ಆ್ಯಪ್ನಗರ

ಕೈರಂಗಳ ಶಾಲೆಗೆ ಹೊಸ ಕಳೆ

ಕಾಸರಗೋಡು ಹಿರಿಯ ಪ್ರಾಥಮಿಕ ಶಾಲೆ ಚಲನಚಿತ್ರ ಚಿತ್ರೀಕರಣಗೊಂಡ ಬಂಟ್ವಾಳ ತಾಲೂಕಿನ ಕೈರಂಗಳ ಗ್ರಾಮದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮತ್ತೆ ತನ್ನ ಗತ ವೈಭವ ಸಾರಲು ಮುಂದಾಗಿದೆ.

Vijaya Karnataka 22 Jun 2019, 3:31 pm
ಜನಾರ್ದನ ಪುಂಡಿಕಾೖ ಕೊಣಾಜೆ
Vijaya Karnataka Web MNR-21ULLAL KAIRANGALA


ಕಾಸರಗೋಡು ಹಿರಿಯ ಪ್ರಾಥಮಿಕ ಶಾಲೆ ಚಲನಚಿತ್ರ ಚಿತ್ರೀಕರಣಗೊಂಡ ಬಂಟ್ವಾಳ ತಾಲೂಕಿನ ಕೈರಂಗಳ ಗ್ರಾಮದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮತ್ತೆ ತನ್ನ ಗತ ವೈಭವ ಸಾರಲು ಮುಂದಾಗಿದೆ.

ಈ ಶಾಲೆ ಅಪ್ಪಟ ಕನ್ನಡ ಭಾಷೆಯಲ್ಲಿ ಶಿಕ್ಷ ಣ ನೀಡುವ ಶಾಲೆಯಾಗಿದ್ದರೂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದನ್ನು ಗಮನಿಸಿಈ ಶೈಕ್ಷಣಿಕ ಸಾಲಿನಿಂದ ಕನ್ನಡ ಮಾಧ್ಯಮದ ಜತೆಗೆ ಆಂಗ್ಲ ಮಾಧ್ಯಮ ಶಿಕ್ಷ ಣವನ್ನು ವಿದ್ಯೋದಯ ಪೂರ್ವ ಪ್ರಾಥಮಿಕ ಶಾಲೆಯಾಗಿ ಪ್ರಾರಂಭಿಸಿದೆ. ಆಡಳಿತ ಮಂಡಳಿ ಗುರುವಾರ ಆಂಗ್ಲ ಭಾಷೆಯ ಪೂರ್ವ ಪ್ರಾಥಮಿಕ ಶಿಕ್ಷ ಣದ ಎಲ್‌ಕೆಜಿ ಹಾಗೂ ಯುಕೆಜಿ ಏಕಕಾಲದಲ್ಲಿ ಆರಂಭಿಸಿದೆ. ಚಿತ್ರೀಕರಣದಲ್ಲಿ ಬ್ಯುಸಿ ಆಗಿರುವ ನಿರ್ದೇಶಕ ರಿಷಬ್‌ ಶೆಟ್ಟಿ ಅನುಪಸ್ಥಿತಿಯಲ್ಲಿ ಉದ್ಘಾಟಿಸಿದರೂ ಅವರು ಬರುವ ದಿನ ನಿಗದಿಯಾಗುತ್ತಿದ್ದಂತೆಯೇ ಶಾಲೆ ಹಳೆ ವಿದ್ಯಾರ್ಥಿಗಳು, ಪೋಷಕರು, ದಾನಿಗಳ ಸಮ್ಮುಖದಲ್ಲಿ ಒಂದು ಸುಂದರ ಕಾರ್ಯಕ್ರಮ ನಡೆಸಲು ತಯಾರಾಗಿದೆ. ಧಾರವಾಡದ ಇಬ್ಬರು ಉದ್ಯಮಿಗಳು ಚಿತ್ರೀಕರಣಗೊಂಡ ಶಾಲೆಯ ನೋಡುವ ಸಲುವಾಗಿ ಗುರುವಾರ ಬಂದಿದ್ದು ಶಾಲೆಗೆ ನೆರವಾಗುವ ಭರವಸೆ ಕೊಟ್ಟಿದ್ದಾರೆ.

ನೂತನ ತರಗತಿ ಎಲ್ಲ ರೀತಿಯಲ್ಲಿ ಸಿದ್ಧಗೊಂಡಿದ್ದು ವಿಶೇಷವೆಂದರೆ ಅನುದಾನಿತ ಶಾಲೆಯಾಗಿದ್ದರೂ ಸರಕಾರಿ ಶಾಲೆಯಂತೆ ಉಚಿತ ಪ್ರವೇಶ ಶುಲ್ಕ, ಉಚಿತ ಪುಸ್ತಕ ಕೊಡುವ ವ್ಯವಸ್ಥೆ ಮಾಡಲಾಗಿದೆ. ಕನ್ನಡ ಮಾಧ್ಯಮದಂತೆ ಆಂಗ್ಲ ಭಾಷಾ ಶಿಕ್ಷಣ ಖಾಸಗಿ ಶಾಲೆಯಾಗಿದ್ದರೂ ಉಚಿತವಾಗಿ ಸಿಗುತ್ತದೆ ಎಂಬ ಬ್ರ್ಯಾಂಡ್‌ನೊಂದಿಗೆ ಸುತ್ತಮುತ್ತಲಿನ ಪೋಷಕರಿಗೆ ಮಹದಾನಂದ ತಂದಿದೆ. ಮೊದಲ ಬ್ಯಾಚ್‌ನಲ್ಲಿ ಅದಾಗಲೇ ಅರುವತ್ತು ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದು ಇನ್ನೂ ಎಂಟು ವಿದ್ಯಾರ್ಥಿಗಳು ಸೇರ್ಪಡೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಮುಖ್ಯ ಶಿಕ್ಷಕ ದೇವದಾಸ್‌ ಕೆ.


ರಿಷಬ್‌ ಶೆಟ್ಟಿ ನೆರವು

ಈ ಶಾಲೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಲನಚಿತ್ರ ಚಿತ್ರೀಕರಣಗೊಂಡಿತ್ತು. ಚಿತ್ರೀಕರಣಕ್ಕೂ ಮುನ್ನ ಚಿತ್ರ ಯಶಸ್ವಿಯಾದರೆ ಶಾಲೆಯ ಅಭಿವೃದ್ಧಿಯತ್ತ ಸ್ವಲ್ಪ ಗಮನ ಕೊಡಬೇಕು, ಸಹಕರಿಸಬೇಕು ಎಂದು ಆಡಳಿತ ಮಂಡಳಿ ಅಧ್ಯಕ್ಷ ಕೊಲ್ಲರಮಜಲು ಶಂಕರ್‌ ಭಟ್‌ ಚಿತ್ರದ ನಿರ್ದೇಶಕ ರಿಷಬ್‌ ಶೆಟ್ಟಿ ಅವರನ್ನು ಕೇಳಿಕೊಂಡಿದ್ದರು. ಚಿತ್ರ ಯಶಸ್ವಿಯಾದ ಹಿನ್ನೆಲೆಯಲ್ಲಿ ನಿರ್ದೇಶಕ ರಿಷಬ್‌ ಶೆಟ್ಟಿ ಶಾಲೆಗೆ ಹಂಚಿನ ಮಾಡು, ಮರದ ಪರಿಕರ ಹಾಗೂ ಪೈಂಟಿಂಗ್‌ ಮಾಡಿಸಿದ್ದಾರೆ. ಶಾಲೆಯ ಗೋಡೆ ತುಂಬೆಲ್ಲ ಬಣ್ಣದ ಚಿತ್ತಾರ ಮೂಡಿದೆ. ಪ್ರಸ್ತುತ ಕನ್ನಡ ಮಾಧ್ಯಮ ಶಾಲೆಯಲ್ಲಿ ಒಂದರಿಂದ ಏಳನೆಯ ತರಗತಿ ತನಕ ಇಪ್ಪತ್ತಮೂರು ವಿದ್ಯಾರ್ಥಿಗಳು ಕಲಿಯುತ್ತಿದ್ದು ಇಬ್ಬರು ಸರಕಾರದಿಂದ ನೇಮಕಗೊಂಡ ಶಿಕ್ಷ ಕರು ಹಾಗೂ ಒಬ್ಬ ಶಿಕ್ಷ ಕಿ ಸ್ವಯಂಸೇವಕಿಯಾಗಿ ಕಲಿಸುತ್ತಿದ್ದಾರೆ.

ಶಾಲೆಯ ಒಂದು ಕಿ. ಮೀ. ಅಂತರದಲ್ಲಿ ಪೂರ್ವ ಹಾಗೂ ಪಶ್ಚಿಮದಲ್ಲಿ ಎರಡು ಆಂಗ್ಲ ಮಾಧ್ಯಮ ಶಾಲೆಗಳಿದ್ದರೂ ನಮ್ಮ ಆಂಗ್ಲಮಾಧ್ಯಮ ಶಿಕ್ಷಣಕ್ಕೆ ಮೊದಲ ಬ್ಯಾಚ್‌ನಲ್ಲಿ ಸರಕಾರ ನಿಗದಿಪಡಿಸಿದ ವಿದ್ಯಾರ್ಥಿಗಳು ಸೇರ್ಪಡೆಗೊಂಡಿರುವುದು ಖುಷಿ ಕೊಟ್ಟಿದೆ. ಅದಕ್ಕಾಗಿ ಮನೆಮನೆಗೆ ತೆರಳಿದ್ದೇವೆ, ಅಂಗನವಾಡಿಯಲ್ಲೂ ಮಾಹಿತಿ ಕೊಟ್ಟು ಬಂದಿದ್ದೆವು. ಕನ್ನಡ ಮಾಧ್ಯಮ ಶಾಲೆ ಮುಚ್ಚುವ ಹಂತ ತಲುಪಿದ್ದಾಗ ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ಕರೆದುಕೊಂಡು ಹೋದ ಪೋಷಕರು ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಮತ್ತೆ ಇದೇ ಶಾಲೆಗೆ ಕರೆದುಕೊಂಡು ಬಂದಿದ್ದಾರೆÜ. ಇಬ್ಬರು ಶಿಕ್ಷಕಿಯರಿದ್ದು ಗುಣಮಟ್ಟದ ಶಿಕ್ಷಣ ಕೊಡಲು ಹಾಗೂ ಮಕ್ಕಳ ಮನಸ್ಸಿನ ಭಾವನೆ ಆಂಗ್ಲ ಭಾಷೆಯಲ್ಲೇ ಮೂಡಿಬರುವಂತಹ ಶಿಕ್ಷಣ ಕೊಡಲು ಸದಾ ಕಾಲ ನಾವು ನೆರವಾಗಲಿದ್ದೇವೆ. ಇಲ್ಲಿನ ಶಿಕ್ಷಣ ಕನ್ನಡ ಮಾಧ್ಯಮದ ತರ್ಜುಮೆ ಆಗದೆ ಮಾಧ್ಯಮವೇ ಶಿಕ್ಷಣ ಆಗುವ ನಿಟ್ಟಿನಲ್ಲಿ ಕಾರ್ಯಾಚರಿಸಲಿದ್ದೇವೆ.

ಶಂಕರ್‌ ಭಟ್‌ ಕೊಲ್ಲರಮಜಲು
ಆಡಳಿತ ಮಂಡಳಿ ಅಧ್ಯಕ್ಷರು


ಆಂಗ್ಲಮಾಧ್ಯಮ ಶಿಕ್ಷಣ ಆರಂಭವಾದರೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೂ ಇಲ್ಲಿ ಅವಕಾಶವಿದೆ. ಅನುಕೂಲಕ್ಕೆ ತಕ್ಕಂತೆ ಆಂಗ್ಲಮಾಧ್ಯಮ ಆರಂಭಿಸಿದ್ದೇವೆ. ಒಳ್ಳೆಯ ಸ್ಪಂದನೆ ಸಿಕ್ಕ್ಕಿದೆ. ಕೈರಂಗಳ ಶಾಲೆಯ ಹಳೆ ಹೆಸರು ಮತ್ತೆ ರಾರಾಜಿಸಲಿದೆ.

ದೇವದಾಸ್‌ ಕೆ
ಮುಖ್ಯ ಶಿಕ್ಷಕರು



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ