ಆ್ಯಪ್ನಗರ

ಕದ್ದ ಲಾರಿಯನ್ನು ಚಾರ್ಮಾಡಿ ಘಾಟಿಯಲ್ಲಿ ಬಿಟ್ಟುಹೋದ ಕಳ್ಳರು

ಬೆಳ್ತಂಗಡಿ: ನಿಲ್ಲಿಸಿದ್ದ ಲಾರಿಯನ್ನು ರಾತ್ರಿ ಯಾರೋ ಅಪರಿಚಿತರು ಕದ್ದೊಯ್ದು, ಅದರ ಎರಡು ಟಯರ್‌ಗಳನ್ನು ಕದ್ದು, ಲಾರಿಯನ್ನು ಚಾರ್ಮಾಡಿ ಘಾಟಿಯಲ್ಲಿ ಬಿಟ್ಟುಹೋದ ಘಟನೆ ಭಾನುವಾರ ಮುಂಜಾನೆ ನಡೆದಿದೆ.

Vijaya Karnataka 10 Dec 2018, 3:48 pm
ಬೆಳ್ತಂಗಡಿ: ನಿಲ್ಲಿಸಿದ್ದ ಲಾರಿಯನ್ನು ರಾತ್ರಿ ಯಾರೋ ಅಪರಿಚಿತರು ಕದ್ದೊಯ್ದು, ಅದರ ಎರಡು ಟಯರ್‌ಗಳನ್ನು ಕದ್ದು, ಲಾರಿಯನ್ನು ಚಾರ್ಮಾಡಿ ಘಾಟಿಯಲ್ಲಿ ಬಿಟ್ಟುಹೋದ ಘಟನೆ ಭಾನುವಾರ ಮುಂಜಾನೆ ನಡೆದಿದೆ.
Vijaya Karnataka Web lory theft accuse escape
ಕದ್ದ ಲಾರಿಯನ್ನು ಚಾರ್ಮಾಡಿ ಘಾಟಿಯಲ್ಲಿ ಬಿಟ್ಟುಹೋದ ಕಳ್ಳರು


ಲಾೖಲದ ಆದರ್ಶ ನಗರ ವ್ಯಕ್ತಿಯೊಬ್ಬರು ತನ್ನ ಲಾರಿಯನ್ನು ಬೆಳ್ತಂಗಡಿ ಸಮೀಪದ ಮಸೀದಿ ಬಳಿ ರಾತ್ರಿ ನಿಲ್ಲಿಸಿ, ಮನೆಗೆ ಹೋಗುತ್ತಿದ್ದರು. ಶನಿವಾರ ರಾತ್ರಿ ಅದೇ ಸ್ಥಳದಲ್ಲಿ ಲಾರಿಯನ್ನು ನಿಲ್ಲಿಸಿದ್ದರು. ಭಾನುವಾರ ಮುಂಜಾನೆ ಬಂದು ನೋಡಿದಾಗ ನಿಲ್ಲಿಸಿದ್ದ ಸ್ಥಳದಲ್ಲಿ ಲಾರಿ ಇರಲಿಲ್ಲ. ತಕ್ಷ ಣ ತನ್ನ ಪರಿಚಿತರಿಗೆ ಮಾಹಿತಿ ನೀಡಿದ್ದಾರೆ.

ಭಾನುವಾರ ಬೆಳಗ್ಗೆ ಚಾರ್ಮಾಡಿ ಘಾಟಿಯ 11ನೇ ತಿರುವು ದಾಟಿ ರಸ್ತೆ ಬದಿಯಲ್ಲಿ ಲಾರಿಯೊಂದು ನಿಂತಿದೆ ಎಂಬ ಮಾಹಿತಿ ಸಿಕ್ಕಿತು. ಅಲ್ಲಿ ಹೋದಾಗ ರಾತ್ರಿ ಕಳವಾದ ಲಾರಿಯೇ ಆಗಿತ್ತು. ಅದರಿಂದ ಎರಡು ಚಕ್ರಗಳನ್ನು ಬದಲಿಸಿ, ಹಳೆಯ ಚಕ್ರವನ್ನು ಸಿಕ್ಕಿಸಿ, ಹೊಸ ಚಕ್ರದೊಂದಿಗೆ ಪರಾರಿಯಾಗಿದ್ದಾರೆ.

ಮಾಲೀಕನೇ ಚಾಲಕನಾಗಿ ಪ್ರತಿದಿನ ಮುಂಜಾನೆ 4 ಗಂಟೆಗೆ ಕೆಲಸಕ್ಕೆ ಹೋಗುತ್ತಿದ್ದರು. ಉಜಿರೆಯಲ್ಲಿ ಮೂರು ಗಂಟೆ ಸಮಯಕ್ಕೆ ಇದೇ ಲಾರಿ ಚಾರ್ಮಾಡಿ ಕಡೆಗೆ ಹೋಗಿದ್ದನ್ನು ಲಾರಿ ಮಾಲೀಕನ ಪರಿಚಯಸ್ಥರು ಗಮನಿಸಿದ್ದರು. ಕದ್ದೊಯ್ದ ಲಾರಿಯ ಹೊಸ ಚಕ್ರವನ್ನು ಬದಲಾಯಿಸಿ ಉಜಿರೆ ಕಡೆಗೆ ಮುಖ ಮಾಡಿ ನಿಲ್ಲಿಸಿ, ಪರಾರಿಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ