತೆ ಪಾದಚಾರಿಗಳಿಗೆ ಬಹಳಷ್ಟು ಸಮಸ್ಯೆಯಾಯಿತು.
2024ರಲ್ಲಿ ಭವ್ಯ ರಾಮ ಮಂದಿರ ಲೋಕಾರ್ಪಣೆಗೊಳ್ಳಲಿದೆ: ಪೇಜಾವರ ಶ್ರೀ!
ಈ ಭಾಗದಲ್ಲಿ ರಸ್ತೆಯ ಕಾಮಗಾರಿಗಳು ಸಾಗುತ್ತಿರುವುದರಿಂದ ಮಳೆ ನೀರು ಹರಿದು ಹೋಗುವ ವ್ಯವಸ್ಥೆಯೇ ಇಲ್ಲವಾಗಿದೆ. ಈ ಕಾರಣದಿಂದ ರಸ್ತೆಯಲ್ಲೇ ನೀರು ಹರಿದು ಹೋಗುತ್ತಿತ್ತು. ಅತ್ತಾವರ ಕೆಎಂಸಿಯ ಬಳಿಯಲ್ಲೂಆಸ್ಪತ್ರೆಯ ಆವರಣದೊಳಗೆ ಮಳೆ ನೀರು ಸಂಗ್ರಹವಾಗಿತ್ತು. ನಗರದ ಬಹುತೇಕ ಕಡೆಯಲ್ಲಿ ಸ್ಮಾರ್ಟ್ ಸಿಟಿಯ ಕೆಲಸಗಳು ಸಾಗುತ್ತಿರುವುದರಿಂದ ಮಳೆ ನೀರು ಸರಾಗವಾಗಿ ಓಡಾಟಕ್ಕೆ ಅಡೆಯಾಗಿದೆ. ಮುಂಗಾರು ಮಳೆಯ ಪ್ರವೇಶಕ್ಕೂ ಮೊದಲೇ ಮಳೆ ನೀರಿನ ಸಮಸ್ಯೆಗಳು ಕಾಡಲಾರಂಭವಾಗಿದೆ.
ಇದೇ ರೀತಿಯಲ್ಲಿ ಗ್ರಾಮೀಣ ಭಾಗವಾದ ಪುತ್ತೂರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿ, ಮೂಡುಬಿದಿರೆ ಭಾಗದಲ್ಲಿಉತ್ತಮ ಮಳೆಯಾಗಿದೆ. ಮೂಲ್ಕಿ, ಪಣಂಬೂರು, ಮಾಣಿ, ಬೆಳ್ತಂಗಡಿ, ಪುತ್ತೂರು ಭಾಗದಲ್ಲಿ4 ಸೆಂ.ಮೀ ಮಳೆಯಾಗಿದೆ. ಮಂಗಳೂರಿನ ತಾಪಮಾನ ಕನಿಷ್ಠ 23.6 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ 30.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ನಗರದಲ್ಲಿ ಸುಸಜ್ಜಿತ ಫಾರೆಸ್ಟ್ ಕ್ವಾರ್ಟಸ್
ಮಂಗಳೂರು: ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳ ಬಹುದಿನದ ಕನಸೊಂದು ನನಸಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಅರಣ್ಯ ಇಲಾಖೆ ಸಿಬ್ಬಂದಿಗೆ ವಸತಿ ಸಮಸ್ಯೆ ಹಲವು ವರ್ಷಗಳಿಂದ ಕಾಡುತ್ತಿದ್ದು, ಮೇ 23ರಂದು ನಗರದ ಪಡೀಲ್ ಸಮೀಪ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ.
ಮಂಗಳೂರು ನಗರದಲ್ಲಿರುವ ವೃತ್ತ ಕಚೇರಿ, ವಿಭಾಗ ಕಚೇರಿ, ವಲಯ ಕಚೇರಿ ಹಾಗೂ ಅರಣ್ಯ ಸಂಚಾರಿ ದಳ, ಸಾಮಾಜಿಕ ಅರಣ್ಯ ವಿಭಾಗಕ್ಕೆ ಸೇರಿದ ನೂರಕ್ಕೂ ಹೆಚ್ಚು ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಈ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯದ್ದು ಎಂದು ಹೇಳಿಕೊಳ್ಳಲು ಇದ್ದದ್ದು ಕೇವಲ 5 ವಸತಿ ಸಮುಚ್ಛಯ. ಇದರಿಂದ ಅಧಿಕಾರಿಗಳು, ಸಿಬ್ಬಂದಿಗಳಿಗೆ ಅನಾನುಕೂಲವಾಗುತ್ತಿದ್ದು, ಅರಣ್ಯ ಇಲಾಖೆಗೆ ಪ್ರತ್ಯೇಕ ಕ್ವಾರ್ಟಸ್ ನೀಡಬೇಕೆನ್ನುವುದು ಹಲವು ಸಮಯದ ಕಸನಾಗಿತ್ತು.
2 ಕೋಟಿ ರೂ. ವೆಚ್ಚ: ಅರಣ್ಯ ಇಲಾಖೆಯ ವಸತಿ ಸಮುಚ್ಛಯ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆಗಲಿದ್ದು, ಒಂದು ವರ್ಷದೊಳಗೆ ಈ ಯೋಜನೆ ಪೂರ್ತಿಗೊಳಿಸುವ ಯೋಜನೆಯಿದೆ ಎನ್ನುತ್ತಾರೆ ವಲಯ ಅರಣ್ಯಾಧಿಕಾರಿ ಪ್ರಶಾಂತ್ ಪೈ.
ಭಾನುವಾರ ಬೆಳಗ್ಗೆಯಿಂದಲೇ ಮಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣದ ಜತೆಯಲ್ಲಿ ಆಗಾಗ ಮಳೆಯಾಗಿದೆ, ಮಧ್ಯಾಹ್ನ ಬಳಿಕ ನಗರ ಭಾಗದಲ್ಲಿ ಎರಡು ಗಂಟೆಗಳ ಕಾಲ ಸುರಿದ ಮಳೆಯಿಂದ ನಗರದ ಕೆಲವು ಭಾಗದಲ್ಲಿ ಮಳೆ ನೀರು ನುಗ್ಗಿ ಸಾಕಷ್ಟು ಸಮಸ್ಯೆ ಸೃಷ್ಟಿಯಾಗಿದೆ. ನಗರದ ಹೊರವಲಯದ ಮಹಾಕಾಳಿಪಡ್ಪುವಿನಲ್ಲಿ ಸುರಿದ ಮಳೆಯ ನೀರು ರಸ್ತೆಯಲ್ಲೇ ಹರಿದುಕೊಂಡು ಹೋಗಿ ವಾಹನ ಸವಾರರಿಗೆ ಸೇರಿದಂತೆ ಪಾದಚಾರಿಗಳಿಗೆ ಬಹಳಷ್ಟು ಸಮಸ್ಯೆಯಾಯಿತು.
2024ರಲ್ಲಿ ಭವ್ಯ ರಾಮ ಮಂದಿರ ಲೋಕಾರ್ಪಣೆಗೊಳ್ಳಲಿದೆ: ಪೇಜಾವರ ಶ್ರೀ!
ಈ ಭಾಗದಲ್ಲಿ ರಸ್ತೆಯ ಕಾಮಗಾರಿಗಳು ಸಾಗುತ್ತಿರುವುದರಿಂದ ಮಳೆ ನೀರು ಹರಿದು ಹೋಗುವ ವ್ಯವಸ್ಥೆಯೇ ಇಲ್ಲವಾಗಿದೆ. ಈ ಕಾರಣದಿಂದ ರಸ್ತೆಯಲ್ಲೇ ನೀರು ಹರಿದು ಹೋಗುತ್ತಿತ್ತು. ಅತ್ತಾವರ ಕೆಎಂಸಿಯ ಬಳಿಯಲ್ಲೂಆಸ್ಪತ್ರೆಯ ಆವರಣದೊಳಗೆ ಮಳೆ ನೀರು ಸಂಗ್ರಹವಾಗಿತ್ತು. ನಗರದ ಬಹುತೇಕ ಕಡೆಯಲ್ಲಿ ಸ್ಮಾರ್ಟ್ ಸಿಟಿಯ ಕೆಲಸಗಳು ಸಾಗುತ್ತಿರುವುದರಿಂದ ಮಳೆ ನೀರು ಸರಾಗವಾಗಿ ಓಡಾಟಕ್ಕೆ ಅಡೆಯಾಗಿದೆ. ಮುಂಗಾರು ಮಳೆಯ ಪ್ರವೇಶಕ್ಕೂ ಮೊದಲೇ ಮಳೆ ನೀರಿನ ಸಮಸ್ಯೆಗಳು ಕಾಡಲಾರಂಭವಾಗಿದೆ.
ಇದೇ ರೀತಿಯಲ್ಲಿ ಗ್ರಾಮೀಣ ಭಾಗವಾದ ಪುತ್ತೂರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿ, ಮೂಡುಬಿದಿರೆ ಭಾಗದಲ್ಲಿಉತ್ತಮ ಮಳೆಯಾಗಿದೆ. ಮೂಲ್ಕಿ, ಪಣಂಬೂರು, ಮಾಣಿ, ಬೆಳ್ತಂಗಡಿ, ಪುತ್ತೂರು ಭಾಗದಲ್ಲಿ4 ಸೆಂ.ಮೀ ಮಳೆಯಾಗಿದೆ. ಮಂಗಳೂರಿನ ತಾಪಮಾನ ಕನಿಷ್ಠ 23.6 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ 30.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ನಗರದಲ್ಲಿ ಸುಸಜ್ಜಿತ ಫಾರೆಸ್ಟ್ ಕ್ವಾರ್ಟಸ್
ಮಂಗಳೂರು: ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳ ಬಹುದಿನದ ಕನಸೊಂದು ನನಸಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಅರಣ್ಯ ಇಲಾಖೆ ಸಿಬ್ಬಂದಿಗೆ ವಸತಿ ಸಮಸ್ಯೆ ಹಲವು ವರ್ಷಗಳಿಂದ ಕಾಡುತ್ತಿದ್ದು, ಮೇ 23ರಂದು ನಗರದ ಪಡೀಲ್ ಸಮೀಪ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ.
ಮಂಗಳೂರು ನಗರದಲ್ಲಿರುವ ವೃತ್ತ ಕಚೇರಿ, ವಿಭಾಗ ಕಚೇರಿ, ವಲಯ ಕಚೇರಿ ಹಾಗೂ ಅರಣ್ಯ ಸಂಚಾರಿ ದಳ, ಸಾಮಾಜಿಕ ಅರಣ್ಯ ವಿಭಾಗಕ್ಕೆ ಸೇರಿದ ನೂರಕ್ಕೂ ಹೆಚ್ಚು ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಈ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯದ್ದು ಎಂದು ಹೇಳಿಕೊಳ್ಳಲು ಇದ್ದದ್ದು ಕೇವಲ 5 ವಸತಿ ಸಮುಚ್ಛಯ. ಇದರಿಂದ ಅಧಿಕಾರಿಗಳು, ಸಿಬ್ಬಂದಿಗಳಿಗೆ ಅನಾನುಕೂಲವಾಗುತ್ತಿದ್ದು, ಅರಣ್ಯ ಇಲಾಖೆಗೆ ಪ್ರತ್ಯೇಕ ಕ್ವಾರ್ಟಸ್ ನೀಡಬೇಕೆನ್ನುವುದು ಹಲವು ಸಮಯದ ಕಸನಾಗಿತ್ತು.
2 ಕೋಟಿ ರೂ. ವೆಚ್ಚ: ಅರಣ್ಯ ಇಲಾಖೆಯ ವಸತಿ ಸಮುಚ್ಛಯ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆಗಲಿದ್ದು, ಒಂದು ವರ್ಷದೊಳಗೆ ಈ ಯೋಜನೆ ಪೂರ್ತಿಗೊಳಿಸುವ ಯೋಜನೆಯಿದೆ ಎನ್ನುತ್ತಾರೆ ವಲಯ ಅರಣ್ಯಾಧಿಕಾರಿ ಪ್ರಶಾಂತ್ ಪೈ.