ಆ್ಯಪ್ನಗರ

ಸಿದ್ದರಾಮಯ್ಯರೇ, ನಿಮ್ಮ ಕುರ್ಚಿ ಅಲುಗಾಡ್ತಿದೆ: ಜನಾರ್ದನ ಪೂಜಾರಿ

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮತ್ತೆ ಧ್ವನಿಯೆತ್ತಿರುವ ಹಿರಿಯ ಕಾಂಗ್ರೆಸಿಗ ಜನಾರ್ದನ ಪೂಜಾರಿ ಅವರು, 'ಸಿಎಂ ಅವರೇ, ನಿಮ್ಮ ಕುರ್ಚಿ ಅಲುಗಾಡುತ್ತಿದೆ' ಎಂದರು.

ವಿಕ ಸುದ್ದಿಲೋಕ 26 Jul 2016, 1:30 pm
ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮತ್ತೆ ಧ್ವನಿಯೆತ್ತಿರುವ ಹಿರಿಯ ಕಾಂಗ್ರೆಸಿಗ ಜನಾರ್ದನ ಪೂಜಾರಿ ಅವರು, 'ಸಿಎಂ ಅವರೇ, ನಿಮ್ಮ ಕುರ್ಚಿ ಅಲುಗಾಡುತ್ತಿದೆ' ಎಂದರು.
Vijaya Karnataka Web janardhana poojary attacks cm again
ಸಿದ್ದರಾಮಯ್ಯರೇ, ನಿಮ್ಮ ಕುರ್ಚಿ ಅಲುಗಾಡ್ತಿದೆ: ಜನಾರ್ದನ ಪೂಜಾರಿ


ಪಕ್ಷದ ವಿರುದ್ಧವೇ ಹೇಳಿಕೆ ನೀಡುತ್ತಾರೆಂಬ ಕಾರಣಕ್ಕೆ ಅಘೋಷಿತ ನಿರ್ಬಂಧದಿಂದಾಗಿ ಕಾಂಗ್ರೆಸ್ ಕಚೇರಿಯ ಬದಲಾಗಿ, ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ರಾಜ್ಯ ಸಾರಿಗೆ ಇಲಾಖೆಯ ಸಿಬ್ಬಂದಿಯ ಮುಷ್ಕರವನ್ನು ಮುಖ್ಯಮಂತ್ರಿಯವರು ಗಂಭೀರವಾಗಿ ಪರಿಗಣಿಸಿಲ್ಲ ಎಂದು ದೂರಿದ ಅವರು, 'ಸಿಎಂ ಅವರೇ ನಿಮ್ಮ ಕುರ್ಚಿ ಅಲುಗಾಡುತ್ತಿದೆ. ಹೈಕಮಾಂಡ್ ಮುಂದೆ ಆಸ್ಕರ್ (ಫೆರ್ನಾಂಡಿಸ್), ಖರ್ಗೆ, ಪರಮೇಶ್ವರ್ ಅವರ ಹೆಸರಿದೆ' ಎಂದು ಎಚ್ಚರಿಕೆ ನೀಡಿದರು.

'ಸಿಎಂ ಎಲ್ಲ ವಿಷಯದಲ್ಲಿಯೂ ವಿಫಲರಾಗಿದ್ದಾರೆ. ಹೈಕಮಾಂಡ್ ಸುಮ್ಮನೆ ಕೂರುತ್ತದೆ ಎಂದು ಭಾವಿಸಬೇಡಿ' ಎಂದು ಪೂಜಾರಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಎಚ್ಚರಿಕೆ ನೀಡಿದರು.

'ಕಾಲ ಮಿಂಚಿ ಹೋಗ್ಲಿಲ್ಲ. ಇನ್ನಾದರೂ ಹೈಕಮಾಂಡ್ ಏನು ಹೇಳುತ್ತದೆ ಎಂಬುದನ್ನು ಅರಿಯಲು ದಿಲ್ಲಿಗೆ ಹೊರಡಿ. ಅವರ ಜತೆ ಚರ್ಚೆ ಮಾಡಿ. ಇಲ್ಲದಿದ್ದರೆ ಶಾಸಕರ ಸಭೆ ಕರೀತಾರೆ, ಕಾರ್ಮಿಕರ ಸಮಸ್ಯೆಯನ್ನು ಅರಿತ ನಿಪುಣರಾದ ಆಸ್ಕರ್ ಫರ್ನಾಂಡಿಸರನ್ನು ಮುಖ್ಯಮಂತ್ರಿಯಾಗಿ ಮಾಡ್ತಾರೆ. ಅಥವಾ ಮಲ್ಲಿಕಾರ್ಜುನ ಖರ್ಗೆ, ಮಹಿಳೆಯರಲ್ಲಾದರೆ ಸ್ತ್ರೀಶಕ್ತಿಗೆ ರೂಪ ಕೊಟ್ಟ ಮೋಟಮ್ಮ, ಗೃಹ ಸಚಿವ, ಕಾಂಗ್ರೆಸ್ ಅಧ್ಯಕ್ಷ ಪರಮೇಶ್ವರ್ ಕೂಡ ಇದ್ದಾರೆ' ಎಂದೂ ಪೂಜಾರಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ