ಮಂಗಳೂರು: ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ ಕೇರಳದ 200ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ಕೊರೊನಾ ರೋಗ ದೃಢಫಟ್ಟಿದ್ದು, ಅವರ ಗಂಟಲ ದ್ರವ ಮಾದರಿಯನ್ನು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕಳುಹಿಸಲು ನಿರ್ಧರಿಸಲಾಗಿದೆ. ಇಂಗ್ಲೆಂಡ್ನಿಂದ ಭಾರತಕ್ಕೆ ಆಗಮಿಸಿದ ಕೆಲ ಮಂದಿಗೆ ಇತ್ತೀಚೆಗೆ ರೂಪಾಂತರ ವೈರಸ್ ತಳಿ ಬಂದಿತ್ತು. ಇದಾದ ಬಳಿಕ ಇಂಗ್ಲೆಂಡ್ನಿಂದ ಆಗಮಿಸಿದ ಎಲ್ಲರ ಗಂಟಲು ದ್ರವ ಮಾದಿಯನ್ನು ಪರೀಕ್ಷೆ ನಡೆಸಲಾಗುತ್ತಿತ್ತು. ಬ್ರಿಟನ್ನಿಂದ ಕೇರಳಕ್ಕೆ ಆಗಮಿಸಿದ್ದವರಿಗೂ ರೂಪಾಂತರ ವೈರಸ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ದೃಷ್ಟಿಯಿಂದ ಕೇರಳದಿಂದ ಬಂದು ಕೊರೊನಾ ಸೋಂಕಿಗೆ ತುತ್ತಾದ ವಿದ್ಯಾರ್ಥಿಗಳ ಗಂಟಲ ದ್ರವ ಮಾದರಿ ಬೆಂಗಳೂರಿಗೆ ಕಳುಹಿಸಲಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯ ಒಂದನೇ ಮತ್ತು ಎರಡನೇ ಹಂತದ ಕೊರೊನಾ ನಿರೋಧಕ ಲಸಿಕಾ ಅಭಿಯಾನ ನಡೆಯುತ್ತಿದೆ. ಮೊದಲನೇ ಹಂತದ ಅಭಿಯಾನ ಜ.16ರಿಂದ ಆರಂಭಗೊಂಡಿದ್ದು, ಈವರೆಗೆ ಒಟ್ಟು ಶೇ.53.47ರಷ್ಟು ಗುರಿ ತಲುಪಿದೆ. ಮಂಗಳವಾರದಂದು 4826 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವ ಗುರಿ ಹಾಕಿದ್ದು, ಒಟ್ಟು, 1540 ಮಂದಿಗೆ ಲಸಿಕೆ ಹಾಕಲಾಗಿದ್ದು, ಶೇ.31.91 ಗುರಿ ತಲುಪಿದೆ. ಅದೇ ರೀತಿ ಎರಡನೇ ಹಂತದ ಲಸಿಕೆ ಅಭಿಯಾನದಲ್ಲಿಮಂಗಳವಾರದಂದು 1954 ಮಂದಿ ಗುರಿ ಇರಿಸಿದ್ದು, 641 ಮಂದಿಗೆ ಲಸಿಕೆ ನೀಡಿ ಶೇ.32.80 ಗುರಿ ತಲುಪಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯ ಒಂದನೇ ಮತ್ತು ಎರಡನೇ ಹಂತದ ಕೊರೊನಾ ನಿರೋಧಕ ಲಸಿಕಾ ಅಭಿಯಾನ ನಡೆಯುತ್ತಿದೆ. ಮೊದಲನೇ ಹಂತದ ಅಭಿಯಾನ ಜ.16ರಿಂದ ಆರಂಭಗೊಂಡಿದ್ದು, ಈವರೆಗೆ ಒಟ್ಟು ಶೇ.53.47ರಷ್ಟು ಗುರಿ ತಲುಪಿದೆ. ಮಂಗಳವಾರದಂದು 4826 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವ ಗುರಿ ಹಾಕಿದ್ದು, ಒಟ್ಟು, 1540 ಮಂದಿಗೆ ಲಸಿಕೆ ಹಾಕಲಾಗಿದ್ದು, ಶೇ.31.91 ಗುರಿ ತಲುಪಿದೆ. ಅದೇ ರೀತಿ ಎರಡನೇ ಹಂತದ ಲಸಿಕೆ ಅಭಿಯಾನದಲ್ಲಿಮಂಗಳವಾರದಂದು 1954 ಮಂದಿ ಗುರಿ ಇರಿಸಿದ್ದು, 641 ಮಂದಿಗೆ ಲಸಿಕೆ ನೀಡಿ ಶೇ.32.80 ಗುರಿ ತಲುಪಿದೆ.