ಆ್ಯಪ್ನಗರ

ಬೆಳ್ತಂಗಡಿ: ಐಟಿಐ ಉಪನ್ಯಾಸಕ ಬರ್ಬರ ಹತ್ಯೆ

ವಿಕ್ರಮ್ ಜೈನ್ ಅವರ ಕಾರಿನ ಬಳಿ ಮದ್ಯದ ಬಾಟಲಿ ಪತ್ತೆಯಾಗಿದೆ. ಕುಡಿದ ಮತ್ತಿನಲ್ಲಿ ಜಗಳ ಉಂಟಾಗಿ ಹೊಡೆದಾಟ ನಡೆದು ಕೊಲೆ ಮಾಡಿರಬಹುದೇ? ಅಥವಾ ಯಾವುದೋ ವ್ಯವಹಾರಕ್ಕೆ ಸಂಬಂಧಿಸಿ ಕೊಲೆ ನಡೆದಿರಬಹುದೇ? ಎಂಬಿತ್ಯಾದಿ ಸಂಶಯಗಳು ಸ್ಥಳೀಯವಾಗಿ ಕೇಳಿ ಬಂದಿದೆ.

Vijaya Karnataka Web 28 May 2019, 2:16 pm
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಾಲಾಡಿ ಸರಕಾರಿ ಐಟಿಐ ಉಪನ್ಯಾಸಕ ವಿಕ್ರಂ ಜೈನ್ (40) ಎಂಬವರನ್ನು ಅಪರಿಚಿತರು ಮಚ್ಚಿನಿಂದ ಬರ್ಬರವಾಗಿ ಕೊಲೆ ಮಾಡಿದ್ದಾರೆ.
Vijaya Karnataka Web ವಿಕ್ರಂ
ವಿಕ್ರಂ


ಬೆಳ್ತಂಗಡಿ ಠಾಣಾ ವ್ಯಾಪ್ತಿಯ ಮುಂಡೂರು ಎಂಬಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ಇದೇ ಪರಿಸರದಲ್ಲಿ ಸೋಮವಾರ ತಡರಾತ್ರಿ ಸುಮಾರು 11ಗಂಟೆ ಹೊತ್ತಿಗೆ ಅಪರಿಚಿತ ದ್ವಿಚಕ್ರ ವಾಹನವೊಂದು ಯಾರನ್ನೋ ಕಾಯುತ್ತಿರುವಂತೆ ನಿಂತಿರುವುದನ್ನು ಸ್ಥಳಿಯರು ನೋಡಿದ್ದಾರೆ. ಬಳಿಕ ಬಳಿಕ ಸುಮಾರು 1 ಗಂಟೆ ಸಮಯಕ್ಕೆ ವಿಕ್ರಂ ಜೈನ್ ಅವರ ಕೊಲೆಯಾಗಿರಬಹುದೆಂದು ಶಂಕಿಶಲಾಗಿದೆ.

ವಿಕ್ರಮ್ ಜೈನ್ ಅವರ ಕಾರಿನ ಬಳಿ ಮದ್ಯದ ಬಾಟಲಿ ಪತ್ತೆಯಾಗಿದೆ. ಕುಡಿದ ಮತ್ತಿನಲ್ಲಿ ಜಗಳ ಉಂಟಾಗಿ ಹೊಡೆದಾಟ ನಡೆದು ಕೊಲೆ ಮಾಡಿರಬಹುದೇ? ಅಥವಾ ಯಾವುದೋ ವ್ಯವಹಾರಕ್ಕೆ ಸಂಬಂಧಿಸಿ ಕೊಲೆ ನಡೆದಿರಬಹುದೇ? ಎಂಬಿತ್ಯಾದಿ ಸಂಶಯಗಳು ಸ್ಥಳೀಯವಾಗಿ ಕೇಳಿ ಬಂದಿದೆ.

ಇನ್ನೊಂದೆಡೆ ಆಸ್ತಿ ವಿವಾದ ಅಥವಾ ಯಾವುದೋ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದ ದ್ವೇಷಕ್ಕಾಗಿ ಕೊಲೆ ನಡೆದಿರಬಹುದೆಂದು ಶಂಕಿಸಲಾಗಿದೆ. ಕೊಲೆಯ ಸುತ್ತ ಅನುಮಾನಗಳು ಹೆಚ್ಚಾಗಿವೆ.

ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು, ಬೆರಳಚ್ಚು ತಜ್ಞರು ಭೇಟಿ ನೀಡಿ ಮಹಜರು, ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಬೆಳ್ತಂಗಡಿ ಪೊಲೀಸರು ಪ್ರಾಥಮಿಕ ತನಿಖೆ ಆರಂಭಿಸಿದ್ದು ಮೂವರು ಶಂಕಿತರನ್ನು ವಶಕ್ಕೆ ತೆಗೆದುಕೊಂಡಿದ್ದು ತನಿಖೆ ತೀವ್ರಗೊಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ