ಆ್ಯಪ್ನಗರ

ಮಂಗಳೂರು ಪೊಲೀಸ್‌ ಗೋಲಿಬಾರ್‌ ಪ್ರಕರಣ, ಫೆ.19ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯ

ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಮಂಗಳೂರು ನಗರದಲ್ಲಿ ಡಿ.19ರಂದು ನಡೆದ ಪ್ರತಿಭಟನೆ ಮತ್ತು ಪೊಲೀಸ್‌ ಗೋಲಿಬಾರ್‌ ಕುರಿತಂತೆ ಮುಂದಿನ ವಿಚಾಣೆಯನ್ನು ಫೆ.19ಕ್ಕೆ ಮುಂದೂಡಲಾಗಿದೆ.

Vijaya Karnataka Web 14 Feb 2020, 1:27 pm
ಮಂಗಳೂರು: ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಮಂಗಳೂರು ನಗರದಲ್ಲಿ ಡಿ.19ರಂದು ನಡೆದ ಪ್ರತಿಭಟನೆ ಮತ್ತು ಪೊಲೀಸ್‌ ಗೋಲಿಬಾರ್‌ ಕುರಿತಂತೆ ಮ್ಯಾಜಿಸ್ಟೀರಿಯಲ್‌ ತನಿಖೆ ನಡೆಯುತ್ತಿದ್ದು, ಗುರುವಾರ ಮಂಗಳೂರು ಸಹಾಯಕ ಅಯುಕ್ತರ ಕೋರ್ಟ್‌ ಹಾಲ್‌ನಲ್ಲಿ ಸಾಕ್ಷ್ಯ ವಿಚಾರಣೆಯಾಯಿತು. ಮುಂದಿನ ವಿಚಾರಣೆಯನ್ನು ಫೆ.19ಕ್ಕೆ ಮುಂದೂಡಲಾಗಿದೆ.
Vijaya Karnataka Web Mangaluru


ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌ ಅವರು ಮ್ಯಾಜಿಸ್ಟೀರಿಯಲ್‌ ತನಿಖಾಧಿಕಾರಿಯಾಗಿದ್ದು, ಗುರುವಾರ ಸಾರ್ವಜನಿಕರಿಂದ ಸಾಕ್ಷಿ ಹೇಳಿಕೆಗಳನ್ನು ಹಾಗೂ ಪೊಲೀಸರಿಂದ ವಿಡಿಯೋ ಸಾಕ್ಷ್ಯ ತುಣುಕುಗಳನ್ನು ಸ್ವೀಕರಿಸಿ ದಾಖಲಿಸಿಕೊಂಡಿದ್ದಾರೆ. ಪೊಲೀಸರ ಪರವಾಗಿ ಉತ್ತರ ಉಪ ವಿಭಾಗದ ಎಸಿಪಿ ಬೆಳ್ಳಿಯಪ್ಪ ಘಟನೆಗೆ ಸಂಬಂಧಿಸಿ ವಿಡಿಯೋ ಸಾಕ್ಷ್ಯ ಹಾಜರುಪಡಿಸಿದರು.

ಫೆ.6ರಂದು 8 ಮಂದಿ ಸಾಕ್ಷಿ ಹೇಳಿಕೆ ನೀಡಲು ಬಂದಿದ್ದು, ಅವರನ್ನು ಫೆ.13ರಂದು ಹೇಳಿಕೆ ನೀಡಲು ಅವಕಾಶ ನೀಡಲಾಗಿತ್ತು. ಅದರಂತೆ ಇಬ್ಬರು ಮಾತ್ರ ಸಾಕ್ಷಿ ಹೇಳಿಕೆ ನೀಡಿದ್ದು, ಇನ್ನೊಬ್ಬರು ಮೊಬೈಲ್‌ ರೆಕಾರ್ಡಿಂಗ್‌ ಹಾಜರುಪಡಿಸಿದ್ದಾರೆ.

ಮಂಗಳೂರು: ವ್ಯಾಪಾರಕ್ಕೂ ತಟ್ಟಿದ ಪೌರತ್ವ ಕಿಚ್ಚು, ಸಾಮಾಜಿಕ ಜಾಲತಾಣದಲ್ಲಿ ‘ಬಹಿಷ್ಕಾರದ’ ಕಿಡಿ !

203 ಮಂದಿ ಸಾಕ್ಷ್ಯ ವಿಚಾರಣೆ: ಮ್ಯಾಜಿಸ್ಟೀರಿಯಲ್‌ ನ್ಯಾಯಾಲಯಕ್ಕೆ ಈ ಮೊದಲು 201 ಮಂದಿ ಸಾಕ್ಷಿ ನುಡಿದು ಸಾಕ್ಷ್ಯಗಳನ್ನು ಹಾಜರುಪಡಿಸಿದ್ದು, ಗುರುವಾರ ಇಬ್ಬರು ಸಾಕ್ಷ್ಯ ನುಡಿದಿದ್ದಾರೆ. ಇದರೊಂದಿಗೆ ಈ ತನಕ ಒಟ್ಟು 203 ಮಂದಿ ಸಾಕ್ಷ್ಯ ಹೇಳಿದಂತಾಗಿದೆ. ಅಲ್ಲದೆ, ಈ ಮೊದಲೇ ಸಾಕ್ಷಿ ನೀಡಿದ್ದ ವ್ಯಕ್ತಿಯೊಬ್ಬ ಮೊಬೈಲ್‌ ರೆಕಾರ್ಡಿಂಗ್‌ನ್ನು ಹಾಜರುಪಡಿಸಿದ್ದಾರೆ ಎಂದು ತಿಳಿಸಿದರು.

‘ದೇಶ ವಿಭಜನೆ ಮಾಡಿದ್ದು ಕಾಂಗ್ರೆಸ್’ ಮಂಗಳೂರಿನಲ್ಲಿ ರಾಜನಾಥ್ ಸಿಂಗ್ ವಾಗ್ದಾಳಿ

ಸಾರ್ವಜನಿಕರಿಂದ 1 ವಿಡಿಯೊ
ಹೈಕೋರ್ಟ್‌ ಸೂಚನೆಯಂತೆ ವಿಡಿಯೊ ತುಣುಕು, ಸಿಸಿಟಿವಿ ಫೂಟೇಜ್‌ಗಳನ್ನು ಹಾಜರುಪಡಿಸಲು ಸಾರ್ವಜನಿಕರು, ಮಾಧ್ಯಮ, ಪೊಲೀಸರಿಗೆ ಆಹ್ವಾನಿಸಲಾಗಿತ್ತು. ಈ ಹಿನ್ನೆಲೆಯಲ್ಲಿವ್ಯಕ್ತಿಯೊಬ್ಬರು ಮಾತ್ರ ಮೊಬೈಲ್‌ ರೆಕಾರ್ಡಿಂಗ್‌ನ ತುಣುಕನ್ನು ಹಾಜರುಪಡಿಸಿದ್ದಾರೆಂದು ತಿಳಿದುಬಂದಿದೆ.

50 ವಿಡಿಯೊ ತುಣುಕು: ಘಟನಾವಳಿಯ ವಿಡಿಯೊಗಳನ್ನು ಹಾಜರುಪಡಿಸಲು ಮಂಗಳೂರು ಪೊಲೀಸ್‌ ಆಯುಕ್ತರಿಗೆ ಸೂಚಿಸಲಾಗಿತ್ತು. ಎಸಿಪಿ ಬೆಳ್ಳಿಯಪ್ಪ ಅವರು 50 ವಿಡಿಯೊ ತುಣುಕುಗಳ ಪೆನ್‌ಡ್ರೈವ್‌ ಮತ್ತು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಸಿಸಿ ಟಿವಿ ಫೂಟೇಜ್‌ಗಳ 23 ಸಿಡಿಆರ್‌ಗಳಿಗೆ ಸಂಬಂಧಿಸಿದ ಸ್ವೀಕೃತಿ ಸಲ್ಲಿಸಿದ್ದಾರೆ ಎಂದರು.

ಮಂಗಳೂರು ಗೋಲಿಬಾರ್: 'ಜನತಾ ನ್ಯಾಯಾಲಯ' ಸಮಿತಿ ವರದಿಯಲ್ಲೇನಿದೆ ?

ಪೂರ್ಣ ವರದಿಗೆ 3 ತಿಂಗಳ ಅವಕಾಶ
ಫೆ.24ರಂದು ಹೈಕೋರ್ಟ್‌ನಲ್ಲಿವಿಚಾರಣೆ ನಡೆಯಲಿದ್ದು, ಈ ಸಂದರ್ಭ ಇದುವರೆಗಿನ ವರದಿ ಸಲ್ಲಿಸಲಾಗುವುದು. ಪೂರ್ಣ ವರದಿ ಸಲ್ಲಿಸಲು 3 ತಿಂಗಳ ಕಾಲಾವಕಾಶವಿದ್ದು, ಪೊಲೀಸ್‌ ವಿಚಾರಣೆ ನಡೆಸಿಲ್ಲ. ಅದಿನ್ನೂ ಬಾಕಿ ಇದೆ. ಘಟನೆ ಕುರಿತಂತೆ ಇನ್ನೂ ವಿಸ್ತೃತವಾದ ವಿಚಾರಣೆ ನಡೆಯುತ್ತಿದ್ದು, ಎಲ್ಲಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ವರದಿ ಸಲ್ಲಿಸಲಾಗುವುದು ಎಂದು ತನಿಖಾಧಿಕಾರಿ ಜಗದೀಶ್‌ ವಿವರಿಸಿದರು.

ಫೆ.19ಕ್ಕೆ ವಿಚಾರಣೆ: ಕರ್ನಾಟಕ ಬಂದ್‌ ನೆಪ ಹಾಗೂ ಸಾರ್ವಜನಿಕರಿಗೆ ಇನ್ನೊಂದು ಅವಕಾಶ ನೀಡುವ ನಿಟ್ಟಿನಲ್ಲಿ ಫೆ.19ಕ್ಕೆ ವಿಚಾರಣೆ ಮುಂದೂಡಲಾಗಿದೆ. ಬೆಳಗ್ಗೆ 11ರಿಂದ 1 ಗಂಟೆವರೆಗೆ ವಿಚಾರಣೆ ನಡೆಯಲಿದೆ. ಸ್ವತಃ ಅವರೇ ಮಾಡಿದ ವಿಡಿಯೊ ತುಣುಕುಗಳನ್ನು ಅಥವಾ ಮನೆಯಲ್ಲಿನ ಸಿಸಿಟಿವಿಯ ಸಿಡಿಆರ್‌ಗಳನ್ನು ಸ್ವೀಕರಿಸಲಾಗುವುದು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ