ಮೂಲ್ಕಿ (ದ.ಕ.) : ನಗರ ವ್ಯಾಪ್ತಿಯ ಚಿತ್ರಾಪು ಬಳಿಯ ಮನೆಯೊಂದರ ಬಾವಿಯಲ್ಲಿ ಮಂಗಳವಾರ ಬೆಳಿಗ್ಗೆ ಬಿಸಿ ನೀರು ಕಂಡುಬಂದಿದ್ದು, ಭೂಗರ್ಭ ವಿಜ್ಞಾನಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಯೋಗಾಲಯದಲ್ಲಿ ಪರಿಶೀಲಿಸಲು ನೀರನ್ನು ಕೊಂಡೊಯ್ದಿದ್ದಾರೆ.
ಚಿತ್ರಾಪುವಿನ ಗಜನಿ ಬಳಿಯ ಕೆರೀಬಿಯನ್ ರೆಸಾರ್ಟ್ ಸಮೀಪದ ಮುಂಡೇವುಗುಂಡಿಯ ಅಪ್ಪಿ ಎಂಬವರ ಮನೆ ಬಾವಿಯಲ್ಲಿ ಬಿಸಿ ನೀರು ಕಂಡು ಬಂದಿದೆ. ಮಂಗಳವಾರ ಬೆಳಿಗ್ಗೆ ತುಳಸಿಕಟ್ಟೆಗೆ ನೀರಿಡಲು ಬಾವಿಯಿಂದ ರಾಟೆಯ ಮೂಲಕ ನೀರೆತ್ತುವ ಸಂದರ್ಭ ಬಾವಿಯಲ್ಲಿ ಹೊಗೆ ಕಂಡು ಬಂದಿತ್ತು. ಆಶ್ಚರ್ಯಚಕಿತರಾದ ಅವರು ಮನೆಯವರಿಗೆ ಮತ್ತು ನೆರೆಕರೆಯವರಿಗೆ ಮಾಹಿತಿ ನೀಡಿ ಬಾವಿಯಿಂದ ನೀರೆತ್ತಿ ಪರಿಶೀಲಿಸಿದಾಗ ನೀರು ತುಂಬಾ ಬಿಸಿಯಾಗಿತ್ತು. ಹೆದರಿದ ಅವರು ಮೂಲ್ಕಿ ತಹಶೀಲ್ದಾರ್ ಮಾಣಿಕ್ಯ ಎಮ್.ರವರಿಗೆ ಮಾಹಿತಿ ನೀಡಿದ್ದರು.
ತಹಶೀಲ್ದಾರ್ ಬಂದು ಪರಿಶೀಲಿಸಿ ಭೂಗರ್ಭ ವಿಜ್ಞಾನ ಇಲಾಖೆಗೆ ಮಾಹಿತಿ ರವಾನಿಸಿದ್ದರು. ಅದರಂತೆ ಮಂಗಳವಾರ ಸಂಜೆ ಮಂಗಳೂರು ಗಣಿ ಮತ್ತು ಭೂಗರ್ಭ ವಿಜ್ಞಾನ ಇಲಾಖೆಯ ಅಧಿಕಾರಿಗಳಾದ ಉಪ ನಿರ್ದೇಶಕಿ ಪದ್ಮಶ್ರೀ, ಭೂ ವಿಜ್ಞಾನಿ ಮೂರ್ತಿ ಬಿ.ಕೆ. ಮತ್ತು ನಿವೃತ್ತ ಹಿರಿಯ ವಿಜ್ಞಾನಿ ಡಾ.ರವೀಂದ್ರ ಆಗಮಿಸಿ ಪರಿಶೀಲಿಸಿದರು.
ಈ ಬಗ್ಗೆ ವಿಕದೊಂದಿಗೆ ಮಾತನಾಡಿದ ಡಾ. ರವೀಂದ್ರ, ಕರಾವಳಿಯಲ್ಲಿ ಅಲ್ಲಲ್ಲಿ ಇಂತಹ ಘಟನೆಗಳು ನಡೆದಿವೆ. ಎರಡು ಮೂರು ವರ್ಷದ ಹಿಂದೆ ಪೊಳಲಿಯಲ್ಲಿ ಇಂತಹುದೇ ಘಟನೆ ನಡೆದಿತ್ತು. ಎರಡು ಮೂರು ದಿನಗಳ ಬಳಿಕ ನೀರು ಸಾಮಾನ್ಯ ಸ್ಥಿತಿಗೆ ತಲುಪುತ್ತದೆ. ಇದರಿಂದ ಯಾವುದೇ ಸಮಸ್ಯೆ ಇಲ್ಲ. ನೀರಿನಲ್ಲಿ ಸ್ವಲ್ಪ ಗಂಧಕದ ಅಂಶ ಇರುವ ಸಾಧ್ಯತೆ ಇದೆ. ನೀರನ್ನು ಪರಿಶೀಲನೆಗಾಗಿ ಕೊಂಡೊಯ್ದಿದ್ದು, ಪ್ರಯೋಗಾಲಯದ ತಪಾಸಣೆ ಬಳಿಕ ನಿಖರ ಕಾರಣ ತಿಳಿಯಲಿದೆ ಎಂದಿದ್ದಾರೆ.
ಈ ಬಾವಿಯ ಸನಿಹದಲ್ಲೇ ಅಕ್ಕಪಕ್ಕದ ಮನೆಗಳ ಬಾವಿಗಳಿದ್ದರೂ ಬೇರೆ ಯಾವುದೇ ಬಾವಿಗಳಲ್ಲಿ ಬಿಸಿ ನೀರು ಕಂಡು ಬಂದಿಲ್ಲ. ಪರಿಶೀಲನೆಗಾಗಿ ಇತರ ಬಾವಿಗಳ ನೀರನ್ನೂ ಪಡೆಯಲಾಗಿದೆ. 3 ವರ್ಷಗಳ ಹಿಂದೆ ನಿರ್ಮಿಸಿದ ಬಾವಿ ಇದಾಗಿದ್ದು, ಇಲ್ಲಿ ಅಥವಾ ಈ ಭಾಗದ ಇತರ ಯಾವುದೇ ಬಾವಿಗಳಲ್ಲಿ ಇಂತಹ ಘಟನೆ ನಡೆದಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮೂಲ್ಕಿ ಆರ್ಐ ದಿಲೀಪ್ ರೋಡ್ಕರ್, ವಿಎ ಪ್ರದೀಪ್ ಶೆಣೈ ಜತೆಗಿದ್ದರು.
ಚಿತ್ರಾಪುವಿನ ಗಜನಿ ಬಳಿಯ ಕೆರೀಬಿಯನ್ ರೆಸಾರ್ಟ್ ಸಮೀಪದ ಮುಂಡೇವುಗುಂಡಿಯ ಅಪ್ಪಿ ಎಂಬವರ ಮನೆ ಬಾವಿಯಲ್ಲಿ ಬಿಸಿ ನೀರು ಕಂಡು ಬಂದಿದೆ. ಮಂಗಳವಾರ ಬೆಳಿಗ್ಗೆ ತುಳಸಿಕಟ್ಟೆಗೆ ನೀರಿಡಲು ಬಾವಿಯಿಂದ ರಾಟೆಯ ಮೂಲಕ ನೀರೆತ್ತುವ ಸಂದರ್ಭ ಬಾವಿಯಲ್ಲಿ ಹೊಗೆ ಕಂಡು ಬಂದಿತ್ತು. ಆಶ್ಚರ್ಯಚಕಿತರಾದ ಅವರು ಮನೆಯವರಿಗೆ ಮತ್ತು ನೆರೆಕರೆಯವರಿಗೆ ಮಾಹಿತಿ ನೀಡಿ ಬಾವಿಯಿಂದ ನೀರೆತ್ತಿ ಪರಿಶೀಲಿಸಿದಾಗ ನೀರು ತುಂಬಾ ಬಿಸಿಯಾಗಿತ್ತು. ಹೆದರಿದ ಅವರು ಮೂಲ್ಕಿ ತಹಶೀಲ್ದಾರ್ ಮಾಣಿಕ್ಯ ಎಮ್.ರವರಿಗೆ ಮಾಹಿತಿ ನೀಡಿದ್ದರು.
ತಹಶೀಲ್ದಾರ್ ಬಂದು ಪರಿಶೀಲಿಸಿ ಭೂಗರ್ಭ ವಿಜ್ಞಾನ ಇಲಾಖೆಗೆ ಮಾಹಿತಿ ರವಾನಿಸಿದ್ದರು. ಅದರಂತೆ ಮಂಗಳವಾರ ಸಂಜೆ ಮಂಗಳೂರು ಗಣಿ ಮತ್ತು ಭೂಗರ್ಭ ವಿಜ್ಞಾನ ಇಲಾಖೆಯ ಅಧಿಕಾರಿಗಳಾದ ಉಪ ನಿರ್ದೇಶಕಿ ಪದ್ಮಶ್ರೀ, ಭೂ ವಿಜ್ಞಾನಿ ಮೂರ್ತಿ ಬಿ.ಕೆ. ಮತ್ತು ನಿವೃತ್ತ ಹಿರಿಯ ವಿಜ್ಞಾನಿ ಡಾ.ರವೀಂದ್ರ ಆಗಮಿಸಿ ಪರಿಶೀಲಿಸಿದರು.
ಈ ಬಗ್ಗೆ ವಿಕದೊಂದಿಗೆ ಮಾತನಾಡಿದ ಡಾ. ರವೀಂದ್ರ, ಕರಾವಳಿಯಲ್ಲಿ ಅಲ್ಲಲ್ಲಿ ಇಂತಹ ಘಟನೆಗಳು ನಡೆದಿವೆ. ಎರಡು ಮೂರು ವರ್ಷದ ಹಿಂದೆ ಪೊಳಲಿಯಲ್ಲಿ ಇಂತಹುದೇ ಘಟನೆ ನಡೆದಿತ್ತು. ಎರಡು ಮೂರು ದಿನಗಳ ಬಳಿಕ ನೀರು ಸಾಮಾನ್ಯ ಸ್ಥಿತಿಗೆ ತಲುಪುತ್ತದೆ. ಇದರಿಂದ ಯಾವುದೇ ಸಮಸ್ಯೆ ಇಲ್ಲ. ನೀರಿನಲ್ಲಿ ಸ್ವಲ್ಪ ಗಂಧಕದ ಅಂಶ ಇರುವ ಸಾಧ್ಯತೆ ಇದೆ. ನೀರನ್ನು ಪರಿಶೀಲನೆಗಾಗಿ ಕೊಂಡೊಯ್ದಿದ್ದು, ಪ್ರಯೋಗಾಲಯದ ತಪಾಸಣೆ ಬಳಿಕ ನಿಖರ ಕಾರಣ ತಿಳಿಯಲಿದೆ ಎಂದಿದ್ದಾರೆ.
ಈ ಬಾವಿಯ ಸನಿಹದಲ್ಲೇ ಅಕ್ಕಪಕ್ಕದ ಮನೆಗಳ ಬಾವಿಗಳಿದ್ದರೂ ಬೇರೆ ಯಾವುದೇ ಬಾವಿಗಳಲ್ಲಿ ಬಿಸಿ ನೀರು ಕಂಡು ಬಂದಿಲ್ಲ. ಪರಿಶೀಲನೆಗಾಗಿ ಇತರ ಬಾವಿಗಳ ನೀರನ್ನೂ ಪಡೆಯಲಾಗಿದೆ. 3 ವರ್ಷಗಳ ಹಿಂದೆ ನಿರ್ಮಿಸಿದ ಬಾವಿ ಇದಾಗಿದ್ದು, ಇಲ್ಲಿ ಅಥವಾ ಈ ಭಾಗದ ಇತರ ಯಾವುದೇ ಬಾವಿಗಳಲ್ಲಿ ಇಂತಹ ಘಟನೆ ನಡೆದಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮೂಲ್ಕಿ ಆರ್ಐ ದಿಲೀಪ್ ರೋಡ್ಕರ್, ವಿಎ ಪ್ರದೀಪ್ ಶೆಣೈ ಜತೆಗಿದ್ದರು.