ಆ್ಯಪ್ನಗರ

ಲವ್‌ ಜಿಹಾದ್‌ ಮಟ್ಟಹಾಕಲು ಹಿಂದೂ ಟಾಸ್ಕ್‌ಪೋರ್ಸ್‌

ಆಧುನಿಕ ಯುಗದಲ್ಲಿ ಸಾಮಾಜಿಕ ಜಾಲತಾಣಗಳ ದಾಳಿಗೆ ಬಲಿಬಿದ್ದು ಲವ್‌ಜೆಹಾದ್‌ನಿಂದ ಹಿಂದು ಯುವತಿಯರು ವಂಚನೆಗೊಳಗಾಗುತ್ತಿರುವ ಈ ಕಾಲಘಟ್ಟದಲ್ಲಿ 'ಹಿಂದೂ ಟಾಸ್ಕ್‌ಪೋರ್ಸ್‌' ಸಂಘಟನೆ ಹುಟ್ಟುಹಾಕಲಾಗಿದೆ

Vijaya Karnataka 19 Jan 2018, 9:36 am

ಫೆಬ್ರವರಿಯಿಂದ ಕಾರ್ಯಾಚರಣೆ ಶುರು | ಕಾನೂನು ಪ್ರಕಾರ ಅಧಿಕೃತ ನೋಂದಾವಣೆ

ವಿಜಯ ಕೋಟ್ಯಾನ್‌

Vijaya Karnataka Web love jihad hindu task force
ಲವ್‌ ಜಿಹಾದ್‌ ಮಟ್ಟಹಾಕಲು ಹಿಂದೂ ಟಾಸ್ಕ್‌ಪೋರ್ಸ್‌


ಮಂಗಳೂರು:
ಆಧುನಿಕ ಯುಗದಲ್ಲಿ ಸಾಮಾಜಿಕ ಜಾಲತಾಣಗಳ ದಾಳಿಗೆ ಬಲಿಬಿದ್ದು ಲವ್‌ಜೆಹಾದ್‌ನಿಂದ ಹಿಂದು ಯುವತಿಯರು ವಂಚನೆಗೊಳಗಾಗುತ್ತಿರುವ ಈ ಕಾಲಘಟ್ಟದಲ್ಲಿ 'ಹಿಂದೂ ಟಾಸ್ಕ್‌ಪೋರ್ಸ್‌' ಸಂಘಟನೆ ಹುಟ್ಟುಹಾಕಲಾಗಿದ್ದು, ಭಾರತದ ಸಂವಿಧಾನ ಮತ್ತು ಕಾನೂನು ಚೌಕಟ್ಟಿನೊಳಗೆ ಇದು ಕಾರ್ಯಾಚರಣೆ ನಡೆಸಲಿದೆ. ಮುಂದಿನ ಫೆಬ್ರವರಿಯಿಂದ ಈ ಸಂಘಟನೆ ಅಧಿಕೃತವಾಗಿ ಕಾರ್ಯಾಚರಣೆ ನಡೆಸಲಿದೆ ಎಂದು ಗುರುಪುರ ಶ್ರೀ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.

ಗುರುವಾರ ವಿಜಯ ಕರ್ನಾಟಕ ಜತೆ ಮಾತನಾಡಿದ ಅವರು, ಕಾನೂನು ಪ್ರಕಾರ ಇದು ನೋಂದಾವಣಿಯಾಗಿದ್ದು ರಾಷ್ಟ್ರ, ರಾಜ್ಯ, ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಕಾರ್ಯಾಚರಣೆ ನಡೆಸಲಿದೆ. ಈಗಾಗಲೇ 24 ಮಂದಿ ಸದಸ್ಯರನ್ನೊಳಗೊಂಡ ರಾಷ್ಟ್ರಮಟ್ಟದ ಸಮಿತಿ ರಚಿಸಲಾಗಿದ್ದು ಇದರಲ್ಲಿ ವೈದ್ಯರು, ವಕೀಲರು, ಐಟಿ ಎಂಜಿನಿಯರ್‌ಗಳು, ಸಾಮಾಜಿಕ ಕಾರ‍್ಯಕರ್ತರು, ಯುವಕ- ಯುವತಿಯರನ್ನೊಳಗೊಂಡ ಕೌನ್ಸೆಲಿಂಗ್‌ ತಂಡವನ್ನೊಳಗೊಂಡ ಕಾರ್ಯಪಡೆ ಇದಾಗಿದೆ ಎಂದರು.

ಟಾಸ್ಕ್‌ಫೋರ್ಸ್‌ ಕಾರ್ಯಾಚರಣೆ ಹೇಗೆ?: ಲವ್‌ಜೆಹಾದ್‌ ಸೇರಿದಂತೆ ಯಾವುದೇ ಪ್ರಕರಣ ಪೊಲೀಸ್‌ ಠಾಣೆಯ ಮೆಟ್ಟಿಲು ಹತ್ತುವ ಮುನ್ನವೇ ಟಾಸ್ಕ್‌ಫೋರ್ಸ್‌ ಗಮನಕ್ಕೆ ಬಂದರೆ ಈ ತಂಡ ಕಾನೂನು ಚೌಕಟ್ಟಿನೊಳಗಿದ್ದುಕೊಂಡೇ ಸುಲಲಿತವಾಗಿ ಸಮಸ್ಯೆ ಬಗೆಹರಿಸಲಿದೆ. ಬಾಹ್ಯ ಸೌಂದರ್ಯ, ಆಮಿಷಕ್ಕೊಳಗಾಗಿ ಸಾಮಾಜಿಕ ತಾಣಗಳಲ್ಲಿ ಲವ್‌ ಜೆಹಾದ್‌ಗೆ ಬಲಿಬೀಳುವ ಹೆಣ್ಣುಮಕ್ಕಳ ಬಗ್ಗೆ ಮಾಹಿತಿ ಕಲೆಹಾಕಲು ಐಟಿ ಸೆಲ್‌ ರಚಿಸಲಾಗಿದೆ. ಬಳಿಕ ಆ ಮಾಹಿತಿಯನ್ನು ಪೋಷಕರ ಗಮನಕ್ಕೆ ತಂದು ಬಳಿಕ ಕೌನ್ಸಿಲ್‌ ನೀಡುವ ಪ್ರಕ್ರಿಯೆ ನಡೆಯಲಿದೆ.

ಸದಸ್ಯರ ಆಯ್ಕೆಗೂ ಮಾನದಂಡ: ಹಿಂದೂ ಟಾಸ್ಕ್‌ಪೋರ್ಸ್‌ ಸದಸ್ಯರನ್ನು ಆಯ್ಕೆ ಮಾಡುವ ಕೆಲವೊಂದು ಮಾನದಂಡಗಳನ್ನು ಹಾಕಲಾಗಿದ್ದು, ಯಾವುದೇ ಕಾರಣಕ್ಕೂ ಇದು ನಿಯಮ ಮೀರಿ ಹೋಗಲ್ಲ. ಧರ್ಮ-ಕಾನೂನಿನಡಿಯಲ್ಲಿ ಹಿಂದೂ ಸಮಾಜದ ರಕ್ಷಣೆ ಈ ಸದಸ್ಯರ ಏಕೈಕ ಅಜೆಂಡಾ. ಟಾಸ್ಕ್‌ಪೋರ್ಸ್‌ ಸದಸ್ಯರಿಗೆ ಗುರುತಿನ ಚೀಟಿ, ಕಾರಾರ‍ಯಗಾರ ನಡೆಸಲಾಗುವುದು. ಇದು ಮಾತ್ರವಲ್ಲದೆ ಸದಸ್ಯನಾಗಿ ಜವಾಬ್ದಾರಿ ಸ್ವೀಕರಿಸುವಾಗ ಪ್ರಮಾಣ ವಚನವನ್ನು ಬೋಧನೆಯೂ ನಡೆಯಲಿದೆ.

ಗುರುಕುಲ ಪದ್ಧತಿ ಶಿಕ್ಷಣಕ್ಕೆ ಒತ್ತು: ಶೈಕ್ಷಣಿಕ ಮೌಲ್ಯ ಕುಸಿಯುತ್ತಿರುವ ಕಾಲಘಟ್ಟದಲ್ಲಿ ಗುರುಕುಲ ಶಿಕ್ಷಣ ಪದ್ಧತಿಗೆ ಒತ್ತುಕೊಡುವ ಕೆಲಸ ಆಗಬೇಕಿದೆ. ಆಗ ಮಾತ್ರ ಕುಟುಂಬ ಪದ್ಧತಿ, ಸಂಸ್ಕಾರ, ಸಹಬಾಳ್ವೆ, ಮಾನವೀಯ ಮೌಲ್ಯ ಶಿಕ್ಷಣ ದೊರೆಯಲು ಸಾಧ್ಯವಿದೆ. ಟಾಸ್ಕ್‌ಫೋರ್ಸ್‌ ಸಂಘಪರಿವಾರದ ಒಂದು ಭಾಗವಾಗಿ ಈ ಎಲ್ಲ ಕಾರ್ಯಗಳನ್ನು ಮಾಡಲಿದೆ.

ಸಂಘಟನೆಗಳಿಗೂ ಮಾನದಂಡ ಬೇಕು: ಯಾವುದೇ ಸಂಘಟನೆಗಳು ಧರ್ಮ, ಸಮಾಜದ ದೃಷ್ಟಿಯಿಂದ ಕೆಲಸ ಮಾಡುವಾಗ ಕೆಲವೊಂದು ಮಾನದಂಡಗಳು ಪಾಲಿಸಬೇಕು. ಇಲ್ಲದಿದ್ದಲ್ಲಿ ಕೆಲವೊಮ್ಮೆ ಅಪಚಾರಕ್ಕೆ ಒಳಗಾಗಬೇಕಾಗುತ್ತದೆ. ಟಾಸ್ಕ್‌ಪೋರ್ಸ್‌ ಈ ನಿಟ್ಟಿನಲ್ಲಿ ಜಾಗೃತ ಹೆಜ್ಜೆಗಳನ್ನಿಡಲಿದೆ. ಪ್ರತಿಯೊಂದು ಸಂಘಟನೆಗೂ ಈ ರೀತಿಯ ಮಾನದಂಡ ಅನಿವಾರ್ಯ. ಟಾಸ್ಕ್‌ಪೋರ್ಸ್‌ ತನ್ನದೇ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಸಂಘಟನೆಗಳು ಇದರ ಜವಾಬ್ದಾರಿ ಅರಿತುಕೊಳ್ಳಬೇಕು. ಕಾನೂನು ಚೌಕಟ್ಟಿನಲ್ಲಿ ಕಾರ‍್ಯನಿರ್ವಹಿಸಿದಾಗ ಯಾವುದೇ ರೀತಿ ಘಟನೆಗಳು ಟಾಸ್ಕ್‌ಪೋರ್ಸ್‌ ಘನತೆ, ಗೌರವಕ್ಕೆ ಚ್ಯುತಿ ತರಲು ಸಾಧ್ಯವಿಲ್ಲ ಎಂದರು.

20 ಪ್ರಕರಣದಲ್ಲಿ 8 ಬಗೆಹರಿದಿದೆ

ಹಿಂದೂ ಟಾಸ್ಕ್‌ಪೋರ್ಸ್‌ ಆರಂಭಿಸುತ್ತಿದ್ದೇವೆ ಎಂದು ಘೋಷಣೆ ಮಾಡುತ್ತಿದ್ದಂತೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಹರಿದು ಬಂದಿದೆ. ಸಂಘಟನೆ ಮುಖಂಡ, ಧಾರ್ಮಿಕ ಗುರುಗಳು ಸೂಕ್ತವಾಗಿ ಸ್ಪಂದಿಸಿದ್ದಾರೆ. ಆ ಬಳಿಕ ಟಾಸ್ಕ್‌ಪೋರ್ಸ್‌ ಮುಂದೆ ಬಂದ 20ಪ್ರಕರಣದಲ್ಲಿ 8ಬಗೆಹರಿದಿದ್ದು, ಆ ಕುಟುಂಬ ನೆಮ್ಮದಿಯ ಜೀವನ ನಡೆಸುತ್ತಿದೆ. ಉಳಿದ 8 ಘಟನೆಗಳು ಸೂಕ್ಷ್ಮವಾಗಿ ನಿಭಾಯಿಸಿಕೊಂಡು ಹೋಗಲಾಗುತ್ತಿದ್ದು ಖಂಡಿತಾ ಇದರಲ್ಲಿ ಯಶಸ್ಸುಗಳಿಸುತ್ತೇವೆಂಬ ವಿಶ್ವಾಸವಿದೆ.

ಮನೆಮನೆಯಲ್ಲೂ ಸಂಸ್ಕಾರ, ಜಾಗೃತಿ

ಒತ್ತಡ ಬದುಕಿನಲ್ಲಿ ಕುಟುಂಬ ಜೀವನ ಪದ್ಧತಿ ಮಾಯವಾಗಿದೆ. ಶೈಕ್ಷಣಿಕ ಮೌಲ್ಯ ಕುಸಿತವಾಗಿದೆ. ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಪ್ರತಿಯೊಂದು ಘಟನೆಗಳನ್ನು ಸೂಕ್ಷ್ಮವಾಗಿ ಯೋಚಿಸುವಾಗ ಈ ಲೋಪಗಳು ಗೋಚರಿಸುತ್ತಿವೆ. ಅದಕ್ಕಾಗಿ ಟಾಸ್ಕ್‌ಫೋರ್ಸ್‌ ಕೇವಲ ಲವ್‌ಜೆಹಾದ್‌ಗೆ ಸೀಮಿತವಾಗಿಲ್ಲ. ರಾಷ್ಟ್ರ, ರಾಜ್ಯ, ಜಿಲ್ಲಾ, ಗ್ರಾಮ ಮಟ್ಟದಲ್ಲಿ ಶಾಖೆಗಳನ್ನು ತೆರೆದು ಪ್ರತಿ ಮನೆಯ ಮಗುವಿನಲ್ಲೂ ಷೋಢಶ ಸಂಸ್ಕಾರ ಅರಿವು, ಧರ್ಮಜಾಗೃತಿ ಮೂಡಿಸುವ ಕೆಲಸ ಮಾಡಲಿದೆ. ಭವಿಷ್ಯ ದಿನಗಳು ಖಂಡಿತ ಹಿಂದೂ ಸಮಾಜಕ್ಕೆ ಒಂದು ಪರ್ವ, ದಿಕ್ಸೂಚಿಯ ದಿನಗಳಾಗುವುದರಲ್ಲಿ ಯಾವುದೇ ಸಂದೇಹ ಬೇಡ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ