ಆ್ಯಪ್ನಗರ

ಮಂಗಳೂರು- ಬೆಂಗಳೂರು ರೈಲು ಆರಂಭ

ಭಾರಿ ಮಳೆಯ ಹಿನ್ನೆಲೆಯಲ್ಲಿಕುಲಶೇಖರ- ಪಡೀಲ್‌ ಮಧ್ಯೆ ಸೋಮವಾರ ಮತ್ತೆ ಗುಡ್ಡ ಕುಸಿತವಾಗಿದ್ದು, ಕಾರವಾರ- ಕೆಎಸ್‌ಆರ್‌ ಬೆಂಗಳೂರು ಎಕ್ಸ್‌ಪ್ರೆಸ್‌ ಹಾಗೂ ಕಾರವಾರ- ಯಶವಂತಪುರ ಎಕ್ಸ್‌ಪ್ರೆಸ್‌ ರೈಲು ಓಡಾಟವನ್ನು ಭಾಗಶಃ ರದ್ದುಪಡಿಸಲಾಗಿದೆ. ಮಂಗಳೂರು- ಬೆಂಗಳೂರು ರಾತ್ರಿ ರೈಲು ಸೋಮವಾರದಿಂದ ಮತ್ತೆ ಆರಂಭವಾಗಿದೆ.

Vijaya Karnataka 27 Aug 2019, 3:54 pm
ಮಂಗಳೂರು: ಭಾರಿ ಮಳೆಯ ಹಿನ್ನೆಲೆಯಲ್ಲಿಕುಲಶೇಖರ- ಪಡೀಲ್‌ ಮಧ್ಯೆ ಸೋಮವಾರ ಮತ್ತೆ ಗುಡ್ಡ ಕುಸಿತವಾಗಿದ್ದು, ಕಾರವಾರ- ಕೆಎಸ್‌ಆರ್‌ ಬೆಂಗಳೂರು ಎಕ್ಸ್‌ಪ್ರೆಸ್‌ ಹಾಗೂ ಕಾರವಾರ- ಯಶವಂತಪುರ ಎಕ್ಸ್‌ಪ್ರೆಸ್‌ ರೈಲು ಓಡಾಟವನ್ನು ಭಾಗಶಃ ರದ್ದುಪಡಿಸಲಾಗಿದೆ. ಮಂಗಳೂರು- ಬೆಂಗಳೂರು ರಾತ್ರಿ ರೈಲು ಸೋಮವಾರದಿಂದ ಮತ್ತೆ ಆರಂಭವಾಗಿದೆ.
Vijaya Karnataka Web 26m kulashekara


ಜು.21ರಂದು ಭಾರಿ ಮಳೆಗೆ ಸಿರಿಬಾಗಿಲಲ್ಲಿಭೂಕುಸಿತ ಉಂಟಾಗಿ ರೈಲು ಸಂಚಾರ ಸ್ಥಗಿತಗೊಂಡಿತ್ತು. ದುರಸ್ತಿ ಸಂದರ್ಭದಲ್ಲಿ ಭಾರಿ ಮಳೆಗೆ ಮತ್ತೆ ಮೂರು ಕಡೆಗಳಲ್ಲಿಗುಡ್ಡ ಜರಿದು ಹಳಿಯ ಮೇಲೆ ಬಿದ್ದಿತ್ತು. ಇದರಿಂದ ಸುಮಾರು ಒಂದು ತಿಂಗಳ ಕಾಲ ಸುಬ್ರಹ್ಮಣ್ಯ ರೋಡ್‌- ಸಕಲೇಶಪುರ ಮಾರ್ಗವಾಗಿ ರೈಲು ಸಂಚಾರ ರದ್ದುಗೊಂಡಿತ್ತು.

ಇದೀಗ ಮಣ್ಣು ತೆರವು ಕಾರ್ಯಾಚರಣೆ ಪೂರ್ಣಗೊಂಡಿದ್ದು, ಶನಿವಾರ ಈ ಮಾರ್ಗದಲ್ಲಿಗೂಡ್ಸ್‌ ರೈಲು ಪ್ರಾಯೋಗಿಕವಾಗಿ ಓಡಿಸಲಾಗಿದೆ. ಸೋಮವಾರ ರಾತ್ರಿ ರೈಲು ಎಂದಿನಂತೆ ಓಡಾಟ ನಡೆಸಿದೆ.

ಕುಲಶೇಖರದಲ್ಲಿಮತ್ತೆ ಗುಡ್ಡ ಕುಸಿತ

ಆ.26ರಂದು ಸಂಚರಿಸಬೇಕಿದ್ದ ಕಾರವಾರ- ಕೆಎಸ್‌ಆರ್‌ ಬೆಂಗಳೂರು ಎಕ್ಸ್‌ಪ್ರೆಸ್‌ (16514)ಕಾರವಾರ- ಮಂಗಳೂರು ಸೆಂಟ್ರಲ್‌ ಮಧ್ಯೆ ಭಾಗಶಃ ರದ್ದುಗೊಂಡಿದೆ. ಆ. 27ರಂದು ಪ್ರಯಾಣಿಸಬೇಕಿದ್ದ ಕಾರವಾರ- ಯಶವಂತಪುರ ಎಕ್ಸ್‌ಪ್ರೆಸ್‌ ಕಾರವಾರ- ಮಂಗಳೂರು ಜಂಕ್ಷನ್‌ ನಡುವೆ ಭಾಗಶಃ ರದ್ದುಗೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ