ಆ್ಯಪ್ನಗರ

ಕಾಶೀ ಮಠಾಧೀಶರಿಂದ ಕೋಟದಲ್ಲಿ ಚಾತುರ್ಮಾಸ ವ್ರತಾರಂಭ

ಮಂಗಳೂರು: ಶ್ರೀ ಸಂಸ್ಥಾನ ಶ್ರೀ ಕಾಶೀಮಠಾಧೀಶರಾದ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ವಿಕಾರಿ ನಾಮ ಸಂವತ್ಸರದ ಚಾತುರ್ಮಾಸ ಸ್ವೀಕಾರಾರ್ಥವಾಗಿ ಕೋಟ ಶ್ರೀ ಕಾಶೀಮಠದಲ್ಲಿ ಪ್ರಾತಃಕಾಲದಲ್ಲಿ ದೇವತಾ ಪ್ರಾರ್ಥನೆ, ರಕ್ಷ ತ್ರಯ ಹವನ, ಸಾನಿಧ್ಯ ಹವನ ನಾನಾ ಗೋತ್ರೆಯ ವೈದಿಕ ವೃಂದದವರ ನೇತೃತ್ವದಲ್ಲಿ ನಡೆಯಿತು.

Vijaya Karnataka 24 Jul 2019, 5:00 am
ಮಂಗಳೂರು: ಶ್ರೀ ಸಂಸ್ಥಾನ ಶ್ರೀ ಕಾಶೀಮಠಾಧೀಶರಾದ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ವಿಕಾರಿ ನಾಮ ಸಂವತ್ಸರದ ಚಾತುರ್ಮಾಸ ಸ್ವೀಕಾರಾರ್ಥವಾಗಿ ಕೋಟ ಶ್ರೀ ಕಾಶೀಮಠದಲ್ಲಿ ಪ್ರಾತಃಕಾಲದಲ್ಲಿ ದೇವತಾ ಪ್ರಾರ್ಥನೆ, ರಕ್ಷ ತ್ರಯ ಹವನ, ಸಾನಿಧ್ಯ ಹವನ ನಾನಾ ಗೋತ್ರೆಯ ವೈದಿಕ ವೃಂದದವರ ನೇತೃತ್ವದಲ್ಲಿ ನಡೆಯಿತು.
Vijaya Karnataka Web kashi sri catrumaasa
ಕಾಶೀ ಮಠಾಧೀಶರಿಂದ ಕೋಟದಲ್ಲಿ ಚಾತುರ್ಮಾಸ ವ್ರತಾರಂಭ


ಶ್ರೀಸಂಸ್ಥಾನದ ಆರಾಧ್ಯ ದೇವರಾದ ಶ್ರೀವ್ಯಾಸ ರಘುಪತಿನರಸಿಂಹ ದೇವರಿಗೆ ವಿಶೇಷ ಪಂಚಾಮೃತ,ಗಂಗಾಭಿಷೇಕ, ಪವಮಾನ ಅಭಿಷೇಕ,ಶತಕಲಶಾಭಿಷೇಕ,ಕನಕಾಭಿಷೇಕಗಳು ಶ್ರೀಗಳವರ ದಿವ್ಯಹಸ್ತಗಳಿಂದ ನೆರವೇರಿತು. ಬಳಿಕ ತಪ್ತ ಮುದ್ರಾಧಾರಣೆಯನ್ನು ಸ್ವೀಕರಿಸಿದ ಶ್ರೀಗಳು,ಸಮಾಜದ ಶಿಷ್ಯವೃಂದಕ್ಕೆ ತಪ್ತಮುದ್ರಾಧಾರಣೆ ನಡೆಸಿ ಅನುಗ್ರಹಿಸಿದರು. ಮಧ್ಯಾಹ್ನ ಪೂಜೆ ಮತ್ತು ಮೃತಿಕೆಯನ್ನು ಪೂಜಿಸಿ ಚಾತುರ್ಮಾಸ ವ್ರತ ಸ್ವೀಕರಿಸಿದರು.

ಸಂಸ್ಕಾರ ಮುಂದುವರಿಯಲಿ: ರಾತ್ರಿ ಪೂಜೆಯ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿ, ಗೌಡ ಸಾರಸ್ವತ ಸಮಾಜದಲ್ಲಿ ಹಿಂದಿನಿಂದಲೂ ನಡೆದು ಬಂದ ಪ್ರತಿಯೊಂದು ಆಚಾರ-ವಿಚಾರ,ಸಂಸ್ಕಾರಗಳು ಅತ್ಯಮೂಲ್ಯವಾಗಿದ್ದು ಅದನ್ನು ಸಮಾಜ ಬಾಂಧವರು ಮುಂದುವರಿಸುವಂತೆ ತಿಳಿಸಿದರು. ಹಾಗೇಯೆ ಸಮಾಜದಲ್ಲಿ ದೇವಭಕ್ತಿ,ಗುರುಭಕ್ತಿ ಅತ್ಯಂತ ಅನುಕರಣೇಯವಾಗಿದ್ದು ಇದು ಇತರ ಸಮಾಜದವರಿಗೂ ಅನುಕರಣೇಯವಾಗಿದೆ ಎಂದರು.

ದೇಶದ ನಾನಾ ಭಾಗಗಳಿಂದ ಆಗಮಿಸಿದ ಮಠ,ಮಂದಿರಗಳ ಮೊಕ್ತೇಸರರು,ಆಡಳಿತ ಮಂಡಳಿಯ ಪ್ರತಿನಿರ್ಧಿಗಳು ಚಾತುರ್ಮಾಸ ವೃತ ಸ್ವೀಕರಿಸಿದ ದಿನದಂದು ಶ್ರೀಗಳವರಿಗೆ ಹಾರಾರ್ಪಣೆ ಮಾಡಿದರು. ಚಾತುರ್ಮಾಸ ಸಮಿತಿಯ ದಾಮೋದರ ಶೆಣೈ ಕುಂದಾಪುರ, ವೆಂಕಟೇಶ ಹರಿಪ್ರಭು, ರಮೇಶ್‌ ಪಡಿಯಾರ್‌, ನರಸಿಂಹ ಪ್ರಭು, ಕೆ.ರಾಧಾಕೃಷ್ಣ, ವಾಸುದೇವ ನಾಯಕ್‌, ವೇದವ್ಯಾಸ ಪೈ, ಶ್ರೀಕಾಂತ್‌ ಶೆಣೈ,ಅರವಿಂದ ಭಟ್‌ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ