ಆ್ಯಪ್ನಗರ

‘ಎಸ್‌ ಅಂಗಾರಗೆ ಮಂತ್ರಿ ಸ್ಥಾನ ಸಿಕ್ಕಿರೋದು ಖುಷಿ ವಿಚಾರ, ನಮ್ಮ ಬೆಂಬಲ ಅವರಿಗಿದೆ’; ಯುಟಿ ಖಾದರ್

ಸಚಿವ ಸ್ಥಾನ ಕುರಿತು ಆಡಳಿತ ಪಕ್ಷದ ಸದಸ್ಯರೇ ಸರ್ಕಾರದ ವಿರುದ್ಧ ಹೇಳಿಕೆ ನೀಡುತ್ತಿದ್ದು, ಪಕ್ಷದ ಶಾಸಕರುಗಳೇ ಸಚಿವ ಸ್ಥಾನದ ಮಾನದಂಡದ ಬಗ್ಗೆ ಮುಖ್ಯಮಂತ್ರಿಯನ್ನು ಪ್ರಶ್ನಿಸಿ ಏಕವಚನದಲ್ಲಿ ಮಾತನಾಡಿ ಅವರಿಗೆ ಅವಮಾನ ಮಾಡುತ್ತಿದ್ದಾರೆ. ಪ್ರಧಾನ ಮಂತ್ರಿಗೆ ಅವಮಾನ ಮಾಡಿದ್ರೆ ದೇಶದ್ರೋಹ ಎಂದು ಹೇಳುತ್ತಾರೆ, ಆದರೆ ಪ್ರಧಾನಿಗೆ ಇರುವ ಅದೇ ಗೌರವ ಮುಖ್ಯಮಂತ್ರಿಗೂ ಸಿಗಬೇಕಲ್ವೇ? ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರು ಸ್ಪಷ್ಟತೆ ನೀಡಬೇಕು ಎಂದು ಕಾಂಗ್ರೆಸ್‌ ಶಾಸಕ ಯುಟಿ ಖಾದರ್ ಆಗ್ರಹಿಸಿದ್ದಾರೆ.

Vijaya Karnataka Web 14 Jan 2021, 1:30 pm
ಮಂಗಳೂರು: ಸುಳ್ಯದ ಶಾಸಕ ಎಸ್‌ ಅಂಗಾರ ಅವರಿಗೆ ಸಚಿವ ಸ್ಥಾನ ಒಲಿದಿರುವುದಕ್ಕೆ ಕಾಂಗ್ರೆಸ್‌ ಶಾಸಕ ಯುಟಿ ಖಾದರ್ ಸಂತಸ ವ್ಯಕ್ತಪಡಿಸಿದ್ದಾರೆ.
Vijaya Karnataka Web ut khader


ಈ ಸಂಬಂಧ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೊನೆಗೂ ಸುಳ್ಯ ಜನತೆಯ ಬೇಡಿಕೆ ಈಡೇರಿದೆ. ಎಸ್.ಅಂಗಾರ ಅವರು ಸಚಿವರಾಗಿರುವುದು ನಮಗೆ ಖುಷಿ ವಿಚಾರ, ಮಂಗಳೂರಿನ ಹೊಸ ಸಚಿವರಿಗೆ ನಾವು ಸದಾ ಬೆಂಬಲ ಕೊಡುತ್ತೇವೆ ಎಂದು ಹೇಳಿದರು. ತಾಲೂಕು ಪಂಚಾಯತ್ ವ್ಯವಸ್ಥೆ ರದ್ದು ಎಂಬ ವಿಚಾರವಾಗಿ ಮಾತನಾಡಿದ ಅವರು, ‘ತಾಲೂಕು ‌ಮಟ್ಟದ ಅಭಿವೃದ್ಧಿಯನ್ನು ಜಿಲ್ಲಾಡಳಿತ ನೇರವಾಗಿ ನೋಡಲು ಆಗುತ್ತದೆಯೇ? ಆಡಳಿತ ವಿಕೇಂದ್ರೀಕರಣ ಎಷ್ಟು ಸರಿ? ರದ್ದು, ಬಂದ್ ಮಾಡುವುದು ಸರ್ಕಾರದ ಕೆಲಸವಲ್ಲ ಬದಲಾಗಿ ಸ್ಥಳೀಯ ಪ್ರತಿನಿಧಿಗಳಿಗೆ ಅಧಿಕಾರ ಕೊಡುವುದು ಸರ್ಕಾರದ ಕೆಲಸ’ ಎಂದು ಹೇಳಿದ್ದಾರೆ.
ಐವರು ಶಾಸಕರಿದ್ದರೂ ಜಿಲ್ಲೆಗಿಲ್ಲ ಮಂತ್ರಿಸ್ಥಾನ; ಮತ್ತೆ ಸಚಿವ ಪಟ್ಟದಿಂದ ದಾವಣಗೆರೆ ವಂಚಿತ..!
ಇನ್ನು ಸಚಿವ ಸ್ಥಾನ ಕುರಿತು ಆಡಳಿತ ಪಕ್ಷದ ಸದಸ್ಯರೇ ಸರ್ಕಾರದ ವಿರುದ್ಧ ಹೇಳಿಕೆ ನೀಡುತ್ತಿದ್ದು, ಪಕ್ಷದ ಶಾಸಕರುಗಳೇ ಸಚಿವ ಸ್ಥಾನದ ಮಾನದಂಡದ ಬಗ್ಗೆ ಮುಖ್ಯಮಂತ್ರಿಯನ್ನು ಪ್ರಶ್ನಿಸಿ ಏಕವಚನದಲ್ಲಿ ಮಾತನಾಡಿ ಅವರಿಗೆ ಅವಮಾನ ಮಾಡುತ್ತಿದ್ದಾರೆ. ಪ್ರಧಾನ ಮಂತ್ರಿಗೆ ಅವಮಾನ ಮಾಡಿದ್ರೆ ದೇಶದ್ರೋಹ ಎಂದು ಹೇಳುತ್ತಾರೆ, ಆದರೆ ಪ್ರಧಾನಿಗೆ ಇರುವ ಅದೇ ಗೌರವ ಮುಖ್ಯಮಂತ್ರಿಗೂ ಸಿಗಬೇಕಲ್ವೇ? ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರು ಸ್ಪಷ್ಟತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಮಂತ್ರಿಮಂಡಲಕ್ಕೆ ಹೈಕಮಾಂಡ್‌ನಿಂದ 6 ತಿಂಗಳ ಟಾಸ್ಕ್‌; ಕೆಲಸ ಮಾಡದಿದ್ದರೆ ಸಚಿವರ ತಲೆದಂಡ ಪಕ್ಕಾ..!
ಇದೇ ವೇಳೆ ಯತ್ನಾಳ್ ಸಿಡಿ ಹೇಳಿಕೆ ವಿಚಾರವಾಗಿ ಮಾತನಾಡಿದ ಖಾದರ್, ಜನರು ಎಲ್ಲಾ ವಿಚಾರವನ್ನು ಅರ್ಥ ಮಾಡಿಕೊಳ್ಳಬೇಕು, ಆಡಳಿತದಲ್ಲಿರೋ ಸರ್ಕಾರದ ಸದಸ್ಯರೇ ಅಸಮಾಧಾನ ತೋಡಿಕೊಂಡಿದ್ದಾರೆ. ಮುಖ್ಯಮಂತ್ರಿಯವರೇ ಮುನಿರತ್ನಗೆ ಸಚಿವ ಸ್ಥಾನ ಕೊಡದ್ದಕ್ಕೆ ಸ್ಪಷ್ಟನೆ ನೀಡಬೇಕು. ಮುಂಬೈಯಲ್ಲಿ ಕೂತು ಸರಕಾರ ಬೀಳಿಸುವಾಗಲೇ ಮುಂದೆ ನಿಮಗೂ ಇಂತಹದ್ದೇ ಸ್ಥಿತಿ ಎದುರಾಗಲಿದೆ ಎಂದು ನಾವು ಎಚ್ಚರಿಸಿದ್ದೆವು. ಇದಕ್ಕೆಲ್ಲಾ ಕಾಂಗ್ರೆಸ್ ಕೈವಾಡ ಎಂದು ಹೇಳದಿರಿ ಯಾಕೆಂದರೆ ಬಿಜೆಪಿಯವರಿಗೆ ಬೇರೆ ಉತ್ತರ ನೀಡಲು ಗೊತ್ತಿಲ್ಲ ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ