ಆ್ಯಪ್ನಗರ

ತಂದೆಯ ಮರಣದ ಸುದ್ದಿ ಕೇಳಿ ಪುತ್ರ ಆತ್ಮಹತ್ಯೆ

ತಂದೆಯ ಮರಣದ ವಾರ್ತೆ ಕೇಳಿದ ತಕ್ಷ ಣ ಮನೆಯಿಂದ ತೆರಳಿದ ಯುವಕನೊಬ್ಬ ಮನೆ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಟ್ಯಾರ್‌ನಲ್ಲಿ ನಡೆದಿದೆ...

Vijaya Karnataka 17 Jul 2019, 7:20 am
ಸಂಟ್ಯಾರ್‌: ತಂದೆಯ ಮರಣದ ವಾರ್ತೆ ಕೇಳಿದ ತಕ್ಷ ಣ ಮನೆಯಿಂದ ತೆರಳಿದ ಯುವಕನೊಬ್ಬ ಮನೆ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಟ್ಯಾರ್‌ನಲ್ಲಿ ನಡೆದಿದೆ.
Vijaya Karnataka Web Suicide Hang


ಆರ್ಯಾಪು ಗ್ರಾಮದ ಸಂಟ್ಯಾರ್‌ ಶಾಲಾ ಬಳಿ ನಿವಾಸಿ ಸುರೇಶ್‌ (31) ಆತ್ಮಹತ್ಯೆ ಮಾಡಿಕೊಂಡ ಯುವಕ. ಸುರೇಶ್‌ ಅವರ ತಂದೆ ಜು.14ರಂದು ನಿಧನರಾಗಿದ್ದರು. ಆ ದಿನ ತನ್ನ ಚಿಕ್ಕಪ್ಪ ಚಿದಾನಂದ ಅವರ ಮನೆಯಲ್ಲಿದ್ದ ವೇಳೆ ಯಾರೋ ಕರೆ ಮಾಡಿ ತಂದೆ ಮರಣ ಹೊಂದಿದ ವಿಚಾರವನ್ನು ತಿಳಿಸಿದ್ದಾರೆ.

ಅಲ್ಲಿಂದ ತೆರಳಿದ್ದ ಸುರೇಶ್‌ ಬಳಿಕ ನಾಪತ್ತೆಯಾಗಿದ್ದರು. ಹುಡಕಾಡಿದರೂ ಸಿಗದೇ ಇರುವಾಗ ಚಿದಾನಂದ ಪತ್ನಿ ಯಮುನಾ ಅವರು ಸಂಪ್ಯ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಜು. 16 ರಂದು ಸಂಟ್ಯಾರ್‌ ಶಾಲಾ ಬಳಿ ಗುಡ್ಡದಲ್ಲಿ ವಾಸನೆ ಬರುವುದನ್ನು ಗಮನಿಸಿದ ಸ್ಥಳೀಯರು ಅಲ್ಲಿ ತೆರಳಿದಾಗ ಸುರೇಶ್‌ ಅವರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಂದೆಯ ಮರಣದ ಸುದ್ದಿ ಕೇಳಿ ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ