ಆ್ಯಪ್ನಗರ

ಇಂಜಿನ್‌ ಕೆಟ್ಟುನಿಂತ ಸೇನಾನೌಕೆ ಸಿಬ್ಬಂದಿಯನ್ನು ರಕ್ಷಿಸಿದ ರಾಜಧೂತ್‌ ಗಸ್ತುಹಡಗು

ಸುಮಾರು 30 ನಾಟಿಕಲ್‌ ಮೈಲಿ ದೂರದಲ್ಲಿ ಇಂಜಿನ್‌ ಕೆಟ್ಟು ನಿಂತಿದ್ದ ಸೇನಾ ನೌಕೆಯಲ್ಲಿ 23 ಜನ ಸಿಬ್ಬಂದಿ ಅಪಾಯದಲ್ಲಿ ಸಿಲುಕಿದ್ದರು. ಕೂಡಲೇ ರಾಜಧೂತ್‌ ಗಸ್ತು ಹಡಗು ಸ್ಥಳಕ್ಕೆ ಧಾವಿಸಿ ರಕ್ಷಣಾ ನೌಕಾ ಸಿಬ್ಬಂದಿಯನ್ನು ರಕ್ಷಿಸಿದೆ.

Vijaya Karnataka Web 18 Sep 2019, 3:49 pm
ಮಂಗಳೂರು: ಇಂಜಿನ್‌ ಕೆಟ್ಟುನಿಂತ ಭಾರತೀಯ ನೌಕಾ ಸೇನೆಯ ಹಡಗಿನಲ್ಲಿ ಸಿಲುಕಿಕೊಂಡಿದ್ದ 23 ಜನ ಸಿಬ್ಬಂದಿಯನ್ನು ನೌಕಾದಳದ ಮತ್ತೊಂದು ಹಡಗು ರಾಜಧೂತ್‌ ರಕ್ಷಿಸಿದೆ. ಮಂಗಳೂರು ಸಮುದ್ರದಡದಿಂದ 30 ನಾಟಿಕಲ್‌ ಮೈಲಿ ದೂರದಲ್ಲಿ ಮಂಗಳವಾರ ನೌಕಾದಳದ ಐಎಫ್‌ಬಿ ಎನ್‌ಎಸ್‌ಜಿ ಹಡಗಿನ ಇಂಜಿನ್‌ ಕೆಟ್ಟು ನಿಂತಿತ್ತು. ಅದರಲ್ಲಿದ್ದ 23 ಸಿಬ್ಬಂದಿಗಳು ಇದರಿಂದ ಕಂಗಾಲಾಗಿದ್ದರು. ಗೋವಾ ಮತ್ತು ಬಕರ್ನಾಟಕ ನಡುವೆ ಗಸ್ತು ತಿರುಗುತ್ತಿದ್ದ ರಾಜಧೂತ್‌ ಗಸ್ತು ಹಡಗು ಕೂಡಲೇ ಐಎಫ್‌ಬಿ ಎನ್‌ಎಸ್‌ಜಿ ಬಳಿ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಮೊದಲಿಗೆ ಅಪಾಯದಲ್ಲಿ ನೌಕಾ ಸಿಬ್ಬಂದಿಯನ್ನು ರಕ್ಷಿಸಿದೆ. ಕೆಟ್ಟು ನಿಂತಿರುವ ಹಡಗಿಗೆ ತಾಂತ್ರಿಕ ನೆರವು ನೀಡಲಾದರೂ, ಇಂಜಿನ್‌ ರಿಪೇ ರಿಯಾಗಿಲ್ಲ.
Vijaya Karnataka Web coast guard


ಸನಿಹದಲ್ಲೇ ಇದ್ದ ಕಣ್ಗಾವಲು ಹಡಗು ಐಎಫ್‌ಬಿ ಪವನಸುತ ಕ್ಕೆ, ಕೆಟ್ಟು ನಿಂತ ಹಡಗನ್ನು ತಳ್ಳಿಕೊಂಡು ಬರುವಂತೆ ಸೂಚಿಸಲಾಯಿತು. ರಕ್ಷಣಾ ಕಾರ್ಯದಲ್ಲಿ ಐಎಫ್‌ಬಿ ಎಸ್‌ಡಿವೈ ಹಡಗು ಕೂಡ ಸಹಾಯ ಮಾಡಿತ್ತು. ಕೆಟ್ಟು ನಿಂತ ನೌಕಾ ಹಡಗನ್ನು ಭಟ್ಕಳ ಬಂದರಿಗೆ ತರಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ