ಆ್ಯಪ್ನಗರ

ಸಮುದ್ರದಲ್ಲಿ ಸಿಲುಕಿದ್ದ 24 ಮೀನುಗಾರರ ರಕ್ಷಿಸಿದ ಕೋಸ್ಟ್‌ಗಾರ್ಡ್‌

ಹೊನ್ನಾವರ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ 24 ಮೀನುಗಾರರು ಸಮುದ್ರ ದಡದಿಂದ 15 ನಾಟಿಕಲ್‌ ದೂರದಲ್ಲಿ ಅಪಾಯಕ್ಕೆ ಸಿಲುಕಿದ್ದು, ಅವರನ್ನು ಮಂಗಳೂರಿನ ಕೋರ್ಸ್‌ಗಾರ್ಡ್‌ ಸಿಬ್ಬಂದಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

Vijaya Karnataka Web 11 Sep 2020, 11:10 pm
ಮಂಗಳೂರು: ಹೊನ್ನಾವರ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ 24 ಮೀನುಗಾರರು ಸಮುದ್ರ ದಡದಿಂದ 15 ನಾಟಿಕಲ್‌ ದೂರದಲ್ಲಿ ಅಪಾಯಕ್ಕೆ ಸಿಲುಕಿದ್ದು, ಅವರನ್ನು ಮಂಗಳೂರಿನ ಕೋರ್ಸ್‌ಗಾರ್ಡ್‌ ಸಿಬ್ಬಂದಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
Vijaya Karnataka Web Indian Coast Guard


ಭಟ್ಕಳದ 'ಖಮ್ರುಲ್ಲಾಬಾಹರ್‌' ಹೆಸರಿನ ಯಾಂತ್ರಿಕ ಬೋಟ್‌ ಮೀನುಗಾರಿಕೆಗೆ ತೆರಳಿತ್ತು. ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬೋಟ್‌ನ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಸ್ತಬ್ಧಗೊಂಡಿತು. ಪರಿಣಾಮ ಅದರಲ್ಲಿದ್ದ 24 ಮೀನುಗಾರರು ಅಪಾಯದಲ್ಲಿ ಸಿಲುಕಿದ್ದರು. ಒಂದೆಡೆ ಸಮುದ್ರದಲ್ಲಿ ಮಳೆ, ಬಿರುಗಾಳಿ. ಇನ್ನೊಂದೆಡೆ ಕೈಕೊಟ್ಟ ಬೋಟ್‌ನಿಂದ ಮೀನುಗಾರರು ಆತಂಕಕ್ಕೊಳಗಾಗಿದ್ದರು. ಈ ಬಗ್ಗೆ ಕೋಸ್ಟ್‌ಗಾರ್ಡ್‌, ಕರಾವಳಿ ಕಾವಲು ಪೊಲೀಸರಿಗೆ ಮಾಹಿತಿ ನೀಡಲಾಯಿತು.

ಕಾರ್ಯಾಚರಣೆ ಆರಂಭ: ಮಾಹಿತಿ ಪಡೆದ ಮಂಗಳೂರು ಕೋಸ್ಟ್‌ಗಾರ್ಡ್‌ ಸಿಬ್ಬಂದಿ ತಕ್ಷಣ ನೌಕೆಯ ಮೂಲಕ ಅಪಾಯದಲ್ಲಿ ಸಿಲುಕಿದ್ದ ಮೀನುಗಾರರ ದೋಣಿಯ ಬಳಿ ತೆರಳಿದ್ದಾರೆ. ಆದರೆ ಪ್ರತಿಕೂಲ ಹವಾಮಾನದಿಂದ ಅವರನ್ನು ಕರೆ ತರಲು ಸಾಧ್ಯವಾಗಿರಲಿಲ್ಲ.

ರಾಜ್ಯದಲ್ಲಿ 4.4 ಲಕ್ಷ ದಾಟಿದ ಸೋಂಕಿತರು: 7 ಸಾವಿರ ದಾಟಿದ ಮೃತರ ಸಖ್ಯೆ!

ಶುಕ್ರವಾರ ಬೆಳಗ್ಗೆ ಕಾರವಾರ ಮೀನುಗಾರಿಕಾ ಉಪ ನಿರ್ದೇಶಕರ ಮನವಿ ಮೇರೆಗೆ ಇತರ ಮೀನುಗಾರರು ತಮ್ಮ ಬೋಟ್‌ನೊಂದಿಗೆ ತೆರಳಿ ಕಾರ್ಯಾಚರಣೆ ನಡೆಸಿದ್ದಾರೆ. ಬಳಿಕ ಕೋಸ್ಟ್‌ಗಾರ್ಡ್‌ ನೌಕೆ ತೆರಳಿ ಎಲ್ಲ ಮೀನುಗಾರರನ್ನು ಸುರಕ್ಷಿತವಾಗಿ ಭಟ್ಕಳ ಬಂದರಿಗೆ ಕರೆ ತಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ