ಆ್ಯಪ್ನಗರ

ಸರಕಾರದ ನಿರ್ಲಕ್ಷಕ್ಕೆ ಬೇಸತ್ತು ತಾವೇ ಸೇತುವೆ ನಿರ್ಮಿಸಿಕೊಂಡ ದ್ವೀಪ ವಾಸಿಗಳು

ಸರಕಾರದ ಸಹಾಯಹಸ್ತಕ್ಕಾಗಿ ಕಾದು ಕಾದು ಬೇಸತ್ತ ಜನರು ಕೊನೆಗೆ ತಾವೇ ಹಣ ಒಟ್ಟುಗೂಡಿಸಿ ಸೇತುವೆ ನಿರ್ಮಿಸುವ ನಿರ್ಧಾರಕ್ಕೆ ಬಂದರು. ಸ್ಥಳೀಯ ಚರ್ಚ್ ಮುಂದಾಳತ್ವದಲ್ಲಿ 18 ಲಕ್ಷ ಸಂಗ್ರಹಿಸಿ ಕಬ್ಬಿಣದ ಸೇತುವೆಯನ್ನು ಕಟ್ಟಿಯೇ ಬಿಟ್ಟರು.

TIMESOFINDIA.COM 25 Jan 2019, 1:39 pm
ಮಂಗಳೂರು: ಸರಕಾರದ ನಿರ್ಲಕ್ಷದಿಂದ ಬೇಸತ್ತ ದ್ವೀಪವೊಂದರ ವಾಸಿಗಳು ತಾವೇ ಸೇತುವೆಯನ್ನು ಕಟ್ಟಿಕೊಂಡಿದ್ದಾರೆ. ಇದು ಜಿಲ್ಲೆಯ ಪಾವೂರು ಗ್ರಾಮಕ್ಕೊಳಪಡುವ ಉಲಿಯಾ ದ್ವೀಪದ ಜನರ ಕಥೆ.
Vijaya Karnataka Web Bridge


ನೇತ್ರಾವತಿ ನದಿಯಿಂದ ಸುತ್ತುವರಿಯಲ್ಪಟ್ಟಿರುವ ಉಲಿಯಾದ ನಿವಾಸಿಗಳು ನದಿಯಾಚೆ ಬರಬೇಕೆಂದರೆ 800ಮೀ ದೂರ ದೋಣಿ ದಾಟಿಯೇ ಬರಬೇಕಿತ್ತು. ಅಲ್ಲಿಂದ ರಾಷ್ಟ್ರೀಯ ಹೆದ್ದಾರಿಗೆ ತಲುಪಬೇಕೆಂದರೆ ಮತ್ತೆ ವಾಹನವನ್ನೇರಿ 1.5 ಕಿಮೀ ಪ್ರಯಾಣಿಸಬೇಕಿತ್ತು. ಸ್ವಾತಂತ್ರ್ಯ ಬಂದಾಗಿಂದ ಅಲ್ಲಿನ ನಿವಾಸಿಗಳು ಸೇತುವೆಗಾಗಿ ಸರಕಾರಕ್ಕೆ ಮೊರೆ ಇಡುತ್ತಲೇ ಇದ್ದರು. ಆದರೆ ಯಾರು ಕೂಡ ಅವರ ಸಮಸ್ಯೆಗೆ ಕಿವಿಗೊಟ್ಟಿರಲಿಲ್ಲ.

ಸರಕಾರದ ಸಹಾಯಹಸ್ತಕ್ಕಾಗಿ ಕಾದು ಕಾದು ಬೇಸತ್ತ ಜನರು ಕೊನೆಗೆ ತಾವೇ ಹಣ ಒಟ್ಟುಗೂಡಿಸಿ ಸೇತುವೆ ನಿರ್ಮಿಸುವ ನಿರ್ಧಾರಕ್ಕೆ ಬಂದರು. ಸ್ಥಳೀಯ ಚರ್ಚ್ ಮುಂದಾಳತ್ವದಲ್ಲಿ 18 ಲಕ್ಷ ಸಂಗ್ರಹಿಸಿ ಕಬ್ಬಿಣದ ಸೇತುವೆಯನ್ನು ಕಟ್ಟಿಯೇ ಬಿಟ್ಟರು.

30, 40 ವಿದ್ಯಾರ್ಥಿಗಳು ಸೇರಿದಂತೆ ಸುಮಾರು 200 ಜನರಿಗೀಗ ಶಾಲೆ, ಕಾಲೇಜು, ಆಸ್ಪತ್ರೆಗೆ ಹೋಗುವುದು ಸುಲಭವಾಗಿದ್ದು, ನಿರಾಳತೆ ಭಾವ ಅವರದ್ದಾಗಿದೆ.

ಈ ಕುರಿತು ಭಾವುಕರಾಗಿ ಪ್ರತಿಕ್ರಿಯಿಸುವ ಫ್ಲವಿಯಾ ಡಿಸೋಜಾ, 20 ವರ್ಷದ ಹಿಂದೆ ಹೃದಯಾಘಾತದಿಂದ ಪತಿ ತೀರಿಕೊಂಡ. ಸೇತುವೆ ಇಲ್ಲದಿದ್ದರಿಂದ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸೇರಿಸಲಾಗದಿದ್ದರಿಂದ ನಾವು ಆತನನ್ನು ಕಳೆದುಕೊಳ್ಳುವಂತಾಯಿತು. ಮತ್ತೀಗ ನಮ್ಮೂರಿಗೆ ಸಂಪರ್ಕ ಸಿಕ್ಕಿದ್ದು ಬಹಳ ಸಂತೋಷ ತಂದಿದೆ, ಎನ್ನುತ್ತಾರೆ.

18 ವರ್ಷಗಳಿಂದ ಗ್ರಾಮಸ್ಥರು ತಾತ್ಕಾಲಿಕ ಸೇತುವೆ ನಿರ್ಮಿಸಿ ನದಿ ದಾಟುತ್ತಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ