ಅಶೋಕ್ ಕಲ್ಲಡ್ಕ ಮಂಗಳೂರು
ವಿದ್ಯುತ್ ಬಿಲ್ ತಗ್ಗಿಸುವ ನಿಟ್ಟಿನಲ್ಲಿ ಇಡೀ ಮಂಗಳೂರು ನಗರಕ್ಕೆ ಎಲ್ಇಡಿ ಬಲ್ಭ್ ಅಳವಡಿಸುವ ಪ್ರಸ್ತಾಪನೆ ಕೊನೆಗೂ ಕಾರ್ಯರೂಪಕ್ಕೆ ಬರಲಿದೆ. ನಗರದ ಎಲ್ಲ 60 ವಾರ್ಡ್ಗಳ ದಾರಿದೀಪವನ್ನು ಸ್ಮಾರ್ಟ್ಸಿಟಿ ಯೋಜನೆಯಡಿ ಎಲ್ಇಡಿಗೆ ಬದಲಾಯಿಸುವ ಸುಮಾರು 70.50 ಕೋಟಿ ರೂ.ಗಳ ಯೋಜನೆಗೆ ಟೆಂಡರ್ ಕರೆಯಲಾಗಿದೆ.
ಮಂಗಳೂರನ್ನು ಸ್ಮಾರ್ಟ್ಸಿಟಿ ಯೋಜನೆಯಡಿ ಎಲ್ಇಡಿಗೆ ಪರಿವರ್ತಿಸುವ ನಿಟ್ಟಿನಲ್ಲಿ ಮೊದಲಿಗೆ ಎಲ್ಲ ಸರಕಾರಿ ಕಚೇರಿಗಳಿಗೆ 1.68 ಕೋಟಿ ರೂ. ವೆಚ್ಚದಲ್ಲಿ ಎಲ್ಇಡಿ ಬಲ್ಭ್, ಟ್ಯೂಬ್ಲೈಟ್ ಅಳವಡಿಸಲಾಗುವುದು. ಈ ಕುರಿತು ಈಗಾಗಲೇ ವರ್ಕ್ ಆರ್ಡರ್ ಕೂಡ ನೀಡಲಾಗಿದೆ. ಮುಂದಿನ 15 ದಿನಗಳಲ್ಲಿ ಸುಮಾರು 25 ಸರಕಾರಿ ಕಚೇರಿಯಲ್ಲಿ ಎಲ್ಇಡಿ ಅಳವಡಿಸುವ ಪ್ರಕ್ರಿಯೆ ಆರಂಭವಾಗಲಿದೆ.
ನಗರದ ಎಲ್ಲ ಸ್ಟ್ರೀಟ್ಲೈಟ್ಗಳನ್ನು ಎಲ್ಇಡಿಗೆ ಪರಿವರ್ತಿಸುವ ಮೂಲಕ ವಿದ್ಯುತ್ ಉಳಿತಾಯ ಮಾಡುವುದು ಹಾಗೂ ಕರೆಂಟ್ ಬಿಲ್ ತಗ್ಗಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಪ್ರಸ್ತುತ ಮಂಗಳೂರು ಮಹಾನಗರಪಾಲಿಕೆ ವರ್ಷಕ್ಕೆ 11ರಿಂದ 12 ಕೋಟಿ ರೂ. ವಿದ್ಯುತ್ ಬಿಲ್ ಪಾವತಿಸುತ್ತಿದೆ. ಇದನ್ನು ಶೇ.50ರಷ್ಟು ತಗ್ಗಿಸುವುದು ಎಲ್ಇಡಿ ಅಳವಡಿಕೆಯ ಪರಮ ಗುರಿಯಾಗಿದೆ. ಎಲ್ಇಡಿ ಸ್ಟ್ರೀಟ್ಲೈಟ್ ಅಳವಡಿಸುವ ನಿಟ್ಟಿನಲ್ಲಿ ಫೆಬ್ರವರಿ 11 ಟೆಂಡರ್ನ ಕೊನೆಯ ದಿನವಾಗಿದೆ.
ಪಿಪಿಪಿ ಮಾದರಿ
ಮಂಗಳೂರು ನಗರದ ದಾರಿದೀಪವನ್ನು ಎಲ್ಇಡಿಗೆ ಬದಲಾಯಿಸುವ ಹಾಗೂ ನಿರ್ವಹಣೆಯನ್ನು ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ನಡೆಸಲಾಗುವುದು. ಶೇ. 50ರಷ್ಟು ವಿದ್ಯುತ್ ಬಿಲ್ ಉಳಿತಾಯ ಮಾಡುವುದು ಎಲ್ಇಡಿ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಹಳೆ ಪ್ರಸ್ತಾಪ
ಸಿದ್ದರಾಮಯ್ಯ ಸರಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಆರ್. ರೋಶನ್ ಬೇಗ್ ಅವರು ಎಲ್ಇಡಿ ಪ್ರಸ್ತಾಪವನ್ನಿಟ್ಟಿದ್ದರು. ಎರಡು ವರ್ಷಗಳ ಹಿಂದೆ ಪಾಲಿಕೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಭಾಗವಹಿಸಿದ ಅವರು ವಿದ್ಯುತ್ ಬಿಲ್ ಕಡಿಮೆ ಮಾಡುವ ದೃಷ್ಟಿಯಿಂದ ನಗರದ ದಾರಿದೀಪವನ್ನು ಎಲ್ಇಡಿಗೆ ಬದಲಾಯಿಸುವಂತೆ ಪಾಲಿಕೆ ಆಡಳಿತಕ್ಕೆ ಸೂಚಿಸಿದ್ದರು. ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸುವಂತೆಯೂ ತಿಳಿಸಿದ್ದರು.
ಮಂಗಳೂರು ನಗರವನ್ನು ಎಲ್ಇಡಿಗೆ ಬದಲಾಯಿಸುವ ನಿಟ್ಟಿನಲ್ಲಿ ಸ್ಮಾರ್ಟ್ಸಿಟಿ ಯೋಜನೆಯಡಿ ಎರಡು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮಂಗಳೂರಿನ ಎಲ್ಲ ಸರಕಾರಿ ಕಚೇರಿಗಳಿಗೆ ಎಲ್ಇಡಿ ಅಳವಡಿಸುವ ಬಗ್ಗೆ ವರ್ಕ್ ಆರ್ಡರ್ ನೀಡಲಾಗಿದೆ. ನಗರದ ದಾರಿದೀಪಗಳನ್ನು ಎಲ್ಇಡಿಗೆ ಪರಿವರ್ತಿಸುವ ಯೋಜನೆಗೆ ಟೆಂಡರ್ ಕರೆಯಲಾಗಿದೆ.
- ನಾರಾಯಣಪ್ಪ, ಆಡಳಿತ ನಿರ್ದೇಶಕರು, ಮಂಗಳೂರು ಸ್ಮಾರ್ಟ್ಸಿಟಿ ಕಂಪನಿ ಲಿಮಿಟೆಡ್.
ವಿದ್ಯುತ್ ಬಿಲ್ ತಗ್ಗಿಸುವ ನಿಟ್ಟಿನಲ್ಲಿ ಇಡೀ ಮಂಗಳೂರು ನಗರಕ್ಕೆ ಎಲ್ಇಡಿ ಬಲ್ಭ್ ಅಳವಡಿಸುವ ಪ್ರಸ್ತಾಪನೆ ಕೊನೆಗೂ ಕಾರ್ಯರೂಪಕ್ಕೆ ಬರಲಿದೆ. ನಗರದ ಎಲ್ಲ 60 ವಾರ್ಡ್ಗಳ ದಾರಿದೀಪವನ್ನು ಸ್ಮಾರ್ಟ್ಸಿಟಿ ಯೋಜನೆಯಡಿ ಎಲ್ಇಡಿಗೆ ಬದಲಾಯಿಸುವ ಸುಮಾರು 70.50 ಕೋಟಿ ರೂ.ಗಳ ಯೋಜನೆಗೆ ಟೆಂಡರ್ ಕರೆಯಲಾಗಿದೆ.
ಮಂಗಳೂರನ್ನು ಸ್ಮಾರ್ಟ್ಸಿಟಿ ಯೋಜನೆಯಡಿ ಎಲ್ಇಡಿಗೆ ಪರಿವರ್ತಿಸುವ ನಿಟ್ಟಿನಲ್ಲಿ ಮೊದಲಿಗೆ ಎಲ್ಲ ಸರಕಾರಿ ಕಚೇರಿಗಳಿಗೆ 1.68 ಕೋಟಿ ರೂ. ವೆಚ್ಚದಲ್ಲಿ ಎಲ್ಇಡಿ ಬಲ್ಭ್, ಟ್ಯೂಬ್ಲೈಟ್ ಅಳವಡಿಸಲಾಗುವುದು. ಈ ಕುರಿತು ಈಗಾಗಲೇ ವರ್ಕ್ ಆರ್ಡರ್ ಕೂಡ ನೀಡಲಾಗಿದೆ. ಮುಂದಿನ 15 ದಿನಗಳಲ್ಲಿ ಸುಮಾರು 25 ಸರಕಾರಿ ಕಚೇರಿಯಲ್ಲಿ ಎಲ್ಇಡಿ ಅಳವಡಿಸುವ ಪ್ರಕ್ರಿಯೆ ಆರಂಭವಾಗಲಿದೆ.
ನಗರದ ಎಲ್ಲ ಸ್ಟ್ರೀಟ್ಲೈಟ್ಗಳನ್ನು ಎಲ್ಇಡಿಗೆ ಪರಿವರ್ತಿಸುವ ಮೂಲಕ ವಿದ್ಯುತ್ ಉಳಿತಾಯ ಮಾಡುವುದು ಹಾಗೂ ಕರೆಂಟ್ ಬಿಲ್ ತಗ್ಗಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಪ್ರಸ್ತುತ ಮಂಗಳೂರು ಮಹಾನಗರಪಾಲಿಕೆ ವರ್ಷಕ್ಕೆ 11ರಿಂದ 12 ಕೋಟಿ ರೂ. ವಿದ್ಯುತ್ ಬಿಲ್ ಪಾವತಿಸುತ್ತಿದೆ. ಇದನ್ನು ಶೇ.50ರಷ್ಟು ತಗ್ಗಿಸುವುದು ಎಲ್ಇಡಿ ಅಳವಡಿಕೆಯ ಪರಮ ಗುರಿಯಾಗಿದೆ. ಎಲ್ಇಡಿ ಸ್ಟ್ರೀಟ್ಲೈಟ್ ಅಳವಡಿಸುವ ನಿಟ್ಟಿನಲ್ಲಿ ಫೆಬ್ರವರಿ 11 ಟೆಂಡರ್ನ ಕೊನೆಯ ದಿನವಾಗಿದೆ.
ಪಿಪಿಪಿ ಮಾದರಿ
ಮಂಗಳೂರು ನಗರದ ದಾರಿದೀಪವನ್ನು ಎಲ್ಇಡಿಗೆ ಬದಲಾಯಿಸುವ ಹಾಗೂ ನಿರ್ವಹಣೆಯನ್ನು ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ನಡೆಸಲಾಗುವುದು. ಶೇ. 50ರಷ್ಟು ವಿದ್ಯುತ್ ಬಿಲ್ ಉಳಿತಾಯ ಮಾಡುವುದು ಎಲ್ಇಡಿ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಹಳೆ ಪ್ರಸ್ತಾಪ
ಸಿದ್ದರಾಮಯ್ಯ ಸರಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಆರ್. ರೋಶನ್ ಬೇಗ್ ಅವರು ಎಲ್ಇಡಿ ಪ್ರಸ್ತಾಪವನ್ನಿಟ್ಟಿದ್ದರು. ಎರಡು ವರ್ಷಗಳ ಹಿಂದೆ ಪಾಲಿಕೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಭಾಗವಹಿಸಿದ ಅವರು ವಿದ್ಯುತ್ ಬಿಲ್ ಕಡಿಮೆ ಮಾಡುವ ದೃಷ್ಟಿಯಿಂದ ನಗರದ ದಾರಿದೀಪವನ್ನು ಎಲ್ಇಡಿಗೆ ಬದಲಾಯಿಸುವಂತೆ ಪಾಲಿಕೆ ಆಡಳಿತಕ್ಕೆ ಸೂಚಿಸಿದ್ದರು. ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸುವಂತೆಯೂ ತಿಳಿಸಿದ್ದರು.
ಮಂಗಳೂರು ನಗರವನ್ನು ಎಲ್ಇಡಿಗೆ ಬದಲಾಯಿಸುವ ನಿಟ್ಟಿನಲ್ಲಿ ಸ್ಮಾರ್ಟ್ಸಿಟಿ ಯೋಜನೆಯಡಿ ಎರಡು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮಂಗಳೂರಿನ ಎಲ್ಲ ಸರಕಾರಿ ಕಚೇರಿಗಳಿಗೆ ಎಲ್ಇಡಿ ಅಳವಡಿಸುವ ಬಗ್ಗೆ ವರ್ಕ್ ಆರ್ಡರ್ ನೀಡಲಾಗಿದೆ. ನಗರದ ದಾರಿದೀಪಗಳನ್ನು ಎಲ್ಇಡಿಗೆ ಪರಿವರ್ತಿಸುವ ಯೋಜನೆಗೆ ಟೆಂಡರ್ ಕರೆಯಲಾಗಿದೆ.
- ನಾರಾಯಣಪ್ಪ, ಆಡಳಿತ ನಿರ್ದೇಶಕರು, ಮಂಗಳೂರು ಸ್ಮಾರ್ಟ್ಸಿಟಿ ಕಂಪನಿ ಲಿಮಿಟೆಡ್.