ಆ್ಯಪ್ನಗರ

ರಾಷ್ಟ್ರೀಯ ಹೆದ್ದಾರಿ ದುರಸ್ತಿ ಕಾಮಗಾರಿ ಶಾಸಕರಿಂದ ವೀಕ್ಷಣೆ

ರಾಷ್ಟ್ರೀಯ ಹೆದ್ದಾರಿ 66ರ ಕುಳಾಯಿ ಬಳಿ ಹೆದ್ದಾರಿ ಜಂಕ್ಷನ್‌ಗೆ ಕಾಂಕ್ರಿಟೀಕರಣ ಕಾಮ ಗಾರಿ ಆರಂಭವಾಗಿದ್ದು, ಶಾಸಕ ಡಾ. ಭರತ್‌ ಶೆಟ್ಟಿ ಬುಧವಾರ ಪರಿಶೀಲನೆ ನಡೆಸಿದರು.

Vijaya Karnataka 10 Oct 2019, 5:00 am
ಸುರತ್ಕಲ್‌: ರಾಷ್ಟ್ರೀಯ ಹೆದ್ದಾರಿ 66ರ ಕುಳಾಯಿ ಬಳಿ ಹೆದ್ದಾರಿ ಜಂಕ್ಷನ್‌ಗೆ ಕಾಂಕ್ರಿಟೀಕರಣ ಕಾಮ ಗಾರಿ ಆರಂಭವಾಗಿದ್ದು, ಶಾಸಕ ಡಾ. ಭರತ್‌ ಶೆಟ್ಟಿ ಬುಧವಾರ ಪರಿಶೀಲನೆ ನಡೆಸಿದರು.
Vijaya Karnataka Web mangalore north mla viewed national highway repair work
ರಾಷ್ಟ್ರೀಯ ಹೆದ್ದಾರಿ ದುರಸ್ತಿ ಕಾಮಗಾರಿ ಶಾಸಕರಿಂದ ವೀಕ್ಷಣೆ

ಕುಳಾಯಿ ಜಂಕ್ಷನ್‌ನಲ್ಲಿಒಳಚರಂಡಿ ಯನ್ನು ಹೆದ್ದಾರಿ ಇಲಾಖೆ ಮಾಡದ ಕಾರಣ ಕೃತಕ ನೆರೆಯಿಂದ ರಸ್ತೆ ಡಾಮರು ಎದ್ದು ಹೋಗಿ ವಾಹನ ಸಂಚಾರಕ್ಕೆ ಅಡ ಚಣೆ ಆಗುತ್ತಿತ್ತು.ಇದನ್ನು ಮನಗಂಡು ಇತ್ತೀಚೆಗೆ ಸಂಸದ ನಳಿನ್‌ಕುಮಾರ್‌ ಕಟೀಲ್‌ ಅಧ್ಯ ಕ್ಷತೆಯಲ್ಲಿ ಹೆದ್ದಾರಿ ಪ್ರಾಧಿಕಾರದ ಸಭೆಯಲ್ಲಿಶಾಸಕ ಡಾ.ಭರತ್‌ ಶೆಟ್ಟಿ ಹೆದ್ದಾರಿ 66ರ ಪ್ರಮುಖ ಜಂಕ್ಷನ್‌ಗಳಾದ ಕುಳಾಯಿ, ಬೈಕಂಪಾಡಿ ಕೈಗಾರಿಕಾ ಪ್ರದೇಶದ ತಿರುವು ರಸ್ತೆ, ಪಣಂಬೂರು ಬೀಚ್‌ ತಿರುವು ಜಂಕ್ಷನ್‌, ಕೂಳೂರು ಬ್ರಿಡ್ಜ್‌ ಅಯ್ಯಪ್ಪ ಗುಡಿ ಬಳಿ ಕಾಂಕ್ರಿಟೀಕರಣಕ್ಕೆ ಒತ್ತಾಯಿಸಿದ್ದರು. ಕುಳಾಯಿ ಬಳಿ ಕಾಮಗಾರಿ ವೀಕ್ಷಣೆ ನಡೆಸಿದ ಶಾಸಕರು ಹೆದ್ದಾರಿ ನಿರ್ವಹಣೆ ದಾರರಿಗೆ ಗುಣಮಟ್ಟದ ಕಾಮಗಾರಿ ನಡೆಸಿ ಸಮರ್ಪಕ ಒಳಚರಂಡಿ ಮಾಡಿಕೊಡು ವಂತೆ ಸೂಚಿಸಿದರು.
ಶಾಸಕರ ವಿಶೇಷ ಅನುದಾನದಲ್ಲಿಹೊನ್ನ ಕಟ್ಟೆಯಿಂದ ಕಾನಕ್ಕೆ ಹೋಗುವ ರಸ್ತೆಯ ಇಕ್ಕೆಲ ಗಳಲ್ಲಿಕಾಂಕ್ರೀಟ್‌ ರಸ್ತೆ ಅಗಲೀಕರಣ ಹಾಗೂ ಚರಂಡಿ ಮತ್ತಿತರ ಕಾಮಗಾರಿ ಕೈಗೊಳ್ಳುವ ಬಗ್ಗೆ ಸ್ಥಳೀಯರಲ್ಲಿಚರ್ಚಿಸಿ ದರು. ಮಾಜಿ ಮೇಯರ್‌ ಗಣೇಶ್‌ ಹೊಸಬೆಟ್ಟು, ಶಾಂತಾ ರವೀಂದ್ರ, ವಿಠಲ ಸಾಲಿಯಾನ್‌, ರಮೇಶ್‌ ಅಳಪೆ, ವರುಣ್‌ ಚೌಟ, ಜಯರಾಮ ಆಚಾರ್ಯ, ಕಿರಣ್‌ ಕುಮಾರ್‌ ಕೋಡಿಕಲ್‌ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ