ಆ್ಯಪ್ನಗರ

ರಾಮ ಮಂದಿರದಲ್ಲಿ ಮದುವೆ, ಮಸೀದಿಯಲ್ಲಿ ಇಫ್ತಾರ್

ಕೋಡಪದವಿನ ಕುಕ್ಕಿಲದ ನಿವಾಸಿ, ನವ ವಿವಾಹಿತ ಧನಂಜಯ್‌ ಶುಕ್ರವಾರ ಕುಕ್ಕಿಲ ಮಸೀದಿಯಲ್ಲಿ ಮುಸ್ಲಿಂ ಬಾಂಧವರಿಗೆ ಇಫ್ತಾರ್‌ ಕೂಟವನ್ನು ಆಯೋಜಿದ್ದರು. ಈ ಸಂದರ್ಭ ಕೋಡಪದವು ಹಾಗೂ ಕುಕ್ಕಿಲ ಜಮಾಅತ್‌ನ ಸುಮಾರು 150 ಮಂದಿ ಕುಕ್ಕಿಲ ಮಸೀದಿಯಲ್ಲಿ ಇಫ್ತಾರ್‌ ಕೂಟದಲ್ಲಿ ಭಾಗವಹಿಸಿದ್ದರು.

Vijaya Karnataka 12 May 2019, 9:40 am
ಬಂಟ್ವಾಳ: ಹಿಂದೂ ಯುವಕನೊಬ್ಬ ತನ್ನ ಮದುವೆಯ ಔತಣಕೂಟದ ಅಂಗವಾಗಿ ಮಸೀದಿಯಲ್ಲಿ ಮುಸ್ಲಿಮರಿಗೆ ಇಫ್ತಾರ್‌ ಕೂಟ ಏರ್ಪಡಿಸುವ ಮೂಲಕ ಸೌಹಾರ್ದ ಮೆರೆದಿದ್ದಾರೆ.
Vijaya Karnataka Web marriage 111


ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಕೋಡಪದವು ಸಮೀಪದ ಕುಕ್ಕಿಲ ಎಂಬಲ್ಲಿ ಹೀಗೊಂದು ಕಾರ್ಯಕ್ರಮ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕೋಡಪದವಿನ ಕುಕ್ಕಿಲದ ನಿವಾಸಿ, ನವ ವಿವಾಹಿತ ಧನಂಜಯ್‌ ಶುಕ್ರವಾರ ಕುಕ್ಕಿಲ ಮಸೀದಿಯಲ್ಲಿ ಮುಸ್ಲಿಂ ಬಾಂಧವರಿಗೆ ಇಫ್ತಾರ್‌ ಕೂಟವನ್ನು ಆಯೋಜಿದ್ದರು. ಈ ಸಂದರ್ಭ ಕೋಡಪದವು ಹಾಗೂ ಕುಕ್ಕಿಲ ಜಮಾಅತ್‌ನ ಸುಮಾರು 150 ಮಂದಿ ಕುಕ್ಕಿಲ ಮಸೀದಿಯಲ್ಲಿ ಇಫ್ತಾರ್‌ ಕೂಟದಲ್ಲಿ ಭಾಗವಹಿಸಿದ್ದರು.

ಕೋಡಪದವಿನ ಕುಕ್ಕಿಲದ ನಿವಾಸಿ ಜತ್ತನ್ನ(ಜತ್ತು ಮೇಸ್ತ್ರಿ) ಅವರ ಪುತ್ರ ಧನಂಜಯ್‌ ಅವರಿಗೆ ಪೆರ್ಲದ ನಿವಾಸಿ ಮಾಲತಿ ಎಂಬವರ ಜತೆ ಮೇ 8ರಂದು ವಿಟ್ಲ ಶ್ರೀರಾಮ ಮಂದಿರಲ್ಲಿ ಮದುವೆ ನಡೆದಿತ್ತು. ಮದುವೆಗೆ ಊರಿನ ಎಲ್ಲರನ್ನೂ ಆಹ್ವಾನಿಸಲಾಗಿತ್ತು. ಈ ಸಂದರ್ಭ ಊರಿನ ಮುಸ್ಲಿಮರು ಮದುವೆಗೆ ಬಂದು ಶುಭ ಹಾರೈಸಿ ತೆರಳಿದ್ದರು.

ರಮ್ಜಾನ್‌ ಉಪವಾಸದ ಕಾರಣ ಮದುವೆ ಔತಣಕೂಟದಲ್ಲಿ ಮುಸ್ಲಿಂ ಬಾಂಧವರು ಭಾಗವಹಿಸಿರಲಿಲ್ಲ. ಈ ನಿಟ್ಟಿನಲ್ಲಿ ಕುಕ್ಕಿಲದ ಮಸೀದಿಯಲ್ಲಿ ಇಫ್ತಾರ್‌ ಕೂಟವನ್ನು ಧನಂಜಯ್‌ ಏರ್ಪಡಿಸಿದ್ದು ಶ್ಲಾಘನೆಗೆ ಪಾತ್ರವಾಗಿದೆ.

'ಸೌಹಾರ್ದತೆಗೆ ಬೇಕು ಮೂಲ ಮನಸು, ಜನರು ಮೆಚ್ಚುತ್ತಾರೆ ಜಾತಿ-ಭೇದವಿಲ್ಲದ ಮನಸು' ಎಂಬ ಶೀರ್ಷಿಕೆಯೊಂದಿಗೆ ಧನಂಜಯ್‌ ಅವರ ವೈವಾಹಿಕ ಜೀವನಕ್ಕೆ ಶುಭ ಹಾರೈಕೆ ಹಾಗೂ ಜನರ ಪ್ರಶಂಸೆಗೆ ಪಾತ್ರವಾದ ಬರಹಗಳು ಸಾಮಾಜಿಕ ಜಾಲತಾಣಗಳಲ್ಲಿ ಈಗ ಹರಿದಾಡುತ್ತಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ