ಆ್ಯಪ್ನಗರ

ಮಂಗಳೂರಿನಲ್ಲಿ ಐಸಿಸ್ ಕರಿನೆರಳು: ಮೂರನೇ ದಿನವೂ ವಿಚಾರಣೆ

ಮಂಗಳೂರು ಕರಾವಳಿಯಲ್ಲಿ ಐಸಿಸ್‌ ಮಾದರಿ ಸಂಘಟನೆ ಕಾರ್ಯಾಚರಿಸುತ್ತಿದೆ ಎಂದು ಮೊಬೈಲ್‌ನಲ್ಲಿ ವಾಯ್ಸ್‌ ರೆಕಾರ್ಡ್‌ ಮಾಡಿ ರವಾನೆ.

Vijaya Karnataka Web 6 Oct 2017, 9:02 am

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಐಸಿಸ್‌ ಮಾದರಿ ಸಂಘಟನೆಗಳು ಕಾರ್ಯಾಚರಿಸುತ್ತಿದೆ ಎಂಬ ಆಪಾದನೆ ಮೇಲೆ ಆಡಿಯೋ ರೆಕಾರ್ಡ್‌ ಮಾಡಿದ ಇಸ್ಮಾಯಿಲ್‌ ಶಾಫಿ ಅವರನ್ನು ಪೊಲೀಸರು ಎರಡನೇ ದಿನವೂ ವಿಚಾರಣೆ ನಡೆಸಿದ್ದಾರೆ.

Vijaya Karnataka Web isis operatives in coastal karnataka
ಮಂಗಳೂರಿನಲ್ಲಿ ಐಸಿಸ್ ಕರಿನೆರಳು: ಮೂರನೇ ದಿನವೂ ವಿಚಾರಣೆ


ಶಾಫಿಯವರ ಆಡಿಯೋ ರೆಕಾರ್ಡ್‌ ಬ್ಯಾರಿ ಭಾಷೆಯಲ್ಲಿದ್ದು, ಅದನ್ನು ಈಗಾಗಲೇ ಕನ್ನಡಕ್ಕೆ ತರ್ಜುಮೆ ಮಾಡಿಸಲಾಗಿದೆ. ಮಂಗಳವಾರ, ಬುಧವಾರ ಇಸ್ಮಾಯಿಲ್‌ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದು, ಗುರುವಾರವೂ ಅದನ್ನು ಮುಂದುವರಿಸಿದ್ದಾರೆ.

ಈ ಬಗ್ಗೆ ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರ್‌ ಕುಮಾರ್‌ ರೆಡ್ಡಿ ವಿಜಯ ಕರ್ನಾಟಕ ಜತೆ ಮಾತನಾಡಿ, ‘‘ಗುರುವಾರವೂ ಇಸ್ಮಾಯಿಲ್‌ ಶಾಫಿಯವರನ್ನು ವಿಚಾರಣೆ ನಡೆಸಿದ್ದೇವೆ. ಅವರು ನೀಡಿದ ಮಾಹಿತಿ ದಾಖಲೀಕರಣ ಮಾಡಲಾಗಿದೆ. ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ಈ ಬಗ್ಗೆ ಯಾವುದೇ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಸಂಪೂರ್ಣ ವಿಚಾರಣೆ ಮುಗಿದ ಬಳಿಕವಷ್ಟೆ ಅವುಗಳ ಸ್ಪಷ್ಟ ಚಿತ್ರಣ ಸಿಗಲಿದೆ,’’ ಎಂದರು.

ಕರಾವಳಿಯಲ್ಲಿ ಐಸಿಸ್‌ ಮಾದರಿ ಸಂಘಟನೆ ಕಾರ್ಯಾಚರಿಸುತ್ತಿದೆ ಎಂದು ಮೊಬೈಲ್‌ನಲ್ಲಿ ವಾಯ್ಸ್‌ ರೆಕಾರ್ಡ್‌ ಮಾಡಿ ರವಾನಿಸಿರುವ ಸೌತ್‌ ಕಧಿರ್ನಾಧಿಟಕ ಸಧಿಲಫಿ ಮೂವ್‌ಮೆಂಟ್‌ (ಎಸ್‌ಕೆಧಿಎಸ್‌ಎಂ) ಪ್ರಧಿಧಾನ ಕಾಧಿರ್ಯಧಿದರ್ಶಿ ಇಸ್ಮಾಯಿಲ್‌ ಶಾಫಿ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಪೊಲೀಸ್‌ ಆಯುಕ್ತರ ಕಚೇರಿಗೆ ಕರೆಯಿಸಿ, ಧ್ವನಿ ಮುದ್ರಿಕೆ ಅವರದ್ದೇ ಎಂದು ಅವರಿಂದ ಖಾತರಿಪಡಿಸಿಕೊಂಡು, ಹಾಗೆ ಹೇಳುವ ಉದ್ದೇಶಗಳ ಬಗ್ಗೆ ಪ್ರಶ್ನಿಸಿದರು. ಧ್ವನಿಮುದ್ರಿಕೆ ಹಿನ್ನೆಲೆಯಲ್ಲಿ ಬೆದರಿಕೆ ಇದೆಯಾ? ರಕ್ಷಣೆಯ ಅಗತ್ಯ ಇದೆಯೇ ಎಂದು ಪೊಲೀಸರು ಕೇಳಿದ್ದು, ಅದನ್ನು ಅವರು ನಿರಾಕರಿಸಿದರು ಎಂದು ಗೊತ್ತಾಗಿದೆ.

'ಐಸಿಸ್‌ನವರು ಇದ್ದಾರೆ ಎಂದು ನಾನು ಎಲ್ಲೂ ಹೇಳಿಲ್ಲ. ತೀವ್ರಗಾಮಿ ಆಚರಣೆ ಮಾಡುವ ಸಂಘಟನೆ ಬಗ್ಗೆ ಜಾಗೃತಿ ಮೂಡಿಸಲು ಖಾಸಗಿಯಾಗಿ ಒಬ್ಬರಿಗೆ ಧ್ವನಿಮುದ್ರಿಕೆ ಕಳುಹಿಸಿದ್ದೆ. ಆದರೆ, ನಮಗಾಗದ ಕೆಲವರು ನಮ್ಮ ಸಂಘಟನೆ ಭಯೋತ್ಪಾದನೆ ಬೆಂಬಲಿಸುತ್ತದೆ ಬಿಂಬಿಸಲು, ಧ್ವನಿಮುದ್ರಿಕೆ ಸಹಿತ ಕನ್ನಡದಲ್ಲಿ ಟೈಪ್‌ ಮಾಡಿ ಸಿಕ್ಕಿದವರಿಗೆಲ್ಲ ಕಳುಹಿಸಿ ಗೊಂದಲ ಮೂಡಿಸಿದ್ದಾರೆ' ಎಂದು ಶಾಫಿ ಹೇಳಿದರು ಎಂದು ತಿಳಿದು ಬಂದಿದೆ.

ಧ್ವನಿಮುದ್ರಿಕೆಯನ್ನು ಕನ್ನಡಕ್ಕೆ ಭಾಷಾಂತರ ಮಾಡಿದ್ದು, ಅದರಲ್ಲಿರುವ ವಿಷಯಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ