ಆ್ಯಪ್ನಗರ

ಸರಕಾರಿ ಪ್ರಾಯೋಜಿತ ಹಿಂಸೆ ಆರೋಪ

ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ನಡೆಯುವ ಪ್ರತಿಭಟನೆಯನ್ನು ನಿಷೇಧಾಜ್ಞೆ ಮೂಲಕ ಹತ್ತಿಕ್ಕಿ, ಪ್ರತಿಭಟನೆ ನಡೆಸಿದವರ ಮೇಲೆ ಲಾಠಿಚಾಜ್‌ರ್‍, ಗೋಲಿಬಾರ್‌ ಮೂಲಕ ಜನರ ಬಾಯಿ ಮುಚ್ಚಿಸಿ ಕಾನೂನು ಜಾರಿಗೆ ಸರಕಾರ ಮುಂದಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಜೋಜ ಹೇಳಿದರು.

Vijaya Karnataka 22 Dec 2019, 5:00 am
ಮಂಗಳೂರು: ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ನಡೆಯುವ ಪ್ರತಿಭಟನೆಯನ್ನು ನಿಷೇಧಾಜ್ಞೆ ಮೂಲಕ ಹತ್ತಿಕ್ಕಿ, ಪ್ರತಿಭಟನೆ ನಡೆಸಿದವರ ಮೇಲೆ ಲಾಠಿಚಾಜ್‌ರ್‍, ಗೋಲಿಬಾರ್‌ ಮೂಲಕ ಜನರ ಬಾಯಿ ಮುಚ್ಚಿಸಿ ಕಾನೂನು ಜಾರಿಗೆ ಸರಕಾರ ಮುಂದಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಜೋಜ ಹೇಳಿದರು.
Vijaya Karnataka Web ivan says its government sponcered violence
ಸರಕಾರಿ ಪ್ರಾಯೋಜಿತ ಹಿಂಸೆ ಆರೋಪ


ಮಂಗಳೂರಿನಲ್ಲಿಸರಕಾರಿ ಪ್ರಾಯೋಜಿತ ಹಿಂಸಾಚಾರ ನಡೆದಿದೆ. ಸಹಜ ಪರಿಸ್ಥಿತಿಯಿದ್ದರೂ, ಕಫ್ರ್ಯೂ ಹೇರಿದ್ದರಿಂದ ಸಾರ್ವಜನಿಕರು ತೀವ್ರ ಹಿಂಸೆ ಅನುಭವಿಸುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ಅವರು ತಿಳಿಸಿದರು.

ಮುಸ್ಲಿಮರನ್ನು ಬಿಟ್ಟು ಉಳಿದವರಿಗೆ ಮಾತ್ರ ಪೌರತ್ವ ನೀಡುತ್ತೇವೆ ಎಂದು ಸ್ವತಃ ಗೃಹ ಸಚಿವರು ಪಾರ್ಲಿಮೆಂಟ್‌ನಲ್ಲಿ ಹೇಳಿದ್ದಾರೆ. ಅಜ್ಜ ಮುತ್ತಜ್ಜನ ದಾಖಲೆ ತೋರಿಸದವರಿಗೆ ಪೌರತ್ವದಿಂದ ಹೊರಗಿಡಲಾಗಿದೆ. ಇಂಥ ಗೊಂದಲ ಕಣ್ಣ ಮುಂದೆ ಇರುವಾಗ ಆಡಳಿತ ಪಕ್ಷ ಆಯಾ ಪ್ರದೇಶದಲ್ಲಿ ತಿಳಿವಳಿಕೆ ಮೂಡಿಸಬೇಕು. ಅದನ್ನು ಬಿಟ್ಟು ಬಾಯಿ ಮುಚ್ಚಿಸಿ, ಪ್ರತಿಪಕ್ಷದ ಮನ್ನಣೆ ಇಲ್ಲದೆ, ಹಿಟ್ಲರ್‌ ಮಾದರಿಯಲ್ಲಿಕಾನೂನು ಹೇರಲು ಭಾರತೀಯರು ಬಿಡುವುದಿಲ್ಲ ಎಂದರು.

ಶಾಸಕ ಯು.ಟಿ.ಖಾದರ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌, ಮಾಜಿ ಶಾಸಕ ಜೆ.ಆರ್‌.ಲೋಬೊ, ಕಾರ್ಪೊರೇಟರ್‌ ಎ.ಸಿ.ವಿನಯರಾಜ್‌, ಕಾಂಗ್ರೆಸ್‌ ಮುಖಂಡ ಜಿ.ಎ.ಬಾವ, ನೀರಜ್‌ ಪಾಲ್‌ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ