ಆ್ಯಪ್ನಗರ

ಮಂಗಳೂರು: ನದಿಗೆ ಬಿದ್ದು ಮಗು ಸಾವು

ಮೀನು ಹಿಡಿಯುವ ವೃತ್ತಿ ನಡೆಸುತ್ತಿದ್ದ ದಂಪತಿಯ ಮಗುವೊಂದು ಆಟವಾಡುವ ವೇಳೆ ನದಿಗೆ ಬಿದ್ದು ಮೃತಪಟ್ಟಿದ್ದು. ನದಿ ಕಿನಾರೆಯಲ್ಲಿ ಬಿದ್ದ ಮಗು ಬಗ್ಗೆ ಇತರೆ ಮಕ್ಕಳು ಮಾಹಿತಿ ನೀಡಿದ್ದಾರೆ.

Vijaya Karnataka Web 8 Aug 2019, 9:52 pm
ಮಂಗಳೂರು: ನಗರದ ಜಪ್ಪಿನಚಮೊಗರು ಕಡೆಕಾರ್ ಬಳಿ 18 ತಿಂಗಳ ಮಗುವೊಂದು ಆಕಸ್ಮಿಕವಾಗಿ ನೇತ್ರಾವತಿ ನದಿಗೆ ಬಿದ್ದು ಮೃತಪಟ್ಟ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
Vijaya Karnataka Web ಪೊಲೀಸ್‌
ಪೊಲೀಸ್‌


ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರು ನಿವಾಸಿಗಳಾದ ರವಿ-ಜ್ಯೋತಿ ದಂಪತಿ ಪುತ್ರ ಅಂಜನ್ ಮೃತಪಟ್ಟ ಮಗು.

ಘಟನೆ ವಿವರ

ನೇತ್ರಾವತಿ ನದಿಯಲ್ಲಿ ಮೀನು ಹಿಡಿಯುವ ವೃತ್ತಿ ನಡೆಸುತ್ತಿದ್ದ ಈ ದಂಪತಿ ಕಿನಾರೆಯ ಶೆಡ್‌ನಲ್ಲಿ ವಾಸ ಮಾಡುತ್ತಿದ್ದರು. ಗುರುವಾರ ಮಧ್ಯಾಹ್ನ ಊಟ ಮಾಡಿ ಮಗುವಿನ ಜತೆ ತಂದೆ, ತಾಯಿ ಮಲಗಿದ್ದರು. ದಂಪತಿಗೆ ನಿದ್ದೆ ಬಂದಿದ್ದ ವೇಳೆ ಮಗು ಎದ್ದು ಹೊರಗೆ ನಡೆದುಕೊಂಡು ಹೋಗಿದೆ. ಈ ಸಂದರ್ಭ ನದಿ ಕಿನಾರೆಯಲ್ಲಿ ಇತರ ಮಕ್ಕಳ ಜತೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಮಗು ನೀರಿಗೆ ಬಿದ್ದಿದೆ. ಇದನ್ನು ನೋಡಿದ ಇತರ ಮಕ್ಕಳು ಕೂಡಲೇ ದಂಪತಿಗೆ ತಿಳಿಸಿದ್ದಾರೆ.

ಅವರು ನೀರಿನಿಂದ ಮಗುವನ್ನು ಎತ್ತಿ ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ಮಗು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ದಂಪತಿಗೆ ಇಬ್ಬರು ಮಕ್ಕಳಿದ್ದು, ಇನ್ನೊಬ್ಬ ಗಂಡು ಮಗು ಎಂದು ತಿಳಿದುಬಂದಿದೆ.

ಈ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ