ಆ್ಯಪ್ನಗರ

ಪೌರತ್ವ ತಿದ್ದುಪಡಿ ಕಾಯಿದೆ ಜಾರಿಗೆ ತಂದರೆ ರಾಜ್ಯ ಹೊತ್ತಿ ಉರಿಯಲಿದೆ ಎಂದದ್ದು ಸತ್ಯ: ಖಾದರ್‌

ರಾಜ್ಯ ಬಿಜೆಪಿ ಸರಕಾರ ಪೌರತ್ವ ಕಾಯಿದೆ ತಿದ್ದುಪಡಿಯನ್ನು ತರಾತುರಿಯಲ್ಲಿ ಜಾರಿಗೊಳಿಸಲು ನಿರ್ಧರಿಸಿರುವುದು ಸರಿಯಲ್ಲ. ಬಿಜೆಪಿಯ ಈ ಗುಪ್ತ ಅಜೆಂಡಾ ಹಿಂದೆ ಚುನಾವಣಾ ರಾಜಕೀಯವಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಆರೋಪಿಸಿದರು.

Vijaya Karnataka Web 18 Dec 2019, 7:05 pm
ಮಂಗಳೂರು: ಮಂಗಳೂರಿನಲ್ಲಿ ಮಂಗಳವಾರ ನಡೆದ ಪೌರತ್ವ ಕಾಯಿದೆ ವಿರುದ್ಧ ಪ್ರತಿಭಟನೆಯಲ್ಲಿ ಈ ಕಾಯಿದೆ ಜಾರಿಗೊಳಿಸಿದರೆ ರಾಜ್ಯ ಕೂಡ ಹೊತ್ತಿ ಉರಿಯಲಿದೆ ಎಂದು ನಾನು ಹೇಳಿರುವುದು ಸತ್ಯ ಎಂದು ಮಾಜಿ ಸಚಿವ ಯುಟಿ ಖಾದರ್‌ ಸ್ಪಷ್ಟಪಡಿಸಿದ್ದಾರೆ.
Vijaya Karnataka Web ಯುಟಿ ಖಾದರ್
ಯುಟಿ ಖಾದರ್


ಮಾಜಿ ಸಚಿವ ಯುಟಿ ಖಾದರ್‌ ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಈಗಾಗಲೇ ಈಶಾನ್ಯ ರಾಜ್ಯಗಳಲ್ಲಿ ಗಲಭೆ ಭುಗಿಲೆದ್ದಿದೆ. ಅದೇ ರೀತಿ ರಾಜ್ಯದಲ್ಲೂ ಗಲಭೆ ಸಂಭವಿಸಬಹುದು ಎಂದು ಹೇಳಿರುವುದಾಗಿ ಶಾಸಕ ಯು.ಟಿ.ಖಾದರ್ ಸ್ಪಷ್ಟಪಡಿಸಿದರು.

ರಾಜ್ಯ ಹೊತ್ತಿ ಉರಿಯುವ ಹೇಳಿಕೆಗೆ ಬಿಜೆಪಿ ಮುಖಂಡರು ಹಾಗೂ ಸಚಿವರ ತೀಕ್ಷ್ಣ ಪ್ರತಿಕ್ರಿಯೆಗಳಿಗೆ ಉತ್ತರಿಸಿದ ಶಾಸಕ ಖಾದರ್, ಕಾಂಗ್ರೆಸ್‌ಗೆ ಅಂತಹ ಯಾವುದೇ ನಂಟು ಇಲ್ಲ. ಕಾಂಗ್ರೆಸ್ ಎಂದಿಗೂ ಪಾಕ್ ಜತೆ ಕೈಜೋಡಿಸಿಲ್ಲ. ಬಿಜೆಪಿಯವರು, ಅದರಲ್ಲೂ ಸಚಿವ ಸಿ.ಟಿ.ರವಿಯಂತಹವರು ಪಾಕ್ ನಂಟಿನ ಕುಟುಂಬ (ಬಿಜೆಪಿ) ದಲ್ಲಿದ್ದಾರೆ ಎಂದು ಟೀಕಿಸಿದರು.

ರಾಜ್ಯ ಹೊತ್ತಿ ಉರಿಯುವ ಹೇಳಿಕೆ ನೀಡಿದ ಖಾದರ್‌ಗೆ ಸದನ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂಬ ಮಾಜಿ ಸಚಿವ ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಖಾದರ್, ಅವರು ಮಾತುಗಳು ಹಲವು ಬಾರಿ ನಗೆಪಾಟಲಿಗೆ ಒಳಗಾಗಿದೆ. ಈಗ ಅವರು ಹೇಳಿರುವುದೂ ಒಳ್ಳೆಯದೇ. ಅವರ ಮಾತಿನಿಂದ ಜನತೆ ಇನ್ನಷ್ಟು ನಗುತ್ತಾರೆ ಎಂದು ಮಾಜಿ ಸಚಿವ ಯುಟಿ ಖಾದರ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ