ಆ್ಯಪ್ನಗರ

ಹಲಸು ಸಾರ ಮೇಳ ಹಲಸು ಕೃಷಿ ಅನುಭವ ಕುರಿತು ಉಪನ್ಯಾಸ

ಪುತ್ತೂರು: ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಹಲಸಿನ ಮರಗಳನ್ನು ನಾಶ ಮಾಡಲಾಗಿದೆ. ಇದಕ್ಕೆ ಪರ್ಯಾಯವಾಗಿ ಈಗ ಹಲಸಿನ ಗಿಡಗಳನ್ನು ನೆಟ್ಟು ತೋಟ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಹಲಸು ಕೃಷಿಕ ವರ್ಮುಡಿ ಶಿವಪ್ರಸಾದ್‌ ಹೇಳಿದರು.

Vijaya Karnataka 17 Jun 2019, 5:00 am
ಪುತ್ತೂರು: ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಹಲಸಿನ ಮರಗಳನ್ನು ನಾಶ ಮಾಡಲಾಗಿದೆ. ಇದಕ್ಕೆ ಪರ್ಯಾಯವಾಗಿ ಈಗ ಹಲಸಿನ ಗಿಡಗಳನ್ನು ನೆಟ್ಟು ತೋಟ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಹಲಸು ಕೃಷಿಕ ವರ್ಮುಡಿ ಶಿವಪ್ರಸಾದ್‌ ಹೇಳಿದರು.
Vijaya Karnataka Web lecture on jackfruit
ಹಲಸು ಸಾರ ಮೇಳ ಹಲಸು ಕೃಷಿ ಅನುಭವ ಕುರಿತು ಉಪನ್ಯಾಸ


ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ಪುತ್ತೂರಿನ ಹಲಸು ಸ್ನೇಹ ಸಂಗಮ, ಐಐಎಚ್‌ಆರ್‌ ಬೆಂಗಳೂರು, ಕ್ಯಾಂಪ್ಕೋ ಮಂಗಳೂರು, ಮುಳಿಯ ಜುವೆಲ್ಲರ್ಸ್‌, ಶಿಬರ ನವನೀತ ನರ್ಸರಿ ಸಹಯೋಗದಲ್ಲಿ ನಡೆಯುತ್ತಿರುವ ಹಲಸು ಸಾರ ಮೇಳದಲ್ಲಿ ಭಾನುವಾರ ಹಲಸು ಕೃಷಿ ಅನುಭವ ಕುರಿತು ಉಪನ್ಯಾಸ ನೀಡಿದರು.

ಆರೋಗ್ಯಕರ ಫಲವಾದ ಹಲಸು ಜಾಗತಿಕ ಮನ್ನಣೆ ಪಡೆದಿದೆ. ಹಲಸು ನೆಟ್ಟು ಬೆಳೆಸಿದವರ ಜೀವನ ನಿರ್ವಹಣೆಗೆ ಹಲಸು ಆರ್ಥಿಕ ಪ್ರೋತ್ಸಾಹ ನೀಡುತ್ತಿದೆ. ವಿನಾಶದ ಅಂಚಿಗೆ ತಲುಪಿರುವ ಹಲಸು ತಳಿಗಳ ಸಂರಕ್ಷ ಣೆಗೆ ಕೃಷಿಕರು ಮುಂದಾಗಬೇಕಾಗಿದೆ. ಎಲ್ಲ ಕೃಷಿಕರು ಸಾಧ್ಯವಾದಷ್ಟು ಹಲಸಿನ ಗಿಡಗಳನ್ನು ನೆಟ್ಟು ತೋಟ ಮಾಡಬೇಕು. ಎರಡು ಎಕರೆಗಳಷ್ಟು ಹಲಸಿನ ತೋಟ ಇದ್ದರೆ ಇದರಲ್ಲಿ ಬೆಳೆಯುವ ಹಲಸಿನ ಹಣ್ಣು ಮತ್ತು ಕಾಯಿಗಳಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಲು ಸಾಧ್ಯವಿದೆ. ಅಲ್ಲದೇ ಹಲಸಿನ ಕಾಯಿ ಮತ್ತು ಹಣ್ಣುಗಳಿಗೆ ಮಾರುಕಟ್ಟೆಯ ವಾತಾವರಣವಿದೆ ಎಂದರು.

ಹಲಸಿನ ಗಿಡಗಳು ನಾಲ್ಕು ವರ್ಷದ ಪೋಷಣೆಯ ಬಳಿಕ ಫಲ ನೀಡಲು ಆರಂಭಿಸುತ್ತವೆ. ಹಲಸಿನ ವಿವಿಧ ತಳಿಗಳನ್ನು ಒಂದೇ ತೋಟದಲ್ಲಿ ಬೆಳೆಸುವ ಬದಲು ಸ್ಥಳೀಯವಾಗಿ ಮಾರುಕಟ್ಟೆ ಇರುವ ಹಲಸಿನ ಒಂದೆರಡು ತಳಿಗಳನ್ನು ನೆಟ್ಟು ತೋಟ ಮಾಡಿದರೆ ಅದು ಲಾಭದಾಯಕವಾಗುತ್ತದೆ. ಹಲಸಿನ ತಳಿಗಳ ಸಂಗ್ರಹ ಉತ್ತಮ ಹವ್ಯಾಸವಾದರೂ ಹಲಸು ಕೃಷಿಯ ಮಟ್ಟಿಗೆ ಒಂದೆರಡು ತಳಿಗಳ ತೋಟವನ್ನು ಮಾಡುವುದು ಕ್ಷೇಮಕರ ಎಂದರು.

ಆಹಾರ ಕ್ಷಾಮದ ಸಂದರ್ಭ ಹಲಸು ಪರ್ಯಾಯ ಆಹಾರವಾಗಿ ಬಳಸಲು ಉತ್ತಮ ಫಲವಾಗಿದೆ. ಉತ್ತರ ಕರ್ನಾಟಕದ ಅಥವಾ ಹೊರ ರಾಜ್ಯಗಳ ಹಲಸಿನ ತಳಿಗಳನ್ನು ಅಭಿವೃದ್ಧಿಪಡಿಸುವುದು ಅಥವಾ ತೋಟಗಳನ್ನಾಗಿ ಮಾಡುವುದು ಇಲ್ಲಿಯ ಹವಾಗುಣಕ್ಕೆ ಸೂಕ್ತವಲ್ಲ. ಸ್ಥಳೀಯ ತಳಿಗಳನ್ನು ಬೆಳೆಸುವುದು ಮತ್ತು ಅಡಕೆ ಹಾಗೂ ತೆಂಗಿನ ತೋಟಗಳಲ್ಲಿರುವ, ಮನೆಯ ಪರಿಸರದಲ್ಲಿರುವ ಹಲಸಿನ ಮರಗಳನ್ನು ಕಡಿಯದೆ ಅವುಗಳನ್ನು ಉಳಿಸಿಕೊಳ್ಳುವ ಜಾಣತನವನ್ನು ಕೃಷಿಕರು ಪ್ರದರ್ಶಿಸಬೇಕು ಎಂದರು.

ಹಲಸು ಸ್ನೇಹ ಸಂಗಮದ ಅಧ್ಯಕ್ಷ ಸೇಡಿಯಾಪು ಜನಾರ್ದನ ಭಟ್‌ ಉಪಸ್ಥಿತರಿದ್ದರು. ಕೃಷಿ ಅಂಕಣಕಾರ ನಾ. ಕಾರಂತ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ