ಆ್ಯಪ್ನಗರ

ಸೀಫುಡ್‌ ಪಾರ್ಕ್ ಯೋಜನೆ ಕೈ ಬಿಡದಿದ್ದಲ್ಲಿ ‘ಚಲೋ ಪುತ್ತೂರು ಅಭಿಯಾನ’; ಹೋರಾಟಗಾರರ ಎಚ್ಚರಿಕೆ..!

ಶಾಸಕರಿಗೆ, ಸಂಸದರಿಗೆ ಇಚ್ಚಾಶಕ್ತಿ ಇದ್ದಲ್ಲಿ ಜಿಲ್ಲೆಯ ಜನರ ಬೇಡಿಕೆಯಾದ ಬನ್ನೂರಿನಲ್ಲಿ ಸರ್ಕಾರಿ ಮೆಡಿಕಲ್‌ ಕಾಲೇಜು ಸ್ಥಾಪನೆ ಮಾಡಬೇಕು. ಇಲ್ಲಿ ಕಾಲೇಜು ಸ್ಥಾಪಿಸಿ ಅದಕ್ಕೆ ದಾರ್ಶನಿಕರಾದ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಅವರ ಹೆಸರಿಡಬೇಕು, ಅದು ಗುರುಗಳಿಗೆ ಸಲ್ಲುವ ನಿಜವಾದ ಗೌರವ. ಯಾವುದೋ ಸಣ್ಣಪುಟ್ಟ ಸರ್ಕಲ್‌ಗಳಿಗೆ ಹೆಸರಿಡೋದಲ್ಲ ಎಂದು ಮುನೀರ್ ಕಾಟಿಪಳ್ಳ ಹೇಳಿದರು.

Vijaya Karnataka Web 20 Nov 2020, 11:59 am
ಪುತ್ತೂರು: ಪುತ್ತೂರಿನ ಬನ್ನೂರಿನಲ್ಲಿ ಸೀ ಫುಡ್‌ ಪಾರ್ಕ್ ನಿರ್ಮಿಸಲು ಮುಂದಾಗಿದ್ದು, ಇದಕ್ಕಾಗಿ ಸರಕಾರಿ ಮೆಡಿಕಲ್‌ ಕಾಲೇಜಿಗೆ ಮೀಸಲಿಟ್ಟ ಜಾಗ ಬಳಸಿಕೊಳ್ಳಲು ಮುಂದಾಗಿರುವುದು ತಪ್ಪು. ಸೀ ಫುಡ್‌ ಪಾರ್ಕ್ ಮೂಲಕ ಜನರ ಆರೋಗ್ಯದ ಹಕ್ಕನ್ನು ಕಸಿಯುವ ಯತ್ನ ನಡೆಯುತ್ತಿದೆ. ಸರಕಾರ ಜಮೀನು ಹಸ್ತಾಂತರ ಪ್ರಕ್ರಿಯೆ ಕೈ ಬಿಡದಿದ್ದಲ್ಲಿ ಸಾವಿರಾರು ಜನರನ್ನು ಸೇರಿ ಪುತ್ತೂರು ಚಲೋ ಅಭಿಯಾನ ನಡೆಸಲಾಗುವುದು ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ ಎಚ್ಚರಿಸಿದ್ದಾರೆ.
Vijaya Karnataka Web puttur chalo


ಸರಕಾರ ಕೂಡಲೇ ಜೈನ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು: ಮಾಜಿ ಸಚಿವ ಅಭಯಚಂದ್ರ ಜೈನ್‌

ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಮೀಸಲಿರಿಸಿದ ಸ್ಥಳದಲ್ಲಿ ಸೀ ಫುಡ್‌ ಪಾರ್ಕ್ ಮಾಡಲು ಹೊರಟಿರುವುದನ್ನು ವಿರೋಧಿಸಿ ಪುತ್ತೂರು ಬಸ್‌ ನಿಲ್ದಾಣ ಸಮೀಪದ ಗಾಂಧಿ ಕಟ್ಟೆ ಎದುರು ಗುರುವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಶಾಸಕರಿಗೆ ಮತ್ತು ಸಂಸದರಿಗೆ ಮತ ನೀಡಿದ ಮತದಾರರಿಗೆ ದ್ರೋಹ ಬಗೆಯುವ ಕೆಲಸ ಮಾಡಲಾಗುತ್ತಿದೆ. ಇದರ ವಿರುದ್ಧ ಉಗ್ರ ಹೋರಾಟ ಅನಿವಾರ್ಯ. ಸರಕಾರಿ ಮೆಡಿಕಲ್‌ ಕಾಲೇಜಿಗಾಗಿ 40 ಎಕರೆ ಜಾಗ ಮೀಸಲಿಡಲಾಗಿದೆ. ಇದನ್ನು ಇಲ್ಲವಾಗಿಸುವ ಯತ್ನ ನಡೆದಿದೆ ಎಂದು ಆರೋಪಿಸಿದರು.

ಕ್ರೈಸ್ತ ಅಭಿವೃದ್ಧಿ ನಿಗಮ ಮರುಸ್ಥಾಪನೆ ಮಾಡದಿದ್ದರೆ ಬೀದಿಗಿಳಿದು ಹೋರಾಟ: ಐವನ್

ಇನ್ನು ಇದರ ಹಿಂದೆ ಖಾಸಗಿ ಮೆಡಿಕಲ್‌ ಕಾಲೇಜುಗಳ ಲಾಬಿ ಇದೆ. ಅವರ ಲಾಬಿಗೆ ಮಣಿದಿರುವ ಶಾಸಕರು ಮತ್ತು ಸಂಸದರು ಇದೀಗ, ಸರಕಾರಿ ಮೆಡಿಕಲ್‌ ಕಾಲೇಜಿನ ಆಸೆಯನ್ನೇ ಶಾಶ್ವತವಾಗಿ ಇಲ್ಲವಾಗಿಸುವ ಕೆಲಸ ಮಾಡುತ್ತಿದ್ದಾರೆ. ಶಾಸಕರಿಗೆ, ಸಂಸದರಿಗೆ ಇಚ್ಚಾಶಕ್ತಿ ಇದ್ದಲ್ಲಿ ಬನ್ನೂರಿನಲ್ಲಿ ಸರ್ಕಾರಿ ಮೆಡಿಕಲ್‌ ಕಾಲೇಜು ಸ್ಥಾಪನೆ ಮಾಡಬೇಕು. ಇದು ಜಿಲ್ಲೆಯ ಜನರ ಬೇಡಿಕೆ. ಇಲ್ಲಿ ಕಾಲೇಜು ಸ್ಥಾಪಿಸಿ ಅದಕ್ಕೆ ದಾರ್ಶನಿಕರಾದ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಅವರ ಹೆಸರಿಡಬೇಕು ಎಂದವರು ಆಗ್ರಹಿಸಿದರು.

ಮಾರ್ಚ್‌ ಅಂತ್ಯದೊಳಗೆ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಮಾಡುತ್ತೇವೆ; ಸಚಿವ ಪ್ರಭು ಚವ್ಹಾಣ್

ಪ್ರಮುಖರಾದ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಸ್ಥಳೀಯರು ಮಾತ್ರವಲ್ಲದೆ ಹಲವಾರು ಸಂಘಟನೆಗಳು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿವೆ. ಇದರ ಬದಲು ರೈತರಿಗೆ ಪೂರಕವಾದ ಅಡಕೆ, ಕೊಕ್ಕೋ ಗಾರ್ಬಲ್‌ಗಳನ್ನು ಮಾಡಿದ್ದರೆ ಈ ಭಾಗದ ರೈತರಿಗೆ ಅನುಕೂಲವಾಗುತ್ತಿತ್ತು ಎಂದರು. ಸಿ ಫುಡ್‌ ಪಾರ್ಕ್ ನಿರ್ಮಾಣಗೊಂಡಲ್ಲಿಅಲ್ಲಿ ಉತ್ಪಾದನೆಯಾಗಲಿರುವ ಟನ್‌ಗಟ್ಟಲೆ ಮೀನಿನ ತ್ಯಾಜ್ಯ ಹಾಗೂ ತ್ಯಾಜ್ಯ ನೀರುಗಳನ್ನು ಕುಮಾರಧಾರ ನದಿಗೆ ಬಿಡಬೇಕಾಗುತ್ತದೆ. ಕುಡಿಯುವ ನೀರು ಒದಗಿಸುವ ಕುಮಾರಧಾರ ಮಲಿನವಾಗಲಿದೆ. ಸೀ ಫುಡ್‌ ಪಾರ್ಕ್ ಸಾಧಕ-ಬಾಧಕ ತಿಳಿದುಕೊಂಡು ಯೋಜನೆ ಕೈ ಬಿಡಬೇಕು ಎಂದರು ಆಗ್ರಹಿಸಿದರು.

ಮಂಗಳೂರಿನ ಪಡೀಲ್‌ ಅಂಡರ್‌ಪಾಸ್‌ನಲ್ಲಿ ಮುಂದೆ ಹೋಗಲಾಗದೆ ನಿಂತ ಲಾರಿ; ಸಂಚಾರ ಅಸ್ತವ್ಯಸ್ತ..!

ಮುಖಂಡರಾದ ರವಿಕಿರಣ ಪುಣಚ, ಶ್ರೀಧರ ಶೆಟ್ಟಿ ಬೈಲುಗುತ್ತು, ಡಾ. ರಾಘವೇಂದ್ರ ಪ್ರಸಾದ್‌ ಬಂಗಾರಡ್ಕ, ಅಶ್ರಫ್‌ ಕಲ್ಲೇಗ, ಇಬ್ರಾಹಿಂ ಗೋಳಿಕಟ್ಟೆ ಗಿರಿಧರ ನಾಯ್ಕ್, ಶಿವಣ್ಣ ಗೌಡ ಇಡ್ಯಾಡಿ, ಐ.ಸಿ. ಕೈಲಾಸ್‌, ಅಶ್ರಫ್‌ ಕೊಟ್ಯಾಡಿ, ಪ್ಯಾಟ್ರಿಕ್‌ ಸಿಪ್ರಿಯಾನ್‌, ಯು.ಟಿ. ತೌಸೀಫ್‌, ಸುದರ್ಶನ ಗೌಡ ಕಂಪ, ಪ್ರಭಾಕರ ಸಾಲ್ಯಾನ್‌, ರಾಮಣ್ಣ ವಿಟ್ಲ, ಅಪ್ತಾಫ್‌ ತುಂಬೆ, ಕೃಷ್ಣ ನಿಡ್ಪಳ್ಳಿ, ಲ್ಯಾನ್ಸಿ ಮಸ್ಕರೇನಸ್‌, ಸದಾನಂದ ಶೆಟ್ಟಿ ಕೂರೇಲು, ಕೇಶವ ಪೂಜಾರಿ ಬೆದ್ರಾಳ, ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ