ಆ್ಯಪ್ನಗರ

ಪಾಲಿಕೆ ಟಿಕೆಟ್‌ ಹಂಚಿಕೆ: ಕಾಂಗ್ರೆಸ್‌ ಅತೃಪ್ತಿ ಸ್ಫೋಟ

ಮಂಗಳೂರು ಮಹಾ ನಗರ ಪಾಲಿಕೆ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬೆನ್ನಿಗೆ ಆಕಾಂಕ್ಷಿಗಳ ಅಸಮಾಧಾನ ಸ್ಫೋಟಗೊಂಡಿದೆ.

Vijaya Karnataka 31 Oct 2019, 5:00 am
ಮಂಗಳೂರು: ಮಂಗಳೂರು ಮಹಾ ನಗರ ಪಾಲಿಕೆ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬೆನ್ನಿಗೆ ಆಕಾಂಕ್ಷಿಗಳ ಅಸಮಾಧಾನ ಸ್ಫೋಟಗೊಂಡಿದೆ.
Vijaya Karnataka Web mangalore city corporation election
ಪಾಲಿಕೆ ಟಿಕೆಟ್‌ ಹಂಚಿಕೆ: ಕಾಂಗ್ರೆಸ್‌ ಅತೃಪ್ತಿ ಸ್ಫೋಟ


ಮಾಜಿ ಶಾಸಕ ಮೊಹಿದಿನ್‌ ಬಾವ ಅವರ ಮೇಲೆ ಮಾಜಿ ಮೇಯರ್‌ ಗುಲ್ಝಾರ್‌ಬಾನು ಅವರ ಮಗ ಅಝೀಮ್‌ ಹಲ್ಲೆನಡೆಸಿದರೆ, ಮಾಜಿ ಶಾಸಕ ಜೆ.ಆರ್‌.ಲೋಬೊ ಅವರಿಗೆ ಬೆಂಗ್ರೆಯ ಕಾಂಗ್ರೆಸ್‌ ಕಾರ್ಯಕರ್ತರು ಘೇರಾವ್‌ ನಡೆಸಿ, ಘೋಷಣೆ ಕೂಗಿದರು.

ಪಟ್ಟಿ ಬಿಡುಗಡೆ ಬಳಿಕ ಬುಧವಾರ ರಾತ್ರಿ ನಗರದ ಖಾಸಗಿ ಹೋಟೆಲ್‌ನಲ್ಲಿಕಾಂಗ್ರೆಸ್‌ ಮುಖಂಡರಿಂದ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಹೊರಭಾಗದಲ್ಲಿಮಾಜಿ ಮೇಯರ್‌ಗುಲ್ಝಾರ್‌ಬಾನು ಹಾಗೂ ಅವರ ಪುತ್ರ ನಿಂತು, ಮೊಹಿದಿನ್‌ ಬಾವ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾಟಿಪಳ್ಳ ವಾರ್ಡ್‌ ನಲ್ಲಿಮಾಜಿ ಮೇಯರ್‌ಗುಲ್ಜಾರ್‌ ಬಾನು ಕಾಂಗ್ರೆಸ್‌ ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಪಕ್ಷ ಟಿಕೆಟ್‌ ನಿರಾಕರಿಸಿದೆ. ಕೊನೆಯವರೆಗೂ ಪಕ್ಷದ ಮುಖಂಡರು ಗುಟ್ಟು ಬಿಟ್ಟುಕೊಟ್ಟಿರಲಿಲ್ಲ.

ಮಾಜಿ ಶಾಸಕ ಮೊಯಿದ್ದೀನ್‌ ಬಾವ ಅವರು ಹೋಟೆಲ್‌ನಿಂದ ಹೊರಬರುತ್ತಿದ್ದಂತೆಯೇ ಅವರಿಗಾಗಿ ಕಾದು ಕುಳಿತಿದ್ದ ಗುಲ್ಜಾರ್‌ ಬಾನು ಅವರ ಪುತ್ರ ಅಝೀಮ್‌ ಅವರು ಬಾವ ಅವರ ಮೇಲೆ ಬಿದ್ದಿದ್ದಲ್ಲದೆ, ಮಾತಿನ ಚಕಮಕಿ, ತಳ್ಳಾಟ, ಹೊಡೆದಾಟ ನಡೆಯಿತು.

ಈ ಸಂದರ್ಭ ಎರಡೂ ಕಡೆಯ ಜನ ಜಮಾಯಿಸಿದ್ದು ಭಾರಿ ವಾಗ್ವಾದ, ಹೊಯ್‌ಕೈ ನಡೆಯಿತು. ಬಳಿಕ ಅಝೀಮ್‌ ಅವರನ್ನು ಸಮಾಧಾನಪಡಿಸಿ ವಾಹನದಲ್ಲಿಕುಳ್ಳಿರಿಸಿ ಕಳುಹಿಸಲಾಯಿತು.

ಲೋಬೊಗೂ ಘೇರಾವ್‌: ಇದೇ ಸಂದರ್ಭ ಬೆಂಗರೆ ವಾರ್ಡ್‌ನಿಂದಲೂ ಆಕಾಂಕ್ಷಿಯ ಪರ ಬೆಂಬಲಿಗರೂ ಹೋಟೆಲ್‌ ಆವರಣದಲ್ಲಿಕಾದು ಕುಳಿತಿದ್ದರು. ಊಟದ ಬಳಿಕ ಮಾಜಿ ಶಾಸಕ ಜೆ.ಆರ್‌.ಲೋಬೊ ಹೊರಗೆ ಬಂದಾಗ ಅವರನ್ನು ಸುತ್ತುವರಿದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಕಾರಿಗೂ ಅಡ್ಡನಿಂತು ಜೋರಾಗಿಯೇ ತರಾಟೆಗೆ ತೆಗೆದುಕೊಂಡರು. ಈ ಸಂದರ್ಭ ಮತ್ತೆ ಹಲ್ಲೆಪ್ರಕರಣ ನಡೆಯುವ ಲಕ್ಷಣಗಳು ಗೋಚರಿಸಿತು. ಈ ಸಂದರ್ಭ ಒಂದು ಮಾತನ್ನೂ ಆಡದ ಲೋಬೊ ಕಾರಿನಲ್ಲಿನಿರ್ಗಮಿಸಿದಾಗ ನಿಮ್ಮ ಅಭ್ಯರ್ಥಿ ಹೇಗೆ ಗೆಲ್ಲುತ್ತಾರೆ ನೋಡೋಣ ಎಂದು ಸವಾಲು ಹಾಕಿದ ಘಟನೆಯೂ ನಡೆಯಿತು.

ಬೆಂಗ್ರೆಯಲ್ಲಿಬಿಲಾಲ್‌ಗೆ ಟಿಕೆಟ್‌ ಕೊಡಬೇಕು ಎಂಬದು ಕಾರ್ಯಕರ್ತರ ಆಗ್ರಹ ಆಗಿತ್ತು. ಆದÃ ಆಸಿಫ್‌ ಎಂಬವರಿಗೆ ಟಿಕೆಟ್‌ ನೀಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ