ಆ್ಯಪ್ನಗರ

ನೆಟ್‌ವರ್ಕ್ ಸಮಸ್ಯೆಗಾಗಿ ಪ್ರಧಾನಿಗೆ ಪತ್ರ ಕೊಂಬಾರು ಗ್ರಾಮದ ಯುವಕ: ಮನವಿಗೆ ಸ್ಪಂದಿಸಿದ ಪ್ರಧಾನಿ ಕಾರ್ಯಾಲಯ

ಅರಣ್ಯ ಪ್ರದೇಶದಿಂದ ಆವೃತವಾಗಿರುವ ತೀರಾ ಕುಗ್ರಾಮವಾಗಿರುವ ಕೊಂಬಾರು ಗ್ರಾಮದಲ್ಲಿ ಬಿಎಸ್ಸೆನ್ನೆಲ್‌ ಟವರ್‌ ಇದ್ದರೂ ವಿದ್ಯುತ್‌ ಕೈಕೊಟ್ಟಾಗ ನೆಟ್‌ವರ್ಕ್ ಕೂಡ ಕೈಕೊಡುತ್ತಿದೆ ಎಂದು ಕಡಬ ತಾಲೂಕಿನ ಕೊಂಬಾರು ಗ್ರಾಮದ ಯುವಕ ಪತ್ರ ಬರೆದಿದ್ದಾನೆ.

Vijaya Karnataka Web 22 Sep 2021, 8:39 pm
ಕಡಬ: ಕಡಬ ತಾಲೂಕಿನ ಕೊಂಬಾರು ಗ್ರಾಮದಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದಾಗಿ ತೀವ್ರ ತೊಂದರೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರ ಪರವಾಗಿ ಕೊಂಬಾರು ಗ್ರಾಮದ ಯುವಕ, ಎಬಿವಿಪಿ ಕಾರ್ಯಕರ್ತ ಜಗದೀಶ್‌ ಕಾಪಾರು ಸಮಸ್ಯೆ ಬಗೆಹರಿಸುವಂತೆ ಪ್ರಧಾನ ಮಂತ್ರಿಗೆ ಬರೆದ ಪತ್ರಕ್ಕೆ ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು ಪೂರಕವಾಗಿ ಸ್ಪಂದಿಸಿದ್ದಾರೆ.
Vijaya Karnataka Web ಮೊಬೈಲ್‌ ಟವರ್‌
ಮೊಬೈಲ್‌ ಟವರ್‌


ಅರಣ್ಯ ಪ್ರದೇಶದಿಂದ ಆವೃತವಾಗಿರುವ ತೀರಾ ಕುಗ್ರಾಮವಾಗಿರುವ ಕೊಂಬಾರು ಗ್ರಾಮದಲ್ಲಿ ಬಿಎಸ್ಸೆನ್ನೆಲ್‌ ಟವರ್‌ ಇದ್ದರೂ ವಿದ್ಯುತ್‌ ಕೈಕೊಟ್ಟಾಗ ನೆಟ್‌ವರ್ಕ್ ಕೂಡ ಕೈಕೊಡುತ್ತಿದೆ. ಅದರಿಂದಾಗಿ ಗ್ರಾಮದ ಕಾಪಾರು, ಬಗ್ಪುಣಿ, ಮುಗೇರಡ್ಕ, ಕಲಾಯ, ಕಲ್ಲರ್ತನೆ, ಕೆಂಜಾಳ, ಮಣಿಭಾಂಡ, ಕಟ್ಟೆ, ಪೆರುಂದೋಡಿ, ಅನಿಲ ಪ್ರದೇಶದ ಜನರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಕುರಿತು ಹಲವಾರು ಬಾರಿ ನಾವು ಟೆಲಿಕಾಂ ಅಧಿಕಾರಿಗಳಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ.

ಕೊಂಬಾರು ಗ್ರಾಮದಲ್ಲಿ ನೆಟ್‌ಧಿವರ್ಕ್ ಸಮಸ್ಯೆಯಿಂದಾಗಿ ರೋಸಿ ಹೋಗಿ ಪ್ರಧಾನಿಗೆ ಪತ್ರ ಬರೆದಿದ್ದೆ. ಅಲ್ಲಿಂದ ಪ್ರತ್ಯುತ್ತರ ಬಂದಿದೆ. ಬಿಎಸ್ಸೆನ್ನೆಲ್‌ ಮಂಗಳೂರು ವಿಭಾಗದ ಅಧಿಕಾರಿಗಳು ಕೂಡ ಸಂಪರ್ಕಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಶೀಘ್ರ ಸಮಸ್ಯೆ ಬಗೆಹರಿಯಲಿ ಎನ್ನುವುದು ಗ್ರಾಮಸ್ಥರ ಆಶಯವಾಗಿದೆ.
ಜಗದೀಶ್‌ ಕಾಪಾರು, ಎಬಿವಿಪಿ ಪುತ್ತೂರು ನಗರ ಕಾರ್ಯದರ್ಶಿ

ನಾವು ವಾಸಿಸುತ್ತಿರುವ ಪ್ರದೇಶದಲ್ಲಿ ಕಾಡುಪ್ರಾಣಿಗಳ ಹಾವಳಿಯೂ ಇದ್ದು, ಆರೋಗ್ಯ ಸಮಸ್ಯೆ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ನಮಗೆ ಹೊರ ಪ್ರಪಂಚವನ್ನು ಸಂಪರ್ಕಿಸಲು ಅಸಾಧ್ಯವಾಗಿದೆ. ಕೊರೊನಾ ಸಂಕಷ್ಟದಿಂದಾಗಿ ಆನ್‌ಲೈನ್‌ ತರಗತಿಗಳನ್ನು ಅವಲಂಬಿಸಿರುವ ವಿದ್ಯಾರ್ಥಿಗಳು ಕೂಡ ನೆಟ್‌ಧಿವರ್ಕ್ ಸಮಸ್ಯೆಯಿಂದಾಗಿ ಶಿಕ್ಷಣ ವಂಚಿತರಾಗಿದ್ದಾರೆ. ಆದುದರಿಂದ ಬಿಎಸ್ಸೆನ್ನೆಲ್‌ ನೆಟ್‌ವರ್ಕ್ ಸಮಸ್ಯೆ ಸರಿಪಡಿಸಬೇಕು. ಇತರ ಖಾಸಗಿ ಟೆಲಿಕಾಂ ಕಂಪನಿಗಳ ಟವರ್‌ಗಳನ್ನು ಸ್ಥಾಪಿಸಿ ಸಮಸ್ಯೆ ಗೆಹರಿಸಬೇಕು ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಜಗದೀಶ್‌ ವಿನಂತಿಸಿದ್ದರು.

ಅಡಕೆ ಮಾರುಕಟ್ಟೆಯಲ್ಲಿ ಸಾರ್ವಕಾಲಿಕ ಕ್ರಾಂತಿ, 500 ರೂ. ದಾಟಿದ ಮೂರೂ ಬಗೆಯ ಅಡಕೆ ಬೆಲೆ

ಇದಕ್ಕೆ ಕೂಡಲೇ ಸ್ಪಂದಿಸಿರುವ ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು ಆ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಎಸ್ಸೆನ್ನೆಲ್‌ ಮಂಗಳೂರು ವಿಭಾಗದ ಅಧಿಕಾರಿಗಳಿಗೆ ಅದೇಶಿಸಿರುವ ಕುರಿತು ಉಲ್ಲೇಖಿಸಿ ಜಗದೀಶ್‌ ಅವರಿಗೆ ಪತ್ರ ಬರೆದಿದ್ದಾರೆ. ಅದಕ್ಕೆ ಪೂರಕವಾಗಿ ಜಗದೀಶ್‌ ಅವರಿಗೆ ಪತ್ರ ಬರೆದು ಬಳಿಕ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿರುವ ಬಿಎಸ್ಸೆನ್ನೆಲ್‌ ಮಂಗಳೂರು ವಿಭಾಗದ ಅಧಿಕಾರಿಗಳು ವಿದ್ಯುತ್‌ ಸಮಸ್ಯೆ ಸಂದರ್ಭ ನೆಟ್‌ವರ್ಕ್ ಸಮಸ್ಯೆ ಎದುರಾಗದಂತೆ ಟವರ್‌ಗೆ ಬ್ಯಾಟರಿ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ