ಆ್ಯಪ್ನಗರ

'ಪಿಎಂ ಪರಿಹಾರ ನಿಧಿಗೆ ಕೋಟ್ಯಂತರ ಹಣ ಬಂದಿದೆ, ಲೆಕ್ಕವನ್ನು ಜನರ ಮುಂದಿಡಬೇಕು' : ದ.ಕ ಜಿಲ್ಲಾ ಕಾಂಗ್ರೆಸ್

ಸಾರ್ವಜನಿಕರು ಪರಿಹಾರ ನಿಧಿಗೆ ಕೋಟ್ಯಂತರ ಹಣ ನೀಡಿದ್ದು, ಅದರ ಖರ್ಚು- ವೆಚ್ಚಗಳನ್ನು ಸಾರ್ವಜನಿಕರ ಮುಂದೆ ಲೆಕ್ಕ ನೀಡಬೇಕು. ಪ್ರಧಾನಿ ಪರಿಹಾರ ನಿಧಿ ಬಗ್ಗೆ ಸಾರ್ವಜನಿಕರ ಮಾಹಿತಿಯಿಂದ ಬಚ್ಚಿಡುವ ವ್ಯವಸ್ಥೆ ಮಾಡುತ್ತಿದೆ. ಮುಖ್ಯಮಂತ್ರಿ ಪರಿಹಾರದಲ್ಲೂಇದೇ ರೀತಿ ದುರ್ಬಳಕೆ ಮಾಡಲಾಗುತ್ತಿದೆ ಎಂದರು.

Vijaya Karnataka Web 19 Aug 2020, 6:05 pm
ಮಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಪ್ರಧಾನಿ ಪರಿಹಾರ ನಿಧಿಗೆ ಕೋಟ್ಯಂತರ ರೂ. ಸಂಗ್ರಹವಾಗಿದ್ದು, ಅದನ್ನು ಚುನಾವಣಾ ವೆಚ್ಚಕ್ಕೆ ವಿನಿಯೋಗ ಮಾಡಲಾಗುತ್ತಿದೆ. ಈ ಬಗ್ಗೆ ಆರ್‌ಟಿಇ ಮೂಲಕ ಮಾಹಿತಿ ಕೇಳಿದರೆ ಅರ್ಜಿ ತಿರಸ್ಕಾರ ಮಾಡಿ ಪ್ರಧಾನಿ ಕಾರ್ಯಾಲಯ ಕರ್ತವ್ಯಲೋಪ ಮಾಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ, ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌ ಆರೋಪಿಸಿದರು.
Vijaya Karnataka Web DK Congress


ಕಾಸರಗೋಡು-ಮಂಗಳೂರು ಗಡಿ ರಸ್ತೆ ತೆರವು ಸದ್ಯಕ್ಕಿಲ್ಲ : ಸಚಿವ ಚಂದ್ರಶೇಖರನ್

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಎಂ ಪರಿಹಾರ ನಿಧಿಯನ್ನು ಬಳಕೆ ಮಾಡಿರುವ ಬಗ್ಗೆ ಆರ್‌ಟಿಐ ಮಾಹಿತಿ ಕೇಳಿದರೆ ಪ್ರಧಾನಿ ಕಾರ್ಯಾಲಯ ಅರ್ಜಿ ತಿರಸ್ಕಾರ ಮಾಡಿದೆ. ಸಾರ್ವಜನಿಕರು ಪರಿಹಾರ ನಿಧಿಗೆ ಕೋಟ್ಯಂತರ ಹಣ ನೀಡಿದ್ದು, ಅದರ ಖರ್ಚು- ವೆಚ್ಚಗಳನ್ನು ಸಾರ್ವಜನಿಕರ ಮುಂದೆ ಲೆಕ್ಕ ನೀಡಬೇಕು. ಪ್ರಧಾನಿ ಪರಿಹಾರ ನಿಧಿ ಬಗ್ಗೆ ಸಾರ್ವಜನಿಕರ ಮಾಹಿತಿಯಿಂದ ಬಚ್ಚಿಡುವ ವ್ಯವಸ್ಥೆ ಮಾಡುತ್ತಿದೆ. ಮುಖ್ಯಮಂತ್ರಿ ಪರಿಹಾರದಲ್ಲೂಇದೇ ರೀತಿ ದುರ್ಬಳಕೆ ಮಾಡಲಾಗುತ್ತಿದೆ ಎಂದರು.

'ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದಕ್ಕೆ ಸುಣ್ಣ' ನೀತಿ ಅನುಸರಿಸ್ತಿದ್ದಾರಾ ಮಂಗಳೂರು ವಿವಿ ಕುಲಪತಿ..!?

ಬೆಂಗಳೂರು ಗಲಭೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಗಲಭೆಯಲ್ಲಿ ಕಾಂಗ್ರೆಸ್‌ ಶಾಸಕರ ಮನೆಯನ್ನು ಸುಟ್ಟು ಹಾಕಲಾಯಿತು. ಈ ಹಿಂದೆ ತನ್ವೀರ್‌ ಸೇಠ್‌ ಕೊಲೆಗೆ ಯತ್ನಿಸಲಾಗಿತ್ತು. ರಾಜ್ಯ ಸರಕಾರ ಏನು ಮಾಡುತ್ತಿದೆ. ಗಲಭೆಗೆ ಮುನ್ನ ನವೀನ್‌ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದರ ಗಂಭೀರತೆಯನ್ನು ಅರಿಯುವಲ್ಲಿ ಇಂಟೆಲಿಜೆನ್ಸ್‌ ವಿಫಲವಾಗಿದೆ. ಇದಕ್ಕೆ ಸರಕಾರದ ಬೇಜವಾಬ್ದಾರಿ ಕಾರಣ, ಬೆಂಗಳೂರು ಗಲಭೆಯನ್ನು ನಿಯಂತ್ರಿಸಲು ಆಡಳಿತ ವಿಫಲವಾಗಿದೆ ಎಂದು ಆರೋಪಿಸಿದರು.

ಕಾಸರಗೋಡು-ದಕ್ಷಿಣ ಕನ್ನಡ ಜಿಲ್ಲೆಗಳ ನಡುವೆ ಸಂಚಾರಕ್ಕೆ ಮುಕ್ತ ಅವಕಾಶ : ಜಿಲ್ಲಾಧಿಕಾರಿ

ಇನ್ನು ಕೇಂದ್ರ ಸರಕಾರ 20ಲಕ್ಷ ಕೋಟಿ ಪ್ಯಾಕೇಜ್‌ ಕೋವಿಡ್‌ ಪರಿಹಾರ ಘೋಷಣೆ ಮಾಡಿದ್ದು ಅದರಲ್ಲಿ 1ಲಕ್ಷ ಕೋಟಿ ಕೃಷಿಗೆ ಮೀಸಲಿಟ್ಟಿದೆ. ಆ ಪ್ಯಾಕೇಜ್‌ ಹಣ ಎಲ್ಲಿಗೆ ಹೋಯ್ತು. ಉತ್ತರ ಕರ್ನಾಟಕದಲ್ಲಿ ರಸಗೊಬ್ಬರ ಕೊರತೆಯಾಗಿ ರೈತರು ಸಾಲು ನಿಲ್ಲುತ್ತಿದ್ದಾರೆ. ಸರಿಯಾಗಿ ರಸಗೊಬ್ಬರ ಪೂರೈಕೆ ಮಾಡುವಲ್ಲೂ ಆಡಳಿತ ವಿಫಲವಾಗಿದ್ದು ಕೃಷಿಕರು ಕಂಗಾಲಾಗಿದ್ದಾರೆ ಎಂದರು.

ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ ಮಾತನಾಡಿ, ರಾಜ್ಯ ನಗರಾಭಿವೃದ್ಧಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಇದನ್ನು ಬೆಂಬಲಿಸದ ಹಿರಿಯ ಅಧಿಕಾರಿಗಳನ್ನೇ ವರ್ಗಾವಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಕರ್ನಾಟಕದ ನಗರಾಭಿವೃದ್ಧಿ ಸಚಿವರಿಂದ ಹಿರಿಯ ಅಧಿಕಾರಿಗಳಿಗೆ ದೌರ್ಜನ್ಯ, ಮಾನಸಿಕ ಕಿರುಕುಳ ನೀಡಲಾಗುತ್ತಿದೆ. ಈ ಕುರಿತಂತೆ ಸತ್ಯಾಂಶವನ್ನು ತಿಳಿಯಲು ಸಚಿವರ ಆಪ್ತರ ಒಂದು ತಿಂಗಳ ಕಾಲ್‌ ಡೀಟೇಲ್ಸ್‌ ಮಾಹಿತಿಯನ್ನು ಜನಸಾಮಾನ್ಯರಿಗೆ ಒದಗಿಸಬೇಕು. ಗುತ್ತಿಗೆದಾರರು, ಬಿಲ್ಡರ್‌ಗಳಿಂದ ಹಣ ವಸೂಲು ಮಾಡಲು ಹಿರಿಯ ಅಧಿಕಾರಿಗಳನ್ನು ಬಳಸಲಾಗುತ್ತಿದ್ದು, ಅದಕ್ಕಾಗಿ ಅವರು ಸ್ವಯಂ ಪ್ರೇರಿತವಾಗಿ ವರ್ಗಾವಣೆಗೆ ಮುಂದಾಗುತ್ತಿದ್ದಾರೆ ಎಂಬ ಮಾಹಿತಿ ಇದೆ. ಈ ಬಗ್ಗೆ ಸತ್ಯಾಂಶವನ್ನು ತಿಳಿಸಬೇಕು. ನಗರಾಭಿವೃದ್ಧಿ ಸಚಿವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ