ಆ್ಯಪ್ನಗರ

25 ಜಿಲ್ಲೆಗಳ ವಕ್ಫ್ ಮಂಡಳಿ ಅಧ್ಯಕ್ಷರ ನೇಮಕ ಕುರಿತ ಗುದ್ದಾಟಕ್ಕೆ ಮಾತುಕತೆ ಮೂಲಕ ಪರಿಹಾರ: ಶಾಫಿ ಸಅದಿ

ರಾಜ್ಯದಲ್ಲಿ ಕಬಳಿಕೆಯಾಗಿರುವ ವಕ್ಫ್ ಆಸ್ತಿ ಮರಳಿ ಪಡೆಯಲು, ಈಗಿರುವ ಆಸ್ತಿ ರಕ್ಷಣೆಗೆ ಮತ್ತು ಕಾನೂನು ಹೋರಾಟದಲ್ಲಿ ವಕ್ಫ್ ಮಂಡಳಿಗೆ ಹಿನ್ನಡೆ ಆಗುವುದನ್ನು ತಪ್ಪಿಸಲು ತಜ್ಞರ ವಕೀಲರ ಸಲಹೆ ಮೂಲಕ ಮುಂದುವರಿಲು ಆದ್ಯತೆ ನೀಡಲಾಗುತ್ತಿದೆ. ವಕ್ಫ್ ಸಚಿವೆ ಶಶಿಕಲಾ ಅವರ ನೆರವಿನಿಂದ ಸುಮಾರು 70 ಕೋಟಿ ರೂ. ವೆಚ್ಚದಲ್ಲಿ ವಕ್ಫ್ ಜಮೀನಿಗೆ ಆವರಣ ಗೋಡೆ ನಿರ್ಮಿಸಲಾಗುತ್ತಿದೆ ಎಂದು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಶಾಫಿ ಸಅದಿ ಹೇಳಿದರು.

Vijaya Karnataka 26 Sep 2022, 10:43 pm
ಮಂಗಳೂರು: ರಾಜ್ಯದ 25 ಜಿಲ್ಲೆಗಳ ವಕ್ಫ್ ಸಲಹಾ ಮಂಡಳಿ ಅಧ್ಯಕ್ಷರ ನೇಮಕ ಕುರಿತು ನಡೆಯುತ್ತಿದ್ದ ರಾಜಕೀಯ ಗುದ್ದಾಟಕ್ಕೆ ಮಾತುಕತೆ ಮೂಲಕ ಪರಿಹಾರ ಒದಗಿಸಲಾಗಿದೆ. ಈಗ ಎಲ್ಲೆಡೆ ಅಧ್ಯಕ್ಷರು ಇದ್ದಾರೆ ಎಂದು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಶಾಫಿ ಸಅದಿ ಹೇಳಿದರು.
Vijaya Karnataka Web shafi saadi


ವಕ್ಫ್‌ನಲ್ಲಿ ಕಾಂಗ್ರೆಸ್‌-ಬಿಜೆಪಿ ಗುದ್ದಾಟ ನಡೆಯಬಾರದು. ಇದು ಸ್ವಾಯತ್ತ ಸಂಸ್ಥೆ. ಯಾವುದೇ ಪ್ರಭಾವ ಬೀರದೆ, ಪ್ರಾಮಾಣಿಕವಾಗಿ ಕೆಲಸ ಮಾಡುವವರು ಪದಾಧಿಕಾರಿಗಳಾಗಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು. ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್‌ ಮಾಣಿಪ್ಪಾಡಿ ಸಲ್ಲಿಸಿದ್ದ ವಕ್ಫ್ ಆಸ್ತಿ ಕಬಳಿಕೆ ಕುರಿತ ವರದಿಯನ್ನು ವಕ್ಫ್ ಮಂಡಳಿ 2020ರಲ್ಲೇ ಸ್ವಾಗತಿಸಿತ್ತು. ವಿಧಾನಸಭೆಯಲ್ಲಿ ಮಂಡನೆಯಾಗಿರುವುದು ಉತ್ತಮ ಬೆಳವಣಿಗೆ. ಈ ಬಗ್ಗೆ ಚರ್ಚೆ ನಡೆದು, ಅಗತ್ಯ ಬಿದ್ದರೆ ಸಿಬಿಐ ತನಿಖೆ ನಡೆಯಲಿ. ಕಬಳಿಕೆಯಾಗಿರುವ ವಕ್ಫ್ ಆಸ್ತಿ ಮರಳಿ ಸಿಗಬೇಕು ಎಂದು ಅವರು ಹೇಳಿದರು.
Wakf Property | ವಕ್ಫ್ ಆಸ್ತಿ ಕಬಳಿಕೆ ಬಗ್ಗೆ ಸಿಬಿಐ ತನಿಖೆಯಾಗಲಿ: ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹ
ರಾಜ್ಯದಲ್ಲಿ ಕಬಳಿಕೆಯಾಗಿರುವ ವಕ್ಫ್ ಆಸ್ತಿ ಮರಳಿ ಪಡೆಯಲು, ಈಗಿರುವ ಆಸ್ತಿ ರಕ್ಷಣೆಗೆ ಮತ್ತು ಕಾನೂನು ಹೋರಾಟದಲ್ಲಿ ವಕ್ಫ್ ಮಂಡಳಿಗೆ ಹಿನ್ನಡೆಯಾಗುವುದನ್ನು ತಪ್ಪಿಸಲು ತಜ್ಞರ ವಕೀಲರ ಸಲಹೆ ಮೂಲಕ ಮುಂದುವರಿಲು ಆದ್ಯತೆ ನೀಡಲಾಗುತ್ತಿದೆ. ವಕ್ಫ್ ಸಚಿವೆ ಶಶಿಕಲಾ ಅವರ ನೆರವಿನಿಂದ ಸುಮಾರು 70 ಕೋಟಿ ರೂ. ವೆಚ್ಚದಲ್ಲಿ ವಕ್ಫ್ ಜಮೀನಿಗೆ ಆವರಣ ಗೋಡೆ ನಿರ್ಮಿಸಲಾಗುತ್ತಿದೆ ಎಂದರು.

ವಕ್ಫ್ ಆಸ್ತಿ ಕುರಿತ ಸೆಕ್ಷನ್‌ 54ರ 2750 ಪ್ರಕರಣಗಳಲ್ಲಿ 1045 ವಿಲೇವಾರಿ ಮಾಡಿದ್ದು, 153 ಕಡೆಗಳಲ್ಲಿ ಆಸ್ತಿ ಸ್ವಾಧೀನಕ್ಕೆ ಪಡೆಯಲಾಗಿದೆ. 74 ಕೇಸು ಅಸಿಸ್ಟೆಂಟ್‌ ಕಮಿಷನರ್‌ ಕೋರ್ಟ್‌ನಲ್ಲಿ, 692 ಕೇಸು ಟ್ರಿಬ್ಯೂನಲ್‌ನಲ್ಲಿದೆ. ಒಟ್ಟು ಸುಮಾರು ಶೇ.50 ಆಸ್ತಿ ತೆರವು ಮಾಡಲಾಗಿದೆ. ಶೇ.25ರಷ್ಟು ಜಿಲ್ಲಾಧಿಕಾರಿ ಮತ್ತು ಉಪವಿಭಾಗಧಿಕಾರಿ ಕೋರ್ಟ್‌ನಲ್ಲಿದೆ. ಶೇ.25 ಸ್ವಾಧೀನ ಆಗಬೇಕಿದೆ. ಬೀದರ್‌ನ 1200 ಎಕರೆ ಈದ್ಗಾ ಮತ್ತು ಖಬರಸ್ತಾನ ಭೂಮಿಯನ್ನು ಪ್ರಭಾವಿಗಳು ಕಬಳಿಸಿದ್ದು, 400 ಎಕರೆ ಮಾತ್ರ ಉಳಿದಿದೆ ಎಂದರು.
ರಾಜ್ಯ ವಕ್ಫ್‌ ಬೋರ್ಡ್‌ ಅಧ್ಯಕ್ಷ ಮೌಲಾನಾ ಶಾಫಿ ಸಅದಿಗೆ 'ಜುನೈದಿ' ಸಾಧನಾ ಪ್ರಶಸ್ತಿ
ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಮಂಡಳಿ ಅಧ್ಯಕ್ಷ ಅಬ್ದುಲ್‌ ನಾಸಿರ್‌ ಲಕ್ಕಿಸ್ಟಾರ್‌, ಉಪಾಧ್ಯಕ್ಷರಾದ ಫಕೀರಬ್ಬ, ಅಬ್ದುಲ್‌ ರಹ್ಮಾನ್‌ ಸುಳ್ಯ, ಎ.ಕೆ.ಜಮಾಲ್‌, ಸದಸ್ಯರಾದ ಸಲೀಂ ಬೆಂಗರೆ, ಸಿರಾಜುದ್ದೀನ್‌, ಶಂಸುದ್ದೀನ್‌ ಜೋಕಟ್ಟೆ. ಜಿಲ್ಲಾ ವಕ್ಫ್ ಅಧಿಕಾರಿ ಸಯ್ಯದ್‌ ಮೊಹ್ಸಿನ್‌, ಸೈದುದ್ದೀನ್‌ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ