ಆ್ಯಪ್ನಗರ

ಫೋರ್ಬ್ಸ್‌ನಲ್ಲಿ ಸ್ಥಾನಗಿಟ್ಟಿಸಿದ ಕರಾವಳಿಯ ಸಾಧಕ

ಅಮೆರಿಕದ ಖ್ಯಾತ ನಿಯತಕಾಲಿಕ ಫೋರ್ಬ್ಸ್‌ ಪ್ರಕಟಿಸಿದ ಯುವ ಸಾಧಕರ ಪಟ್ಟಿಯಲ್ಲಿ ಕುಡ್ಲದ ಸಾಧಕರೊಬ್ಬರು ಜಾಗ ಪಡೆದುಕೊಂಡಿದ್ದಾರೆ.

Vijaya Karnataka Web 3 Mar 2017, 12:31 pm
ಅಮೆರಿಕದ ಖ್ಯಾತ ನಿಯತಕಾಲಿಕ ಫೋರ್ಬ್ಸ್‌ ಪ್ರಕಟಿಸಿದ ಯುವ ಸಾಧಕರ ಪಟ್ಟಿಯಲ್ಲಿ ಕುಡ್ಲದ ಸಾಧಕರೊಬ್ಬರು ಜಾಗ ಪಡೆದುಕೊಂಡಿದ್ದಾರೆ. ಫೋರ್ಬ್ಸ್‌ ಅಂಡರ್‌ 30 ಸಾಧಕರಲ್ಲಿ ಮಂಗಳೂರಿನ ಅಶ್ವಥ್‌ ಹೆಗ್ಡೆ ಕೂಡ ಸ್ಥಾನ ಪಡೆದುಕೊಳ್ಳುವ ಮೂಲಕ ರಾಜ್ಯದಲ್ಲಿಯೇ ಮೊದಲ ಬಾರಿಗೆ ಫೋರ್ಬ್ಸ್‌ ಲೀಸ್ಟ್‌ನಲ್ಲಿ ಕಾಣಿಸಿಕೊಂಡ ಯುವ ಉದ್ಯಮಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
Vijaya Karnataka Web karavali boy name appeared in forbs magazine
ಫೋರ್ಬ್ಸ್‌ನಲ್ಲಿ ಸ್ಥಾನಗಿಟ್ಟಿಸಿದ ಕರಾವಳಿಯ ಸಾಧಕ


ಬೆಳ್ತಂಗಡಿ ತಾಲೂಕಿನ ಬಳ್ಳಂಜದ ಅಶ್ವಥ್‌ ಹೆಗ್ಡೆ ಅವರು ಎನ್ವೀ ಗ್ರೀನ್‌ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಪ್ಲಾಸ್ಟಿಕ್‌ಮುಕ್ತ ಜಗತ್ತು ರೂಪಿಸುವ ಕುರಿತು ಕನಸು ಕಂಡವರು. ಅವರು ಎನ್ವೀ ಗ್ರೀನ್‌ ಸಂಸ್ಥೆ ಮೂಲಕ ಪ್ಲಾಸ್ಟಿಕ್‌ ರಹಿತ, ಜೈವಿಕ ಕೈ ಚೀಲವನ್ನು ತಯಾರಿಸಿ ದೇಶ- ವಿದೇಶಗಳಲ್ಲಿ ಈಗಾಗಲೇ ಸಾಕಷ್ಟು ಹೆಸರು ಪಡೆದುಕೊಂಡಿದ್ದಾರೆ.

ಜೈವಿಕ ಬ್ಯಾಗ್‌ನ ಹಿಂದಿನ ಕತೆ:
ಅಶ್ವಥ್‌ ಹೆಗ್ಡೆ ಮಂಗಳೂರಿನಲ್ಲಿ ಓದುತ್ತಿರುವಾಗ ಪ್ಲಾಸ್ಟಿಕ್‌ ಬ್ಯಾಗ್‌ ನಿಷೇಧ ಮಾಡುವ ವಿಚಾರ ಸಾಕಷ್ಟು ಸುದ್ದಿಯಲ್ಲಿತ್ತು. ಇದೇ ಸಮಯದಲ್ಲಿ ಪರಿಸರ ಪೂರಕವಾದ ವಸ್ತುಗಳ ವಿಚಾರದಲ್ಲಿ ಪ್ರಾಜೆಕ್ಟ್ಗಳನ್ನು ಮಾಡಿಕೊಂಡು ಏನಾದರೂ ಪ್ಲಾಸಿಕ್‌ ರಹಿತವಾದ ಬ್ಯಾಗ್‌ ಸಿದ್ಧಪಡಿಸಬೇಕು ಎನ್ನುವ ಮೂಲಕ ಜೈವಿಕ ಬ್ಯಾಗ್‌ ಮಾಡುವ ಯೋಜನೆ ತಲೆಯಲ್ಲಿ ನುಸುಳಿಕೊಂಡಿತು.

ಅಂದಹಾಗೆ ಈ ಜೈವಿಕ ಬ್ಯಾಗ್‌ಗಳು ತರಕಾರಿ ಸೇರಿದಂತೆ ಜೋಳ ಇತರ ತ್ಯಾಜ್ಯದಿಂದ ತಯಾರಿಸಲಾಗುತ್ತದೆ. ಬೇರೆ ಬೇರೆ ಗಾತ್ರದ ಬ್ಯಾಗ್‌ಗಳಿಗೆ ಒಂದೊಂದು ರೀತಿಯ ದರವಿದೆ. ಮುಖ್ಯವಾಗಿ 3ರಿಂದ 5 ರೂಪಾಯಿ ಒಳಗಡೆ ಈ ಬ್ಯಾಗ್‌ ಗ್ರಾಹಕರ ಕೈ ಸೇರುತ್ತದೆ. 100 ಸೆಲ್ಸಿಗ್ರೇಡ್‌ನಲ್ಲಿ ಬಿಸಿ ನೀರಿಗೆ ಹಾಕಿದರೆ ಈ ಬ್ಯಾಗ್‌ ಕರಗಿ ಹೋಗುತ್ತದೆ. ವರ್ಷಗಳ ಹಿಂದೆ ದುಬಾಯಿ ಹಾಗೂ ಕತಾರ್‌ ಮಾರುಕಟ್ಟೆಯನ್ನು ಪ್ರವೇಶ ಮಾಡಿದ ಜೈವಿಕ ಬ್ಯಾಗ್‌ ಈಗ ಭಾರತದ ಎಲ್ಲ ರಾಜ್ಯಗಳಲ್ಲೂ ಲಭ್ಯ.

ಬೆಂಗಳೂರಿನಲ್ಲಿ ದೊಡ್ಡ ಫ್ಯಾಕ್ಟರಿ:
ಜೈವಿಕ ಬ್ಯಾಗ್‌ ತಯಾರಿಕೆಗಾಗಿ ರಾಜ್ಯದ ಬೆಂಗಳೂರಿನಲ್ಲಿ ಒಂದು ಕಾರ್ಖಾನೆ ನಿರ್ಮಾಣ ಮಾಡಲಾಗಿದೆ. ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಖರೀದಿ ಕೇಂದ್ರ ಮಾಡಿಕೊಂಡು ರೈತರಿಂದ ನೇರವಾಗಿ ಬೆಳೆಗಳನ್ನು ಖರೀದಿ ಮಾಡಿ ಅದನ್ನೇ ಬಳಸಿಕೊಂಡು ಜೈವಿಕ ಬ್ಯಾಗ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ. ಬೆಂಗಳೂರು ಮೂಲಕವೇ ಇಡೀ ದೇಶದಲ್ಲಿ ಜೈವಿಕ ಬ್ಯಾಗ್‌ ರವಾನೆ ಮಾಡುವ ಕೆಲಸ ಸಾಗುತ್ತಿದೆ ಎನ್ನುತ್ತಾರೆ ಅಶ್ವಥ್‌ ಹೆಗ್ಡೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ