ಆ್ಯಪ್ನಗರ

ಕಂಬಳಕ್ಕೆ ಅನುಮತಿ ನೀಡುವ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ; ದಕ್ಷಿಣ ಕನ್ನಡ ಜಿಲ್ಲಾಧಿಕಾರಿ

ಕಂಬಳ ವಿಚಾರದಲ್ಲಿಇನ್ನೂ ನಮಗೆ ಯಾರಿಂದಲೂ ಮನವಿ ಬಂದಿಲ್ಲ. ಮನವಿ ಬಂದ ಬಳಿಕ ಸರಕಾರದ ಮಾರ್ಗದರ್ಶಿ ಸೂತ್ರ ಮುಂದಿಟ್ಟುಕೊಂಡು ಅದರಂತೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

Vijaya Karnataka Web 14 Nov 2020, 8:49 am
ಪುತ್ತೂರು: ಕಂಬಳಕ್ಕೆ ಅನುಮತಿ ನೀಡುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
Vijaya Karnataka Web kambala


ಶುಕ್ರವಾರ ಪುತ್ತೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಕೊರೊನಾ ಅನ್‌ಲಾಕ್‌ 5.0 ಸಂಬಂಧಿಸಿ ಮಾರ್ಗದರ್ಶಿ ಸೂತ್ರಗಳು ಜಾರಿಯಲ್ಲಿವೆ. ಇದರಂತೆ ಬಹಿರಂಗ ಕಾರ್ಯಕ್ರಮಗಳು ನಡೆಯುತ್ತಿವೆ. ಕಂಬಳ ವಿಚಾರದಲ್ಲಿಇನ್ನೂ ನಮಗೆ ಯಾರಿಂದಲೂ ಮನವಿ ಬಂದಿಲ್ಲ. ಮನವಿ ಬಂದ ಬಳಿಕ ಸರಕಾರದ ಮಾರ್ಗದರ್ಶಿ ಸೂತ್ರ ಮುಂದಿಟ್ಟುಕೊಂಡು ಅದರಂತೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

'ನಳಿನ್ ಕುಮಾರ್‌ ಹೋಂ ಮಿನಿಸ್ಟ್ರಾ? ಸಂಪತ್‌ರಾಜ್‌ನ ನಾನು ಅಡಗಿಸಿಟ್ಟಿದ್ರೆ ಬಂಧಿಸಲಿ'; ಕಟೀಲ್‌ಗೆ ಡಿಕೆಶಿ ಟಾಂಗ್‌

ಕಾಲೇಜು ಆರಂಭ: ನ.17ರಿಂದ ಪದವಿ ಕಾಲೇಜು ತರಗತಿಗಳು ಆರಂಭಗೊಳ್ಳಲಿವೆ. ಎಲ್ಲ ವಿದ್ಯಾರ್ಥಿಗಳಿಗೆ ಕೊರೊನಾ ಪರೀಕ್ಷೆ ಕಡ್ಡಾಯ ಮಾಡಲಾಗಿದೆ. ಸಾಮಾಜಿಕ ಅಂತರ ಕಾಪಾಡುವುದು, ಸ್ಯಾನಿಟೈಸರ್‌ ಬಳಕೆ, ಮಾಸ್ಕ್‌ ಬಳಕೆ ಸೇರಿದಂತೆ ನಿಯಮಾವಳಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ಸೂಚನೆ ನೀಡಲಾಗಿದೆ ಎಂದರು.

ಎಚ್ಚರ..! ಹಸಿರು ಪಟಾಕಿ ಎಂದು ನಿರ್ಲಕ್ಷ್ಯ ಬೇಡ..! ಹಾಗಿದ್ರೆ ಪಟಾಕಿ ಸಿಡಿಸುವಾಗ ಏನು ಮಾಡಬೇಕು?

ಪುತ್ತೂರು - ಉಪ್ಪಿನಂಗಡಿ ರಸ್ತೆಯಲ್ಲಿ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಇದೇ ರಸ್ತೆಯ ಪಕ್ಕದಲ್ಲಿ ಪುತ್ತೂರು ನಗರಕ್ಕೆ ಕುಡಿಯುವ ನೀರಿನ ಸರಬರಾಜು ಪೈಪ್‌ಲೈನ್‌ ಹಾದು ಹೋಗಿದೆ. ಇಲ್ಲಿ 35 ಸೆಂಟ್ಸ್‌ ಜಮೀನು ಭೂಸ್ವಾಧೀನ ಸಂಬಂಧ ಗೊಂದಲವಿದೆ. ಇದೇ ರೀತಿ ಕೊಳ್ತಿಗೆ ಗ್ರಾಮದಲ್ಲೂ 25 ಸೆಂಟ್ಸ್‌ ಭೂ ಸ್ವಾಧೀನ ವಿಚಾರದಲ್ಲಿ ಅಸ್ಪಷ್ಟತೆ ಇದೆ. ದರಪಟ್ಟಿ ನಿಗದಿ ಬಗ್ಗೆ ಚರ್ಚಿಸಲು ಇಂದು ಸಭೆ ನಡೆಸಲಾಗಿದೆ. ಶೀಘ್ರದಲ್ಲೇ ಎಲ್ಲ ಗೊಂದಲ ನಿವಾರಣೆಯಾಗಲಿದೆ ಎಂದರು.

ಕೇಂದ್ರದ ಮುಂದಿನ ಗೈಡ್‌ಲೈನ್ಸ್‌ ಬಳಿಕ ಕಂಬಳ ಆಯೋಜನೆ: ಕೋಟ ಶ್ರೀನಿವಾಸ ಪೂಜಾರಿ

ವನ್‌-ಧನ್‌ ಯೋಜನೆ: ಕೇಂದ್ರ ಸರಕಾರದ ವನ್‌- ಧನ್‌ ಯೋಜನೆಯ ಅಡಿಯಲ್ಲಿ ಕಾಡುತ್ಪತ್ತಿ ಮಾರಾಟ ಮಾಡುವವರಿಗಾಗಿ ಚಾರ್ಮಾಡಿ ಮತ್ತು ಸುಬ್ರಹ್ಮಣ್ಯದಲ್ಲಿ 2 ಮಾರುಕಟ್ಟೆ ಪ್ರಾಂಗಣ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ತಲಾ 15 ಲಕ್ಷದಂತೆ 30 ಲಕ್ಷ ರೂ. ಸಿಗಲಿದೆ. ಈ ಬಗ್ಗೆ ಲ್ಯಾಂಫ್ಸ್‌ ಸೊಸೈಟಿ ಜತೆ ಸಮಾಲೋಚನೆ ಮಾಡಿದ್ದೇವೆ ಎಂದು ಜಿಲ್ಲಾಧಿಕಾರಿ ವಿವರಿಸಿದರು. ಸಹಾಯಕ ಆಯುಕ್ತ ಯತೀಶ್‌ ಉಳ್ಳಾಲ್‌ ಉಪಸ್ಥಿತರಿದ್ದರು.

11.68 ಕೋಟಿ ವೆಚ್ಚದಲ್ಲಿ 'ಮಾದರಿ ಪಾರಂಪರಿಕ ಗ್ರಾಮ' ಲೋಕಾರ್ಪಣೆ; ರಾಜಧಾನಿಯ ಪ್ರವಾಸಿ ಆಕರ್ಷಣೆಗೆ ಮತ್ತೊಂದು ಸೇರ್ಪಡೆ

ಡಿ.ಸಿ.ಮನ್ನಾ ಭೂಮಿ ಮರು ಸಮೀಕ್ಷೆ: ದಮನಿತ ಸಮುದಾಯಕ್ಕೆ ನೀಡಲೆಂದು ಬ್ರಿಟಿಷ್‌ ಆಡಳಿತದ ಕಾಲದಲ್ಲಿ ಡಿ.ಸಿ. (ಡಿಪ್ರೆಸ್‌ಡ್‌ ಕ್ಲಾಸಸ್‌) ಮನ್ನಾ ಭೂಮಿ ಯೋಜನೆ ಜಾರಿಗೆ ತರಲಾಗಿತ್ತು. ಈ ಭೂಮಿಯನ್ನು ಇನ್ನೂ ಕೂಡ ಪರಿಶಿಷ್ಟ ಸಮುದಾಯವೂ ಸೇರಿದಂತೆ ದಮನಿತ ಸಮುದಾಯಕ್ಕೆ ವಿತರಿಸುವ ಕಾರ್ಯ ಆಗಿಲ್ಲ. ಅನೇಕ ಕಡೆ ಇವುಗಳನ್ನು ಅತಿಕ್ರಮಣ ಮಾಡಲಾದ ದೂರುಗಳೂ ಇವೆ. ಈ ಬಗ್ಗೆ ಗ್ರಾಮ ಮಟ್ಟದಿಂದಲೇ ಸಮಗ್ರ ಅಧ್ಯಯನ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ