ಆ್ಯಪ್ನಗರ

ಕುವೈಟ್‌ ಅತಂತ್ರ: 28 ಮಂದಿ ವೀಸಾ ರದ್ದು

ಕುವೈಟ್‌ಗೆ ಉದ್ಯೋಗಕ್ಕೆ ತೆರಳಿ ಬಳಿಕ ಅತಂತ್ರರಾದ 28 ಮಂದಿಯ ವೀಸಾವನ್ನು ಕಂಪನಿ ರದ್ದುಪಡಿಸಿದ್ದು, ಅವರು ಬುಧವಾರ ತಡರಾತ್ರಿ ಭಾರತಕ್ಕೆ ಮರಳಲಿದ್ದಾರೆ.

Vijaya Karnataka 18 Jul 2019, 5:00 am
ಮಂಗಳೂರು: ಕುವೈಟ್‌ಗೆ ಉದ್ಯೋಗಕ್ಕೆ ತೆರಳಿ ಬಳಿಕ ಅತಂತ್ರರಾದ 28 ಮಂದಿಯ ವೀಸಾವನ್ನು ಕಂಪನಿ ರದ್ದುಪಡಿಸಿದ್ದು, ಅವರು ಬುಧವಾರ ತಡರಾತ್ರಿ ಭಾರತಕ್ಕೆ ಮರಳಲಿದ್ದಾರೆ.
Vijaya Karnataka Web 17M-Kuwait


ಈಗಾಗಲೇ ಮಂಜೇಶ್ವರ ಅಭಿಷೇಕ್‌ ಮತ್ತು ಆಂಧ್ರದ ಪಂಕಜ್‌ ಎಂಬವರು ಭಾರತಕ್ಕೆ ವಾಪಸ್‌ ಆಗಿದ್ದಾರೆ. ಮಂಗಳವಾರ ಕಂಪನಿ ಸಭೆ ನಡೆಸಿ 15 ಮಂದಿಯ ವೀಸಾ ರದ್ದುಪಡಿಸಿರುವ ಬಗ್ಗೆ ಹಾಗೂ ಉಳಿದವರ ವೀಸಾ ಬುಧವಾರ ರದ್ದುಪಡಿಸಿ ಪಾಸ್‌ಪೋರ್ಟ್‌ ನೀಡುವುದಾಗಿ ನಿರ್ಧಾರ ಪ್ರಕಟಿಸಿದೆ.

ಸೋಮವಾರ 15 ಮಂದಿ ಆಂಧ್ರದವರು ಹೊರಡಬೇಕಿತ್ತು, ಆದರೆ ಕಂಪನಿ ವೀಸಾ ರದ್ದುಪಡಿಸದೆ, ರಜೆಯೂ ನೀಡದ ಕಾರಣ ಅವರ ವಿಮಾನ ಟಿಕೆಟ್‌ ರದ್ದಾಗಿತ್ತು. ಇದೀಗ 28 ಮಂದಿಯ ಸಮಸ್ಯೆ ಬಗೆಹರಿದಿದ್ದು, ಅವರು ತಾಯ್ನಾಡಿಗೆ ಮರಳಲು ಅನುಕೂಲವಾಗಿದೆ.

ಇನ್ನೂ ಹಲವರು ಅತಂತ್ರ: ತಾಂತ್ರಿಕ ಕಾರಣದಿಂದ ಇಮ್ತಿಯಾಜ್‌, ಅಜೀಝ್‌ ಅಬ್ದುಲ್ಲ, ಹನೀಫ್‌ ಅಬ್ಬು, ಮೊಹಮ್ಮದ್‌ ಇರ್ಫಾನ್‌, ಗಣೇಶ್‌ ಶಿವರಾಮ, ಅಬ್ದುಲ್‌ ಅಜೀಝ್‌, ಮೊಹಮ್ಮದ್‌ ಆರೀಫ್‌ ಬನ್ನೂರು ಮತ್ತು ಅಶ್ಪಕ್‌ ಅಮೀರ್‌ ಹುಸೈನ್‌ ಸೇರಿದಂತೆ 15 ಮಂದಿಯ (ಮಂಗಳೂರಿನ 8 ಮಂದಿ) ಕಂಪನಿ ಜತೆ ಕಾನೂನು ವಿಷಯಗಳು ಇತ್ಯರ್ಥಗೊಳ್ಳಲು ಬಾಕಿಯಿದ್ದು, ಅವರ ಆಗಮನ ಇನ್ನೂ ಅತಂತ್ರವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ