ಆ್ಯಪ್ನಗರ

ಅಂತಾರಾಷ್ಟ್ರೀಯ ಜೀನಿಯಸ್‌ ಒಲಿಂಪಿಯಾಡ್‌ ಆಳ್ವಾಸ್‌ನ ಅಮೋಘ ನಾರಾಯಣರಿಗೆ ಸೆಕೆಂಡ್‌ ಗ್ರ್ಯಾಂಡ್‌ ಪ್ರಶಸ್ತಿ

ನ್ಯೂಯಾರ್ಕ್‌ನ ಓಸ್ವೇಗೋ ವಿಶ್ವವಿದ್ಯಾಲಯದಲ್ಲಿ ಜೂ.19 ರಂದು ನಡೆದ ಅಂತಾರಾಷ್ಟ್ರೀಯ ಮಟ್ಟದ ಜೀನಿಯಸ್‌ ಒಲಿಂಪಿಯಾಡ್‌ನಲ್ಲಿ ಆಳ್ವಾಸ್‌ ಇಂಗ್ಲಿಷ್‌ ಮಾಧ್ಯಮ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಅಮೋಘ ನಾರಾಯಣ ಸೆಕೆಂಡ್‌ ಗ್ರ್ಯಾಂಡ್‌ ಪ್ರಶಸ್ತಿಯೊಂದಿಗೆ ರಜತ ಪದಕ ಗಳಿಸಿ ದೇಶಕ್ಕೆ ಕೀರ್ತಿ ತಂದಿದ್ದಾರೆ.

Vijaya Karnataka 28 Jun 2019, 4:22 pm
ಮೂಡುಬಿದಿರೆ: ನ್ಯೂಯಾರ್ಕ್‌ನ ಓಸ್ವೇಗೋ ವಿಶ್ವವಿದ್ಯಾಲಯದಲ್ಲಿ ಜೂ.19 ರಂದು ನಡೆದ ಅಂತಾರಾಷ್ಟ್ರೀಯ ಮಟ್ಟದ ಜೀನಿಯಸ್‌ ಒಲಿಂಪಿಯಾಡ್‌ನಲ್ಲಿ ಆಳ್ವಾಸ್‌ ಇಂಗ್ಲಿಷ್‌ ಮಾಧ್ಯಮ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಅಮೋಘ ನಾರಾಯಣ ಸೆಕೆಂಡ್‌ ಗ್ರ್ಯಾಂಡ್‌ ಪ್ರಶಸ್ತಿಯೊಂದಿಗೆ ರಜತ ಪದಕ ಗಳಿಸಿ ದೇಶಕ್ಕೆ ಕೀರ್ತಿ ತಂದಿದ್ದಾರೆ.
Vijaya Karnataka Web MNR-27MDB AMOGHNARAYAN


ಈ ಸ್ಪರ್ಧೆಗೆ 79 ದೇಶಗಳಿಂದ 1269 ಸ್ಪರ್ಧಾಳುಗಳು ಭಾಗವಹಿಸಿದ್ದು, ಇವರ ಅನ್ವೇಷಣೆಯಾದ 'ಇವಾಲ್ಯೂವೆಷನ್‌ ಆಫ್‌ ನಾವೆಲ್‌ ಇಕೋ ಫ್ರೆಂಡ್ಲಿ ವೀಡಿಸೈಡ್‌ ಫ್ರಂ ಕೋಕಂ ಫ್ರೂಟ್‌ ಎಕ್ಸ್ಟ್ರಾಕ್ಟ್ ಸೋಪ್‌ ನಟ್‌' ದ್ವಿತೀಯ ಸ್ಥಾನ ಗಳಿಸುವುದರ ಜತೆಗೆ ಬೆಳ್ಳಿ ಪದಕ, ಪ್ರಶಸ್ತಿ ಪತ್ರ, ಟ್ಯಾಬ್ಲೆಟ್‌ನ್ನು ತನ್ನದಾಗಿಸಿಕೊಂಡಿದೆ.

ಅವರು 2017 ರಲ್ಲಿ ಹೊಸದಿಲ್ಲಿಯಲ್ಲಿ ನಡೆದ ಐಆರ್‌ಐಎಸ್‌ ನ್ಯಾಷನಲ್‌ ಫೇರ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದರು. 2018ರಲ್ಲಿ ಪಿಟ್ಸ್‌ಬರ್ಗ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌ ಹಾಗೂ ಗಣಿತ ಕ್ಷೇತ್ರದ ಮೇರು ಸಾಧನೆಗೆ 'ಬ್ರಾಡ್ಕೋಮ್‌ ಮಾಸ್ಟರ್ಸ್‌ ಅಂತಾರಾಷ್ಟ್ರೀಯ ಪ್ರಶಸ್ತಿ' ಗಳಿಸಿದ್ದರು. 2018ರ ಐರಿಸ್‌ ನ್ಯಾಷನಲ್‌ ಫೇರ್‌ನಲ್ಲಿ 'ಎ.ಎಸ್‌.ಎಂ- ಮಟೇರಿಯಲ್‌ ಸೈನ್ಸ್‌ ಅವಾರ್ಡ್‌ ಹಾಗೂ ರಿಕೋ ಸಸ್ಟೈನೇಬಲ್‌ ಡೆವಲಪ್‌ಮೆಂಟ್‌' ಪ್ರಶಸ್ತಿಗೂ ಭಾಜನರಾಗಿದ್ದರು. ಕಳೆದ ಎಪ್ರಿಲ್‌ನಲ್ಲಿ ಇಸ್ರೋಗೆ ಆಯ್ಕೆಯಾಗಿ 'ಇಸ್ರೋ ಯುವಿಕ' ಯುವ ವಿಜ್ಞಾನಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅವರು ಮಂಡಿಸಿದ ಯೋಜನೆಯ ವಿಷಯವು ಪ್ರೌಢಶಾಲಾ ವಿದ್ಯಾರ್ಥಿಗಳಿಗಿರುವ 'ಹೈಸ್ಕೂಲ್‌ ರಿಸರ್ಚ್‌ ಆ್ಯಂಡ್‌ ಸ್ಟೇಟ್‌ ಯೂನಿವರ್ಸಿಟಿ ಆಫ್‌ ನ್ಯೂಯಾರ್ಕ್‌' ಅಂತಾರಾಷ್ಟ್ರೀಯ ಪತ್ರಿಕೆಯಲ್ಲಿ ಪ್ರಕಟವಾಗಲು ಆಯ್ಕೆಯಾಗಿದೆ. ಇದೇ ಸಂಸ್ಥೆ ಅವರಿಗೆ ಅಮೆರಿಕದಲ್ಲಿ ಉಚಿತ ಶಿಕ್ಷ ಣ ಹಾಗೂ ವಿದ್ಯಾರ್ಥಿವೇತನವನ್ನು ಘೋಷಣೆ ಮಾಡಿದೆ. ಅವರು ಪುತ್ತೂರಿನ ಖ್ಯಾತ ವೈದ್ಯ ದಂಪತಿ ಡಾ. ರಾಜಾರಾಮ್‌ ಚಂದ್ರ ಹಾಗೂ ಡಾ. ಸುಧಾ ಸುಬ್ರಾಯ ಹೆಗ್ಡೆ ಅವರ ಪುತ್ರ.

ಅಂತಾರಾಷ್ಟ್ರೀಯ ಮಟ್ಟದ ಜೀನಿಯಸ್‌ ಒಲಿಂಪಿಯಾಡ್‌ನಲ್ಲಿ ಸಾಧನೆ ಮಾಡಿರುವ ಅಮೋಘ ನಾರಾಯಣ ಅವರನ್ನು ಗುರುವಾರ ಶಾಲೆಯ ವತಿಯಿಂದ ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ್‌ ಆಳ್ವ, ವಿದ್ಯಾರ್ಥಿಯ ಪೋಷಕರು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ವಿದ್ಯಾರ್ಥಿಯ ಸಾಧನೆಯನ್ನು ಶ್ಲಾಘಿಸಿದ ಡಾ. ಎಂ. ಮೋಹನ್‌ ಆಳ್ವ, ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ಚೈತನ್ಯದ ಜತೆಗೆ ವೈಜ್ಞಾನಿಕತೆ ಮನೋಭಾವವನ್ನು ಬೆಳೆಸಿದರೆ ಎಂತಹ ಸಾಧನೆಯನ್ನು ಮಾಡಬಲ್ಲರು ಎಂಬುದಕ್ಕೆ ಅಮೋಘ ನಾರಾಯಣ ಸಾಕ್ಷಿ. ಅವರ ಸಾಧನೆ ಎಲ್ಲರಿಗೂ ಮಾದರಿ. ಅವರು ಮುಂದಿನ ಜೀವನದಲ್ಲೂ ಈ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಲಿ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ