ಆ್ಯಪ್ನಗರ

ಕುವೈಟ್‌ಗೆ ತೆರಳಿದ ಯುವಕರು ಅತಂತ್ರ ಪ್ರಕರಣ: ಪ್ರಕರಣ ದಾಖಲು

ಕುವೈಟ್‌ಗೆ ಕೆಲಸಕ್ಕೆ ತೆರಳಿದ ಯುವಕರು ಅತಂತ್ರ ಪ್ರಕರಣಕ್ಕೆ ಸಂಬಂಧಿಸಿ ಉದ್ಯೋಗಕ್ಕೆ ಕಳುಹಿಸಿ ಏಜೆನ್ಸಿ ವಿರುದ್ಧ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Vijaya Karnataka 29 May 2019, 4:07 pm
ಮಂಗಳೂರು : ಕುವೈಟ್‌ಗೆ ಕೆಲಸಕ್ಕೆ ತೆರಳಿದ ಯುವಕರು ಅತಂತ್ರ ಪ್ರಕರಣಕ್ಕೆ ಸಂಬಂಧಿಸಿ ಉದ್ಯೋಗಕ್ಕೆ ಕಳುಹಿಸಿ ಏಜೆನ್ಸಿ ವಿರುದ್ಧ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Vijaya Karnataka Web kuwait younsters case is ill
ಕುವೈಟ್‌ಗೆ ತೆರಳಿದ ಯುವಕರು ಅತಂತ್ರ ಪ್ರಕರಣ: ಪ್ರಕರಣ ದಾಖಲು


ಸಾಮಾನ್ಯವಾಗಿ ವಿದೇಶಗಳಿಗೆ ಉದ್ಯೋಗಿಗಳನ್ನು ಕಳುಹಿಸಬೇಕಾದರೆ ಆ ಏಜೆನ್ಸಿ ಸಂಸ್ಥೆಗಳು ಎಮಿಗ್ರೇಷನ್ಸ್‌ ಪರವಾನಗಿ ಹೊಂದಿರಬೇಕು. ಆದರೆ ಪ್ರಸಾದ್‌ ಶೆಟ್ಟಿ ಮಾಲೀಕತ್ವದ ಮಾಣಿಕ್ಯ ಎಸೋಸಿಯೇಟ್ಸ್‌ ಪ್ಲೇಸ್‌ಮೆಂಟ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆ ಪರವಾನಗಿ ಹೊಂದದಿರುವುದು ಪೊಲೀಸರ ಪರಿಶೀಲನೆ ವೇಳೆ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆ ವಿರುದ್ಧ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮತ್ತಷ್ಟು ಶೋಧ: ನಗರದಲ್ಲಿ ಉದ್ಯೋಗದ ನೆಪದಲ್ಲಿ ಕೆಲವು ಏಜೆನ್ಸಿ ಸಂಸ್ಥೆಗಳು ವಂಚನೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಇಂತಹ ಸಂಸ್ಥೆಗಳು ಲೈಸೆನ್ಸ್‌ ಹೊಂದಿವೆಯೇ ಎಂಬುದರ ಬಗ್ಗೆ ತಪಾಸಣೆ ನಡೆಸುವಂತೆ ಠಾಣಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತ ಡಾ. ಸಂದೀಪ್‌ ಪಾಟೀಲ್‌ ತಿಳಿಸಿದ್ದಾರೆ.

ಕುವೈಟ್‌ನಿಂದ ಸಕಾರಾತ್ಮಕ ಸ್ಪಂದನೆ

ಕುವೈಟ್‌ಗೆ ತೆರಳಿ ವಂಚನೆಗೊಳಗಾಗಿ ತೊಂದರೆಗೆ ಸಿಲುಕಿರುವ ಮಂಗಳೂರಿನ 35ಯುವಕರ ಬಿಡುಗಡೆಗೆ ಸಂಬಂಧಿಸಿ ಕುವೈಟ್‌ನ ಭಾರತೀಯ ರಾಯಭಾರಿ ಕಚೇರಿಯಲ್ಲಿ ನಡೆದ ಮಾತುಕತೆಯಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ಲಭಿಸಿದೆ.

ಭಾರತೀಯ ಇಂಜಿನಿಯರ್ಸ್‌ ಸಂಸ್ಥೆಯ ಕುವೈಟ್‌ ಘಟಕದ ಪದಾಧಿಕಾರಿಗಳ ನಿಯೋಗ ಮಂಗಳವಾರ ಅಲ್ಲಿನ ಭಾರತೀಯ ರಾಯಭಾರಿ ಕಚೇರಿಗೆ ಭೇಟಿ ನೀಡಿ ಉಪ ಕಾರ್ಯದರ್ಶಿ ಶಿಬಿ ಯು.ಎಸ್‌.ಅವರ ಜತೆ ಮಾತುಕತೆ ನಡೆಸಿದೆ. ಮಾತುಕತೆ ಸಂದರ್ಭ ಘಟನೆಗೆ ಸಂಬಂಧಿಸಿ ಉಪ ಕಾರ್ಯದರ್ಶಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದರೆ ಅವರನ್ನು ಭಾರತಕ್ಕೆ ಕಳುಹಿಸಿಕೊಡಲು ಕೆಲವೊಂದು ಆಡಳಿತಾತ್ಮಕ ಪ್ರಕ್ರಿಯೆಗಳು ನಡೆಯಬೇಕಾಗಿದೆ ಎಂದು ಇಂಜಿನಿಯರ್ಸ್‌ ಕುವೈಟ್‌ ಘಟಕದ ಪದಾಧಿಕಾರಿಯಾಗಿರುವ ಮೋಹನದಾಸ ಕಾಮತ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ