ಆ್ಯಪ್ನಗರ

ಮಂಗಳೂರು ಗೋಲಿಬಾರ್‌ನಲ್ಲಿ ಸತ್ತವರ ಕುಟುಂಬಕ್ಕೆ ಪರಿಹಾರವೇಕೆ..? ಸರ್ಕಾರಕ್ಕೆ 'ಹಿಂಜಾವೇ' ಸವಾಲ್..!

ಹಿಂಸಾತ್ಮಕ ಪ್ರತಿಭಟನೆ ನಡೆಸಿ ಪೊಲೀಸ್‌ ಠಾಣೆಗೆ ದಾಳಿ ಮಾಡಲು ಬಂದವರಿಗೂ ಪರಿಹಾರ ನೀಡುವ ಮೂಲಕ ಗಲಭೆಕೋರರಿಗೆ ಸರಕಾರ ಪ್ರೋತ್ಸಾಹ ನೀಡುತ್ತಿದೆಯೇ? ಇದು ಕರ್ತವ್ಯ ನಿರತ ಪೊಲೀಸರ ಆತ್ಮಸ್ಥೆತ್ರೖರ್ಯ ಕುಂದಿಸಿದಂತಾಗುವುದಿಲ್ಲವೇ? - ರಾಧಾಕೃಷ್ಣ ಅಡ್ಯಂತಾಯ ಪ್ರಶ್ನೆ

Vijaya Karnataka Web 24 Dec 2019, 8:46 pm
ಪುತ್ತೂರು (ದಕ್ಷಿಣ ಕನ್ನಡ): ಮಂಗಳೂರಿನಲ್ಲಿ ನಡೆದ ಗೋಲಿಬಾರ್‌ನಲ್ಲಿ ಮೃತಪಟ್ಟ ಇಬ್ಬರು ಯುವಕರ ಕುಟುಂಬ ವರ್ಗಕ್ಕೆ ರಾಜ್ಯ ಸರಕಾರ ತಲಾ ಹತ್ತು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದು ಸರಿಯಲ್ಲ ಎಂದು ಹಿಂದೂ ಜಾಗರಣ ವೇದಿಕೆ ಆಕ್ಷೇಪ ಎತ್ತಿದೆ. ಅವರು ಅಪರಾಧಿಗಳಲ್ಲ ಎಂದು ಸಾಬೀತಾದರೆ ಮಾತ್ರ ಅವರ ಕುಟುಂಬಸ್ಥರಿಗೆ ಈ ಮೊತ್ತವನ್ನು ನೀಡಬೇಕು ಎಂದು ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದೆ.
Vijaya Karnataka Web mangalore police firing new


ನಿಷೇಧಾಜ್ಞೆ ವಿಧಿಸಿದ ಸಂದರ್ಭದಲ್ಲಿ ಯಾರೂ ಕೂಡ ಪ್ರತಿಭಟನೆ ಮಾಡುವಂತಿಲ್ಲ. ಆದರೂ ಪ್ರತಿಭಟನೆ ಹೆಸರಿನಲ್ಲಿ ಕಲ್ಲುತೂರಾಟ ಮಾಡಲಾಗಿದೆ. ಇಂಥ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ರಕ್ಷಣೆ ದೃಷ್ಟಿಯಿಂದ ಪೊಲೀಸರು ಗೋಲಿಬಾರ್‌ ನಡೆಸಿದ್ದಾರೆ. ಆಗ ಇಬ್ಬರು ಮೃತಪಟ್ಟಿದ್ದಾರೆ ಎಂದು ಹಿಂಜಾವೇ ಪ್ರಾಂತ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ ವಾದಿಸಿದರು.

ಕಾನೂನು ಕೈಗೆತ್ತಿಕೊಂಡವರನ್ನು ಅಮಾಯಕರು ಎಂದು ಬಿಂಬಿಸುವ ಪ್ರಯತ್ನ ನಡೆದಿದೆ ಎಂದು ಕಿಡಿಕಾರಿದ ರಾಧಾಕೃಷ್ಣ, ರಾಜ್ಯ ಸರಕಾರ ಗೋಲಿಬಾರ್‌ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ಮತ್ತು ಸಿಐಡಿ ತನಿಖೆಗೆ ಆದೇಶ ನೀಡಿದೆ. ಒಂದು ವೇಳೆ ಗೋಲಿಬಾರ್‌ನಲ್ಲಿ ಮೃತಪಟ್ಟವರು ಅಮಾಯಕರು ಎಂದು ಸಾಬೀತಾದರೆ ಆಗ ಪರಿಹಾರ ನೀಡಲಿ. ಅಲ್ಲಿಯವರೆಗೆ ಸರಕಾರ ಪರಿಹಾರ ನೀಡಬಾರದು. ಹಾಗೇನಾದರೂ ಸರಕಾರ ಪರಿಹಾರ ನೀಡಿದರೆ ಅದು ತಪ್ಪು ಸಂದೇಶ ನೀಡಿದಂತಾಗುತ್ತದೆ ಎಂದು ಪ್ರತಿಪಾದಿಸಿದರು.

'ಮಂಗಳೂರು ಕಮೀಷನರ್ ಸಸ್ಪೆಂಡ್ ಮಾಡಿ ತನಿಖೆ ನಡೆಸಿ': ಸರ್ಕಾರಕ್ಕೆ ದಿನೇಶ್‌ ಗುಂಡೂರಾವ್ ಆಗ್ರಹ

ಹಿಂಸಾತ್ಮಕ ಪ್ರತಿಭಟನೆ ನಡೆಸಿ ಪೊಲೀಸ್‌ ಠಾಣೆಗೆ ದಾಳಿ ಮಾಡಲು ಬಂದವರಿಗೂ ಪರಿಹಾರ ನೀಡುವ ಮೂಲಕ ಗಲಭೆಕೋರರಿಗೆ ಸರಕಾರ ಪ್ರೋತ್ಸಾಹ ನೀಡುತ್ತಿದೆಯೇ? ಇದು ಕರ್ತವ್ಯ ನಿರತ ಪೊಲೀಸರ ಆತ್ಮಸ್ಥೆತ್ರೖರ್ಯ ಕುಂದಿಸಿದಂತಾಗುವುದಿಲ್ಲವೇ ಎಂದು ರಾಧಾಕೃಷ್ಣ ಅಡ್ಯಂತಾಯ ಪ್ರಶ್ನಿಸಿದರು.

ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಕೂಡ ಮೃತರ ಕುಟುಂಬಕ್ಕೆ ಪರಿಹಾರ ನೀಡಿವೆ. ಮತ್ತೊಂದು ಕಡೆ ಕೇರಳದ ರಾಜಕಾರಣಿಗಳು ಬಂದು ಪರಿಹಾರ ನೀಡಿದ್ದಾರೆ. ಹಿಂದೆ ಮೂಲ್ಕಿ ಸುಖಾನಂದ ಶೆಟ್ಟಿ ಹತ್ಯೆಯಾದಾಗ ನಡೆದ ಮೆರವಣಿಗೆ ಸಂದರ್ಭ ಗೋಲಿಬಾರ್‌ಗೆ ಇಬ್ಬರು ಯುವಕರು ಬಲಿಯಾಗಿದ್ದರು. ಆಗ ಸರಕಾರ ಪರಿಹಾರ ನೀಡಿತ್ತೇ ಎಂದು ಪ್ರಶ್ನಿಸಿದರು.

'ಮಂಗಳೂರು ಹಿಂಸಾಚಾರದಲ್ಲಿ ಕೇರಳ ಯುವಕರ ಪಾತ್ರವಿಲ್ಲ': ಬಿಜೆಪಿ ಆರೋಪಕ್ಕೆ ಮಲೆಯಾಳಿ ಸಂಸದರ ಆಕ್ರೋಶ

ಪ್ರತಿಭಟನೆ ಹೆಸರಿನಲ್ಲಿ ದೊಂಬಿ ನಡೆಸುತ್ತಿರುವ, ಮನಸೋ ಇಚ್ಛೆ ಹೇಳಿಕೆ ನೀಡಿ ರಾಜ್ಯವನ್ನು ಪ್ರಕ್ಷುಬ್ದಗೊಳಿಸುತ್ತಿರುವವರನ್ನು ಹದ್ದುಬಸ್ತಿನಲ್ಲಿ ಇಡಬೇಕು. ಪೌರತ್ವ ತಿದ್ದುಪಡಿ ಕಾಯಿದೆ ಮತ್ತು ಪೌರತ್ವ ನೋಂದಣಿ ಬಗ್ಗೆ ಸುಳ್ಳು ಹೇಳಿ ಜನರಲ್ಲಿ ಮತಾಂಧತೆ ಕೆರಳಿಸಿ, ದೊಂಬಿ ಎಬ್ಬಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ರಾಜಕೀಯ ನಾಯಕರನ್ನು ಹದ್ದುಬಸ್ತಿನಲ್ಲಿಡಬೇಕು. ಪೊಲೀಸರ ಆತ್ಮಸ್ಥೈರ್ಯ ಕುಂದಿಸುವ ಹೇಳಿಕೆ ನೀಡುತ್ತಿರುವ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಯವರಿಗೆ ಕಡಿವಾಣ ಹಾಕಬೇಕು. ಬೆಂಕಿ ಹಚ್ಚುವ ಹೇಳಿಕೆ ನೀಡಿದ ಯು.ಟಿ. ಖಾದರ್‌ ಅವರನ್ನು ನಿಯಂತ್ರಿಸಬೇಕೆಂದು ಹಿಂದೂ ಜಾಗರಣ ವೇದಿಕೆ ಪ್ರಾಂತ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ ಒತ್ತಾಯಿಸಿದ್ದಾರೆ.

'ಕಲ್ಲು ಹೊಡೆದಿದ್ದೂ ತಪ್ಪು, ಗುಂಡು ಹೊಡೆದಿದ್ದೂ ತಪ್ಪು': ಮಂಗಳೂರು ಗಲಭೆಗೆ ಕಾರಣ ಕೇಳಿದ್ರು ಎಚ್ಡಿಕೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ