ಆ್ಯಪ್ನಗರ

ಹಲಸು ಸಾರ ಮೇಳ ಸಮಾರೋಪ

ಹಲಸಿನ ಮೌಲ್ಯವರ್ಧನೆ ಜತೆ ಹಲಸಿನ ಉತ್ಪನ್ನಗಳ ತಯಾರಿಕಾ ಘಟಕಗಳನ್ನು ತಯಾರಿಸಲು ಸೂಕ್ತ ತಳಿಯ ಹಲಸು ಬೆಳೆಸುವ ಅಗತ್ಯವಿದ್ದು, ಇದರ ಸಂಶೋಧನೆಗೆ ಸರಕಾರ ಪ್ರತಿಸ್ಪಂದಿಸಬೇಕು ಎಂದು ನಿವೃತ್ತ ಅರಣ್ಯಾಧಿಕಾರಿ ಗ್ಯಾಬ್ರಿಯಲ್‌ ವೇಗಸ್‌ ಹೇಳಿದರು.

Vijaya Karnataka 17 Jun 2019, 5:00 am
ಪುತ್ತೂರು: ಹಲಸಿನ ಮೌಲ್ಯವರ್ಧನೆ ಜತೆ ಹಲಸಿನ ಉತ್ಪನ್ನಗಳ ತಯಾರಿಕಾ ಘಟಕಗಳನ್ನು ತಯಾರಿಸಲು ಸೂಕ್ತ ತಳಿಯ ಹಲಸು ಬೆಳೆಸುವ ಅಗತ್ಯವಿದ್ದು, ಇದರ ಸಂಶೋಧನೆಗೆ ಸರಕಾರ ಪ್ರತಿಸ್ಪಂದಿಸಬೇಕು ಎಂದು ನಿವೃತ್ತ ಅರಣ್ಯಾಧಿಕಾರಿ ಗ್ಯಾಬ್ರಿಯಲ್‌ ವೇಗಸ್‌ ಹೇಳಿದರು.
Vijaya Karnataka Web jackfruit sara mela in puttur
ಹಲಸು ಸಾರ ಮೇಳ ಸಮಾರೋಪ


ಇಲ್ಲಿಯ ಶ್ರೀ ಮಹಾಲಿಂಗೇಶ್ವರ ನಟರಾಜ ವೇದಿಕೆಯಲ್ಲಿ ಭಾನುವಾರ ಹಲಸು ಸ್ನೇಹ ಸಂಗಮ, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಜೆಸಿಐ ಸಂಸ್ಥೆ ಹಾಗೂ ಮತ್ತಿತರ ಸಂಘಟನೆಗಳ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆದ 'ಹಲಸು ಸಾರ ಮೇಳ-2019' ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ತೋಟಗಾರಿಕೆ ಇಲಾಖೆಗಳು ಸೂಕ್ತ ತಳಿಯ ಹಲಸುಗಳನ್ನು ಬೆಳೆಸಿ ರೈತರಿಗೆ ಉಚಿತವಾಗಿ ಅಥವಾ ಕಡಿಮೆ ದರದಲ್ಲಿ ಗಿಡಗಳನ್ನು ಮಾರಾಟ ಮಾಡಬೇಕು. ಹೀಗೆ ಮಾಡದಿದ್ದಲ್ಲಿ ಹಲಸಿನ ಉತ್ಪನ್ನಗಳ ತಯಾರಿಕಾ ಘಟಕಗಳನ್ನು ಸ್ಥಾಪಿಸಲು ಕಷ್ಟಸಾಧ್ಯ ಎಂದ ಅವರು, ಹಲಸಿನ ಅಭಿವೃದ್ಧಿ, ಅಭಿಯಾನ ಮುಂದಿನ ಪೀಳಿಗೆಗೆ ತಲುಪಿಸಬೇಕಾದರೆ ಉತ್ತಮ ತಳಿಯ ಹಲಸನ್ನು ಬೆಳೆಯುವ ಅಗತ್ಯವಿದೆ ಎಂದರು.

ಕ್ಯಾಂಪ್ಕೋ ಅಧ್ಯಕ್ಷ ಎಸ್‌.ಆರ್‌. ಸತೀಶ್ಚಂದ್ರ ಮಾತನಾಡಿ, ಕಳೆದ 10-12 ವರ್ಷಗಳಿಂದ ಜನಪ್ರಿಯ ಪಡೆಯುತ್ತಿರುವ ಹಲಸಿನ ಮೇಲೆ ಸಹಕಾರಿ ಸಂಸ್ಥೆ ಕಣ್ಣಿಟ್ಟಿದ್ದು, ಮುಂದಿನ ದಿನಗಳಲ್ಲಿ ವಿಶೇಷ ಆದ್ಯತೆ ಮೇರೆಗೆ ಕೆಲಸ ಮಾಡಲಿದೆ. ರೈತರ ಆದಾಯ ಹೆಚ್ಚಿಸುವಲ್ಲಿ ಹಲಸು ಪ್ರಮುಖ ಪಾತ್ರ ವಹಿಸಿದೆ. ಈ ನಿಟ್ಟಿನಲ್ಲಿ ಹಲಸಿನ ಬೀಜದಲ್ಲಿರುವ ಪ್ರೊಟೀನ್‌ಗಳು, ಅದರಿಂದ ತಯಾರಿಸಬಹುದಾದ ಚಾಕಲೇಟ್‌ ಮತ್ತಿತರ ಉತ್ಪನ್ನಗಳ ಸಂಶೋಧನೆಯನ್ನು ಕ್ಯಾಂಪ್ಕೋ ಮಾಡಲಿದೆ. ಇದಕ್ಕಾಗಿ ಈಗಾಗಲೇ ತಜ್ಞರ ಜತೆ ಚರ್ಚೆಗಳು ನಡೆದಿದ್ದು, ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ತರಲಾಗುವುದು ಎಂದರು.

ಆಲಂಗಾರಿನ ಕಸಿ ತಜ್ಞ ಶ್ರೀಕೃಷ್ಣ ಕೆದಿಲಾಯ ಅವರನ್ನು ಸನ್ಮಾನಿಸಲಾಯಿತು. ಮುಳಿಯ ವೆಂಕಟಕೃಷ್ಣ ಶರ್ಮ ಅಭಿನಂದನಾ ಮಾತುಗಳನ್ನಾಡಿದರು. ಹಲಸು ಸ್ನೇಹ ಸಂಗಮದ ಅಧ್ಯಕ್ಷ ಸೇಡಿಯಾಪು ಜನಾರ್ದನ ಭಟ್‌ ಅಧ್ಯಕ್ಷ ತೆ ವಹಿಸಿದ್ದರು. ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯ ಅಧ್ಯಕ್ಷ ಶಿಬಿರ ಜಯರಾಮ ಕೆದಿಲಾಯ, ಹಲಸು ಸ್ನೇಹ ಸಂಗಮದ ಕಾರ್ಯದರ್ಶಿ ಸುಹಾಸ್‌ ಮರಿಕೆ, ಸಂಚಾಲಕ ಸತೀಶ್‌, ಜೆಸಿಐ ಅಧ್ಯಕ್ಷ ಗೌತಮ್‌ ರೈ, ಪ್ರಕಾಶ್‌ ಕೊಡೆಂಕಿರಿ ಉಪಸ್ಥಿತರಿದ್ದರು. ನವಚೇತನ ಸ್ನೇಹ ಸಂಗಮದ ಅಧ್ಯಕ್ಷ ಅನಂತ ಪ್ರಸಾದ್‌ ನೈತಡ್ಕ ಸ್ವಾಗತಿಸಿದರು. ಅಡಿಕೆ ಪತ್ರಿಕೆಯ ನಾ.ಕಾರಂತ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು. ನಾನಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸ್ಪರ್ಧಾ ವಿಜೇತರು: ಹಲಸಿನ ಚಿತ್ರ ಬಿಡಿಸುವ ಪ್ರಾಥಮಿಕ ವಿಭಾಗದಲ್ಲಿ ಮಂಗಳಾ ದುರ್ಗಾ (ಪ್ರ), ಸಿಂಚನಾ ಬಿ.ಎಸ್‌. (ದ್ವಿ), ಪ್ರೌಢಶಾಲೆ ವಿಭಾಗದಲ್ಲಿ ಹೇಮಶ್ರೀ (ಪ್ರ), ಧನುಷ್‌ (ದ್ವಿ).

ಕವನ ರಚನೆ : ಕಿರಿಯ ವಿಭಾಗ : ಆಕಾಂಕ್ಷ (ಪ್ರ), ಶ್ರಾವ್ಯ (ದ್ವಿ), ಹಿರಿಯರ ವಿಭಾಗದಲ್ಲಿ ಸವಿತಾ ಭಟ್‌ (ಪ್ರ), ಭವ್ಯಾ ಕೆ. (ದ್ವಿ)

ಹಲಸು ಬೇರ್ಪಡಿಸುವುದು: ಪುರುಷ : ಜಾಕ್‌ ಅನಿಲ್‌ (ಪ್ರ), ಚೇತನ್‌ ಕುಮಾರ್‌ (ದ್ವಿ), ಮಹಿಳೆಯರಲ್ಲಿ ವಸಂತಿ ಭಟ್‌, ಸಹನಾ ಕಾಂತಬೈಲು (ಪ್ರ), ಮೀನಾ ಕುಮಾರಿ (ದ್ವಿ).

ಹಲಸಿನ ಹಣ್ಣು ತಿನ್ನುವ ಸ್ಪರ್ಧೆ : ಮಹಿಳೆಯರ ವಿಭಾಗದಲ್ಲಿ ಸಹನಾ ಕಾಂತಬೈಲು (ಪ್ರ), ರಶ್ಮಿ ಎಚ್‌. (ದ್ವಿ), ಪುರುಷರಲ್ಲಿ ಸತೀಶ್‌ ಕೊಂಬೆಟ್ಟು (ಪ್ರ), ಜಾಕ್‌ ಅನಿಲ್‌ (ದ್ವಿ).

ವಿಶೇಷ ಖಾದ್ಯ ತಯಾರಿಕೆ: ಮಹಿಳೆಯರು ಸಹನಾ ಕಾಂತಬೈಲು (ಪ್ರ), ಭಾಗ್ಯಲಕ್ಷ್ಮೀ (ದ್ವಿ), ಸವಿತಾ ಭಟ್‌ (ತೃ), ಪುರುಷರು: ವಸಂತ ಕುಲಾಲ್‌ (ಪ್ರ), ರಮೇಶ್‌ ಕೆ.ವಿ. (ದ್ವಿ)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ