ಆ್ಯಪ್ನಗರ

ಕುವೈಟ್‌ನಲ್ಲಿ ಅತಂತ್ರ: ಮೊದಲ ತಂಡ ಜು.13ಕ್ಕೆ ಆಗಮನ ನಿರೀಕ್ಷೆ

ಉದ್ಯೋಗಕ್ಕೆಂದು ಕುವೈಟ್‌ಗೆ ತೆರಳಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯ ಕಾರ್ಮಿಕರು ಒಟ್ಟು ಮೂರು ಹಂತಗಳಲ್ಲಿ ತಾಯ್ನಾಡಿಗೆ ಆಗಮಿಸುವ ಸಾಧ್ಯತೆಯಿದ್ದು, ಮೊದಲ ತಂಡ ಜು.13ರಂದು ಆಗಮಿಸಲಿದೆ. ಉಳಿದವರು ಜು. 15 ಹಾಗೂ 17 ರಂದು ಆಗಮಿಸುವ ಸಾಧ್ಯತೆಯಿದೆ.

Vijaya Karnataka 10 Jul 2019, 5:00 am
ಮಂಗಳೂರು : ಉದ್ಯೋಗಕ್ಕೆಂದು ಕುವೈಟ್‌ಗೆ ತೆರಳಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯ ಕಾರ್ಮಿಕರು ಒಟ್ಟು ಮೂರು ಹಂತಗಳಲ್ಲಿ ತಾಯ್ನಾಡಿಗೆ ಆಗಮಿಸುವ ಸಾಧ್ಯತೆಯಿದ್ದು, ಮೊದಲ ತಂಡ ಜು.13ರಂದು ಆಗಮಿಸಲಿದೆ. ಉಳಿದವರು ಜು. 15 ಹಾಗೂ 17 ರಂದು ಆಗಮಿಸುವ ಸಾಧ್ಯತೆಯಿದೆ.
Vijaya Karnataka Web kuvait return fist team ju 13
ಕುವೈಟ್‌ನಲ್ಲಿ ಅತಂತ್ರ: ಮೊದಲ ತಂಡ ಜು.13ಕ್ಕೆ ಆಗಮನ ನಿರೀಕ್ಷೆ


ತಾಂತ್ರಿಕ ಕಾರಣದಿಂದ ಇಮ್ತಿಯಾಜ್‌, ಅಜೀಝ್‌ ಅಬ್ದುಲ್ಲ, ಹನೀಫ್‌ ಅಬ್ಬು, ಮೊಹಮ್ಮದ್‌ ಇರ್ಫಾನ್‌, ಗಣೇಶ್‌ ಶಿವರಾಮ, ಅಬ್ದುಲ್‌ಅಜೀಝ್‌, ಮೊಹಮ್ಮದ್‌ ಆರೀಫ್‌ ಬನ್ನೂರು ಮತ್ತು ಅಶ್ಪಕ್‌ ಅಮೀರ್‌ ಹುಸೈನ್‌ ಸೇರಿದಂತೆ 11ಮಂದಿ ಕಂಪನಿ ಜತೆ ಕಾನೂನು ವಿಷಯಗಳು ಇತ್ಯರ್ಥಗೊಳ್ಳಲು ಬಾಕಿಯಿದ್ದು, ಇವರ ಆಗಮನ ಇನ್ನೂ ಅತಂತ್ರವಾಗಿದೆ. ನೌಕರಿ ಸಂದರ್ಭ ಕಂಪನಿ ವಾಹನ ಹಾಗೂ ಇತರ ವಸ್ತುಗಳು ಬಳಕೆ ಸಂದರ್ಭ ತಮಗೆ ಇವರಿಂದ ನಷ್ಟವಾಗಿದೆ ಎಂದು ಅವರು ದುಡಿಯುತ್ತಿದ್ದ ಅನೆಸ್ಕೋ ಜನರಲ್‌ ಟ್ರೇಡಿಂಗ್‌ ಕಂಪನಿ ಇವರ ವಿಷಯದಲ್ಲಿ ಇನ್ನೂ ಕ್ಲಿಯರೆನ್ಸ್‌ ನೀಡಿಲ್ಲ ಎಂದು ಅನಿವಾಸಿ ಕನ್ನಡಿಗರ ಸಂಘಟನೆ ಮೂಲ ತಿಳಿಸಿದೆ.

ಜು.13 ರಂದು 6ಮಂದಿ (ಮಂಗಳೂರಿನ 4ಮಂದಿ), ಜು.15ರಂದು 15ಮಂದಿ (ಎಲ್ಲರೂ ಆಂಧ್ರ) ಹಾಗೂ ಜು.17 ರಂದು ಮಂಗಳೂರಿನ 23 ಮಂದಿ (19 ಮಂಗಳೂರು) ಪ್ರಯಾಣ ಬೆಳೆಸಲಿದ್ದಾರೆ.

ಪಾಸ್‌ಪೋರ್ಟ್‌ ಇನ್ನೂ ಸಿಕ್ಕಿಲ್ಲ: ಟಿಕೆಟ್‌ ಮತ್ತು ಜಿಪಿ ಲೆಟರ್‌ ಕೊಟ್ಟರೆ ಮಾತ್ರ ವೀಸಾ ಕ್ಯಾನ್ಸಲ್‌ ಮಾಡಿ ಪಾರ್ಸ್‌ಪೋರ್ಟ್‌ ನೀಡಲು ಸಾಧ್ಯ. ಈಗಾಗಲೇ ಜು.13, 15, 17ರಂದು ಬರುವವರ ಟಿಕೇಟ್‌ ಸಹಿಯ ಜಿಪಿ ಲೆಟರ್‌ ನೀಡಲಾಗಿದೆ. ಆದರೆ ಪಾರ್ಸ್‌ಪೋರ್ಟ್‌ ಇನ್ನೂ ಕೈ ಸೇರಿಲ್ಲ. ಜು.10ರಂದು ರಾಯಭಾರಿ ಕಚೇರಿಗೆ ತನ್ನನ್ನು ಕರೆದಿದ್ದು, ಅಲ್ಲಿ ಈ ಬಗ್ಗೆ ಮಾತನಾಡುತ್ತೇನೆ ಎನ್ನುತ್ತಾರೆ ಮೋಹನ್‌ದಾಸ್‌ ಕಾಮತ್‌ ಕುವೈಟ್‌.

ರೇಷ್ಮಾ ಬಿಡುಗಡೆ ವಿಳಂಬ: ಕುವೈಟ್‌ನಲ್ಲಿ ಗೃಹಬಂಧನದಿಂದ ಬಿಡುಗಡೆಯಾಗಿ ಭಾರತೀಯ ರಾಯಭಾರಿ ಕಚೇರಿಯ ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಮಂಗಳೂರಿನ ಕಸಬಾ ಬೆಂಗರೆ ನಿವಾಸಿ ರೇಷ್ಮಾ ಸುವರ್ಣ ಬಿಡುಗಡೆಗೆ ಇನ್ನೂ ಒಂದು ತಿಂಗಳು ವಿಳಂಬವಾಗುವ ಸಾಧ್ಯತೆಯಿದೆ.

ಕುವೈತ್‌ನ ಮನೆಯೊಂದರಲ್ಲಿ ತೊಂದರೆಗೆ ಸಿಲುಕಿಕೊಂಡಿರುವ ರೇಷ್ಮಾ ಕಳೆದ ವಾರ ತಾವಿರುವ ಜಾಗದಿಂದ ತಪ್ಪಿಸಿಕೊಂಡು ಭಾರತೀಯ ರಾಯಭಾರಿ ಕಚೇರಿ ತಲುಪಿದ್ದರು. ಕಾನೂನು ಪ್ರಕ್ರಿಯೆ ಮುಗಿದ ಬಳಿಕ ಪಾಸ್‌ಪೋರ್ಟ್‌ ಪಡೆಯಲು ಪ್ರಯತ್ನಿಸಬೇಕು. ಪಾಸ್‌ಪೋರ್ಟ್‌ ದೊರೆಯದಿದ್ದಲ್ಲಿ ರಾಯಭಾರಿ ಕಚೇರಿಯಿಂದಲೇ ಔಟ್‌ಪಾಸ್‌ ಒದಗಿಸಿ ಮಹಿಳೆಯನ್ನು ಸ್ವದೇಶಕ್ಕೆ ಕಳುಹಿಸಿಕೊಡಲು ಅವಕಾಶವಿದೆ ಎಂದು ಕಚೇರಿ ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ