ಆ್ಯಪ್ನಗರ

ಜೆಟ್‌ ಏರ್‌ವೇಸ್‌ ಮಂಗಳೂರು- ದುಬೈ ನೇರ ವಿಮಾನಯಾನಕ್ಕೆ ಕತ್ತರಿ

ಜೆಟ್‌ ಏರ್‌ವೇಸ್‌ ಸಂಸ್ಥೆ ಮಂಗಳೂರಿನಿಂದ ದುಬೈ ಹಾಗೂ ಅಬುದಾಬಿಗೆ ನೀಡುತ್ತಿದ್ದ ಒಟ್ಟು ನಾಲ್ಕು ನೇರ ವಿಮಾನಯಾನ ಸೇವೆಯನ್ನು ರದ್ದುಪಡಿಸಿದೆ. ಇದರಿಂದಾಗಿ ಈ ಮಾರ್ಗದಲ್ಲಿ ಪ್ರಯಾಣಿಕರ ಒತ್ತಡ ಕಂಡುಬರಲಿದ್ದು, ಟಿಕೆಟ್‌ ದರ ವಿಪರೀತ ಹೆಚ್ಚಳವಾಗುವ ಸಾಧ್ಯತೆ ಇದೆ.

Vijaya Karnataka 7 Dec 2018, 8:08 pm
ಮಂಗಳೂರು: ಜೆಟ್‌ ಏರ್‌ವೇಸ್‌ ಸಂಸ್ಥೆ ಮಂಗಳೂರಿನಿಂದ ದುಬೈ ಹಾಗೂ ಅಬುದಾಬಿಗೆ ನೀಡುತ್ತಿದ್ದ ಒಟ್ಟು ನಾಲ್ಕು ನೇರ ವಿಮಾನಯಾನ ಸೇವೆಯನ್ನು ರದ್ದುಪಡಿಸಿದೆ. ಇದರಿಂದಾಗಿ ಈ ಮಾರ್ಗದಲ್ಲಿ ಪ್ರಯಾಣಿಕರ ಒತ್ತಡ ಕಂಡುಬರಲಿದ್ದು, ಟಿಕೆಟ್‌ ದರ ವಿಪರೀತ ಹೆಚ್ಚಳವಾಗುವ ಸಾಧ್ಯತೆ ಇದೆ.
Vijaya Karnataka Web mangalore dubai flight stop
ಜೆಟ್‌ ಏರ್‌ವೇಸ್‌ ಮಂಗಳೂರು- ದುಬೈ ನೇರ ವಿಮಾನಯಾನಕ್ಕೆ ಕತ್ತರಿ


ಮಂಗಳೂರು- ದುಬೈ ಮಾರ್ಗದಲ್ಲಿ ಜೆಟ್‌ ಏರ್‌ವೇಸ್‌ಗೆ ಮುಂಚಿತವಾಗಿ ಟಿಕೆಟ್‌ ಬುಕ್‌ ಮಾಡಿದವರಿಗೆ ನವೆಂಬರ್‌ ಮಧ್ಯಭಾಗದಲ್ಲೇ ಮಾಹಿತಿ ನೀಡಿ ಟಿಕೆಟ್‌ ರದ್ದುಪಡಿಸಿ ಅವರೆಲ್ಲರಿಗೆ ಮುಂಬಯಿ ಮಾರ್ಗವಾಗಿ ಬದಲೀ ವ್ಯವಸ್ಥೆ ಕಲ್ಪಿಸಿತ್ತು. ಇದೀಗ ಶಾಶ್ವತವಾಗಿ ಈ ಮಾರ್ಗದಲ್ಲಿ ಟಿಕೆಟ್‌ ಬುಕ್‌ನ್ನು ರದ್ದುಪಡಿಸಿದೆ.

ಡಿಸೆಂಬರ್‌ ಅಂತ್ಯಕ್ಕೆ ದುಬೈ ಸೇರಿದಂತೆ ಗಲ್ಫ್‌ಗೆ ಪ್ರಯಾಣಿಕರ ಸಂಖ್ಯೆ ವಿಪರೀತವಾಗಿರುವ ನಡುವೆಯೇ ಜೆಟ್‌ ಏರ್‌ವೇಸ್‌ ಸಂಸ್ಥೆಯ ಈ ನಿರ್ಧಾರ ವ್ಯಾಪಕ ಟೀಕೆಗೆ ಕಾರಣವಾಗಿದೆ. ಕ್ರಿಸ್‌ಮಸ್‌ ಹಾಗೂ ಹೊಸ ವರ್ಷಾಚರಣೆ ಸಂದರ್ಭ ಸಹಜವಾಗಿಯೇ ದುಬೈಗೆ ಹಲವು ಪ್ರವಾಸಿಗರು ತೆರಳುತ್ತಾರೆ. ಈ ವಿಮಾನಯಾನ ಸೇವೆ ರದ್ದಾದರೆ ಉಳಿದ ವಿಮಾನಗಳಲ್ಲಿ ಪ್ರಯಾಣಿಕರ ಸಂಖ್ಯೆ ವಿಪರೀತ ಹೆಚ್ಚಳವಾಗಲಿದೆ. ಇದು ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಲಿದೆ.

ಒಂದು ಕಾಲದಲ್ಲಿ ಜೆಟ್‌ ಏರ್‌ವೇಸ್‌ಗೆ ಕೊಲ್ಲಿ ರಾಷ್ಟ್ರ ಪ್ರಮುಖ ಮಾರುಕಟ್ಟೆಯಾಗಿತ್ತು. ಈಗ ಕುಸಿಯುತ್ತಿರುವ ಬೇಡಿಕೆ ಹಾಗೂ ಜಾಗತಿಕ ಸ್ಪರ್ಧೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಸ್ಥೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಈ ಕಾರಣದಿಂದಲೇ ಈ ಸೇವೆಗೆ ಕತ್ತರಿಹಾಕಲಾಗಿದೆ ಎಂದು ತಿಳಿದು ಬಂದಿದೆ.

ಮಂಗಳೂರಿನಿಂದ ದುಬೈ ಹಾಗೂ ಅಬುದಾಬಿಗೆ ತೆರಳುವ ಎರಡು ವಿಮಾನ ಹಾಗೂ ದುಬೈ ಮತ್ತು ಅಬುದಾಬಿಯಿಂದ ಮಂಗಳೂರಿಗೆ ಬರುವ ಎರಡು ವಿಮಾನ ಸೇರಿ ಒಟ್ಟು ನಾಲ್ಕು ಸೇವೆಗಳು ರದ್ದಾಗಿವೆ. ಇದರ ಜತೆಯಲ್ಲೇ ಕೊಚ್ಚಿನ್‌, ಕಲ್ಲಿಕೋಟೆ ಹಾಗೂ ತಿರುವನಂತಪುರದಿಂದ ಕೊಲ್ಲಿ ರಾಷ್ಟ್ರಗಳಿಗೆ ಹೋಗುವ ವಿಮಾನಗಳ ಸೇವೆಯನ್ನೂ ಜೆಟ್‌ ಏರ್‌ವೇಸ್‌ ಸ್ಥಗಿತಗೊಳಿಸಿದೆ.

ಜೆಟ್‌ ಏರ್‌ವೇಸ್‌ ಇತ್ತೀಚಿನ ದಿನಗಳಲ್ಲಿ ಆರ್ಥಿಕ ಸಂಖಷ್ಟಕ್ಕೆ ಒಳಗಾಗಿದ್ದು, ಈ ಕಾರಣಗಳಿಗಾಗಿ ಹಲವು ಕಠಿಣ ನಿಲುವುಗಳನ್ನು ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ ಇದರ ನೇರ ಪರಿಣಾಮವನ್ನು ಪ್ರಯಾಣಿಕರು ಅನುಭವಿಸಬೇಕಾಗುತ್ತಿದೆ.

ಫೋಟೋ 6ಎಂ- ಜೆಟ್‌ ಏರ್‌ವೇಸ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ