ಆ್ಯಪ್ನಗರ

ಗಣೇಶೋತ್ಸವದ ಚಪ್ಪರದಲ್ಲೇ ಚೂರಿ ಇರಿದು ಯುವಕನ ಬರ್ಬರ ಹತ್ಯೆ

ಗಣೇಶೋತ್ಸವ ಚಪ್ಪರದಲ್ಲಿ ಚೂರಿ ಇರಿದು ವ್ಯಕ್ತಿಯೊಬ್ಬನನ್ನು ಹತ್ಯೆಗೈಯ್ಯಲಾಗಿದೆ.

Vijaya Karnataka Web 4 Sep 2019, 9:32 am
ಪುತ್ತೂರು: ಗಣೇಶೋತ್ಸವದಲ್ಲಿ ಭಾಗವಹಿಸಿ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸುತ್ತಿದ್ದ ಯುವಕನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಪುತ್ತೂರಿನ ಸಂಪ್ಯದಲ್ಲಿ ನಡೆದಿದೆ.
Vijaya Karnataka Web Kartik

ಕಾರ್ತಿಕ್ (27) ಎಂಬವರೇ ಕೊಲೆಯಾದ ಯುವಕ.

ಈತ ಹಿಂದೂ ಜಾಗರಣ ವೇದಿಕೆಯ ಮುಖಂಡನಾಗಿದ್ದ.

ಮಂಗಳವಾರ ಮಧ್ಯರಾತ್ರಿ ಗಣೇಶೋತ್ಸವ ಚಪ್ಪರಕ್ಕೆ ನುಗ್ಗಿದ ದುಷ್ಕರ್ಮಿಗಳು ಕಾರ್ತಿಕ್‌ಗೆ ಚೂರಿ ಇರಿದು ಪರಾರಿಯಾಗಿದ್ದಾರೆ. ತಕ್ಷಣ ಕಾರ್ತಿಕ್‌ನನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಿ ಆತ ಮೃತಪಟ್ಟಿದ್ದ. ಘಟನಾ ಸ್ಥಳಕ್ಕೆ ಎಸ್‌ಪಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಪುತ್ತೂರು ನಗರದಿಂದ ಕೇವಲ ಮೂರು ಕೀ.ಮೀ. ದೂರದಲ್ಲಿರುವ ಬಂಟ್ವಾಳ - ಮೈಸೂರು ಹೆದ್ದಾರಿಯ ಪಕ್ಕದಲ್ಲಿ ಘಟನೆ ನಡೆದಿದ್ದು ಅಲ್ಲೇ ಪಕ್ಕದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯಿದೆ.

ಕೋಮು ಘಟನೆ ಅಲ್ಲ

ಇದು ಒಂದೇ ಧರ್ಮದ ಒಳಗೆ ನಡೆದ ಘಟನೆ. ಇದಕ್ಕೆ ಮತೀಯ ಹಿನ್ನೆಲೆ ಇಲ್ಲ. ಪೂರ್ವ ದ್ವೇಷದಿಂದ ಹತ್ಯೆ ನಡೆದಿದೆ. ಪ್ರಧಾನ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಂಪ್ಯ ಎಸ್ ಐ ಶಕ್ತಿವೇಲು ವಿಜಯ ಕರ್ನಾಟಕಕ್ಕೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ