ಆ್ಯಪ್ನಗರ

ಕುಕ್ಕೆಯಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೆ; ಮನೆಗಳಿಗೆ ನುಗ್ಗಿದ ನೀರು

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗಿದೆ. ​ಭಾರಿ ಮಳೆಗೆ ಕೊಲ್ಲಮೊಗ್ರು ಹೊಳೆಯಲ್ಲಿ ಪ್ರವಾಹ ಉಂಟಾಗಿ ಕೊಲ್ಲಮೊಗ್ರು ಸೇತುವೆ ಮುಳುಗಡೆಗೊಂಡು ಸಂಚಾರ ಸ್ಥಗಿತಗೊಂಡಿತ್ತು. ಹೊಳೆಯ ನೀರು ಸಮೀಪದ ಹಲವಾರು ಮನೆಗಳಿಗೆ ನುಗ್ಗಿದೆ.

Vijaya Karnataka Web 9 Oct 2020, 6:34 am
ಸುಬ್ರಹ್ಮಣ್ಯ(ದ.ಕ.): ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಇಲ್ಲಿನ ಪರಿಸರದಲ್ಲಿ ಗುರುವಾರ ಸಂಜೆ ಗುಡುಗು, ಮಿಂಚು, ಸಿಡಿಲು ಸಹಿತ ಭಾರಿ ಮಳೆ ಸುರಿದಿದೆ.
Vijaya Karnataka Web ಸಾಂದರ್ಭಿಕ ಚಿತ್ರ


ಸಂಜೆ 6.30ರಿಂದ ಗುಡುಗು ಮಿಂಚಿನ ಅಬ್ಬರ ಆರಂಭವಾಗಿತ್ತು. ರಾತ್ರಿ 7 ಗಂಟೆಗೆ ಆರಂಭವಾದ ಭಾರಿ ಮಳೆ ಸುಮಾರು 3 ಗಂಟೆ ಕಾಲ ಎಡೆಬಿಡದೆ ಸುರಿಯಿತು.

ಸುಬ್ರಹ್ಮಣ್ಯ ಸೇರಿದಂತೆ ಇಲ್ಲಿನ ಪರಿಸರದ ಕೊಲ್ಲಮೊಗ್ರು, ಹರಿಹರ ಪಲ್ಲತ್ತಡ್ಕ, ಕಲ್ಮಕಾರು, ಬಾಳುಗೋಡು, ನಡುಗಲ್ಲು, ಗುತ್ತಿಗಾರು, ಪಂಜ, ವಳಲಂಬೆ, ಕಮಿಲ, ಬಳ್ಪ, ಬೀದಿಗುಡ್ಡೆ, ಕೇನ್ಯ, ನಿಂತಿಕಲ್ಲು ಮತ್ತಿತರ ಕಡೆ ಅಬ್ಬರದ ಮಳೆಯಾಯಿತು.

ಕೊಲ್ಲಮೊಗ್ರು ಸೇತುವೆ ಬಂದ್‌
ಭಾರಿ ಮಳೆಗೆ ಕೊಲ್ಲಮೊಗ್ರು ಹೊಳೆಯಲ್ಲಿ ಪ್ರವಾಹ ಉಂಟಾಗಿ ಕೊಲ್ಲಮೊಗ್ರು ಸೇತುವೆ ಮುಳುಗಡೆಗೊಂಡು ಸಂಚಾರ ಸ್ಥಗಿತಗೊಂಡಿತ್ತು. ಹೊಳೆಯ ನೀರು ಸಮೀಪದ ಹಲವಾರು ಮನೆಗಳಿಗೆ ನುಗ್ಗಿದೆ.

ಸುಬ್ರಹ್ಮಣ್ಯ ದರ್ಪಣ ತೀರ್ಥ ನದಿ ಪ್ರವಾಹದಿಂದ ತುಂಬಿ ಹರಿಯಿತು. ಕೃಷಿ ತೋಟಗಳಿಗೆ ಮಳೆ ನೀರು ನುಗ್ಗಿದ ಕಾರಣ ಕೃಷಿಕರು ತೋಟಕ್ಕೆ ಹಾಕಿದ್ದ ಗೊಬ್ಬರ ನೀರು ಪಾಲಾಯಿತು. ತೋಟದಲ್ಲಿದ್ದ ಫಸಲುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.

ಭಾರಿ ಮಳೆಗೆ ಆದಿ ಸುಬ್ರಹ್ಮಣ್ಯದಲ್ಲಿಅಂಗಡಿ- ಮುಂಗಟ್ಟುಗಳಿಗೆ ಹಾಗೂ ಸುಬ್ರಹ್ಮಣ್ಯ ಪೇಟೆಯ ವಸತಿಗೃಹ ಹಾಗೂ ಮನೆಗಳಿಗೆ ನೀರು ನುಗ್ಗಿದೆ.

ಹಗಲು ಬಿಸಿಲು ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಇಲ್ಲಿನ ಪರಿಸರದಲ್ಲಿ ಸಂಜೆ 5 ಗಂಟೆ ತನಕ ಬಿಸಿಲಿನ ವಾತಾವರಣ ಇತ್ತು. ಬಳಿಕ ಒಮ್ಮಿಂದೊಮ್ಮೆಲೆ ಭಾರಿ ಮೋಡ ಕವಿದು ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ಸುರಿಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ