ಭಾರೀ ಮಳೆಗೆ ಮರವೂರು ಸೇತುವೆ ಕುಸಿತ: ತಪ್ಪಿದ ಮಂಗಳೂರು-ಬಜಪೆ-ಕಟೀಲು ಸಂಪರ್ಕ ಕೊಂಡಿ!
ಭಾರೀ ಮಳೆಗೆ ಮಂಗಳೂರಿನ ಮರವೂರು ಸೇತುವೆ ಕುಸಿದು ಬಿದ್ದಿದೆ. ಮಂಗಳವಾರ ಮುಂಜಾನೆ ಮೂರು ಗಂಟೆಗೆ ಈ ಘಟನೆ ಸಂಭವಿಸಿದೆ. ಇನ್ನು ಈ ಸೇತುವೆ ಮಂಗಳೂರು ನಗರದಿಂದ ವಿಮಾನ ನಿಲ್ದಾಣ ಬಜಪೆ, ಕಿನ್ನಿಗೋಳಿ, ಕಟೀಲು, ನೆಲ್ಲಿತೀರ್ಥ, ಅದ್ಯಪಾಡಿಗೆ ತೆರಳುವ ಪ್ರಮುಖ ರಸ್ತೆಗೆ ಸಂಪರ್ಕ ಕಲ್ಪಿಸಿತ್ತು. ಇದೀಗ ಈ ಸೇತುವೆ ಕುಸಿತದಿಂದ ಈ ಸ್ಥಳಗಳ ಸಂಪರ್ಕ ಕೊಂಡಿ ಮುರಿದು ಬಿದ್ದಂತೆ ಆಗಿದೆ. ಕಳೆದ ಮೂರು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದೆ.
Vijaya Karnataka Web 15 Jun 2021, 7:58 am
ಹೈಲೈಟ್ಸ್:
- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಡಬಿಡದೆ ಸುರಿಯುತ್ತಿದೆ ಭಾರೀ ಮಳೆ
- ಭಾರೀ ಮಳೆಗೆ ಕುಸಿದು ಬಿದ್ದ ಮರವೂರು ಸೇತುವೆ
- ಮಂಗಳೂರು-ಬಜಪೆ-ಕಟೀಲು ಸಂಪರ್ಕ ರಸ್ತೆ ಕಡಿತ
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಮರವೂರು ಸೇತುವೆ ಮಂಗಳವಾರ (ಇಂದು) ಮುಂಜಾನೆ ಸುಮಾರು ಮೂರು ಗಂಟೆಗೆ ಕುಸಿತಗೊಂಡಿದ್ದು, ಸಂಚಾರ ನಿರ್ಬಂಧಿಸಲಾಗಿದೆ. ಮಂಗಳೂರು-ಬಜಪೆ-ಕಟೀಲು ಸಂಪರ್ಕ ರಸ್ತೆ ಇದಾಗಿದ್ದು, ಪಲ್ಗುಣಿ ನದಿಗೆ ಅಡ್ಡವಾಗಿ ನಿರ್ಮಿಸಲಾಗಿದೆ. ಬಜಪೆಯಿಂದ ಮಂಗಳೂರು ಕಡೆಗೆ ಬರುವಾಗ ಸೇತುವೆಯ ಮೊದಲ ಅಂಕಣ ಸುಮಾರು ಮೂರು ಅಡಿ ಕೆಳಗೆ ಕುಸಿದು ನಿಂತಿದೆ. ಕರಾವಳಿಯಲ್ಲಿ ಮೂರು ದಿನದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮೇಲಿನ ಡ್ಯಾಮ್ನಿಂದ ಒಂದೇ ಮಗ್ಗುಲಲ್ಲಿ ನೀರು ಹರಿದು ಬರುತ್ತಿತ್ತು.
ಪ್ರಮುಖ ರಸ್ತೆ!
ಮಂಗಳೂರು ನಗರದಿಂದ ವಿಮಾನ ನಿಲ್ದಾಣ ಬಜಪೆ, ಕಿನ್ನಿಗೋಳಿ, ಕಟೀಲು, ನೆಲ್ಲಿತೀರ್ಥ, ಅದ್ಯಪಾಡಿಗೆ ತೆರಳುವ ಪ್ರಮುಖ ರಸ್ತೆ ಇದಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆ; ಕೆರೆಯಂತಾದ ರಸ್ತೆಗಳು, ನದಿ ನೀರಿನ ಮಟ್ಟದಲ್ಲೂ ಏರಿಕೆ!
3 ವರ್ಷದಲ್ಲಿ ಎರಡನೇ ಸೇತುವೆ!
2018ಜೂ.26ರಂದು ಬಂಟ್ಬಾಳ ತಾಲೂಕಿನ ಮುಲ್ಲರಪಟ್ನದಲ್ಲಿ ಮಂಗಳೂರು-ಸೋರ್ನಾಡು ಸಂಪರ್ಕಿಸುವ ರಸ್ತೆ ಕುಸಿದು ಬಿದ್ದಿತ್ತು. ಇದೀಗ ಮೂರೇ ವರ್ಷದ ಅಂತರದಲ್ಲಿ ಮತ್ತೊಂದು ಬೃಹತ್ ಸೇತುವೆಗೆ ಹಾನಿಯಾಗಿದೆ.
ಪಿಲ್ಲರಿಗೆ ಹಾನಿ!
ಹಲವು ವರ್ಷಗಳಿಂದ ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಮರಳು ಗಾರಿಕೆ ದಂಧೆಯೇ ಸೇತುವೆ ಕುಸಿತಕ್ಕೆ ಕಾರಣವೆನ್ನಲಾಗುತ್ತಿದೆ. ಸೇತುವೆ ಕೆಳಭಾಗದಲ್ಲೇ ಮರಳು ತೆಗೆಯುತ್ತಿದ್ದ ಕಾರಣ ಪಿಲ್ಲರುಗಳು ದುರ್ಬಲವಾಗಿ ಮೂಲರಪಟ್ನ ಸೇತುವೆ ಕುಸಿದು ಬಿದ್ದಿತ್ತು. ಈಗ ಅದೇ ಸರದಿ ಮರವೂರು ಸೇತುವೆಯದ್ದಾಗಿದೆ. ಸ್ಥಳಕ್ಕೆ ಕಾವೂರು-ಬಜಪೆ ಪೊಲೀಸರು ತೆರಳಿದ್ದು, ಈ ರಸ್ತೆಯಲ್ಲಿ ಜನಸಂಚಾರ-ವಾಹನ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ.
ಪ್ರಮುಖ ರಸ್ತೆ!
ಮಂಗಳೂರು ನಗರದಿಂದ ವಿಮಾನ ನಿಲ್ದಾಣ ಬಜಪೆ, ಕಿನ್ನಿಗೋಳಿ, ಕಟೀಲು, ನೆಲ್ಲಿತೀರ್ಥ, ಅದ್ಯಪಾಡಿಗೆ ತೆರಳುವ ಪ್ರಮುಖ ರಸ್ತೆ ಇದಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆ; ಕೆರೆಯಂತಾದ ರಸ್ತೆಗಳು, ನದಿ ನೀರಿನ ಮಟ್ಟದಲ್ಲೂ ಏರಿಕೆ!
3 ವರ್ಷದಲ್ಲಿ ಎರಡನೇ ಸೇತುವೆ!
2018ಜೂ.26ರಂದು ಬಂಟ್ಬಾಳ ತಾಲೂಕಿನ ಮುಲ್ಲರಪಟ್ನದಲ್ಲಿ ಮಂಗಳೂರು-ಸೋರ್ನಾಡು ಸಂಪರ್ಕಿಸುವ ರಸ್ತೆ ಕುಸಿದು ಬಿದ್ದಿತ್ತು. ಇದೀಗ ಮೂರೇ ವರ್ಷದ ಅಂತರದಲ್ಲಿ ಮತ್ತೊಂದು ಬೃಹತ್ ಸೇತುವೆಗೆ ಹಾನಿಯಾಗಿದೆ.
ಪಿಲ್ಲರಿಗೆ ಹಾನಿ!
ಹಲವು ವರ್ಷಗಳಿಂದ ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಮರಳು ಗಾರಿಕೆ ದಂಧೆಯೇ ಸೇತುವೆ ಕುಸಿತಕ್ಕೆ ಕಾರಣವೆನ್ನಲಾಗುತ್ತಿದೆ. ಸೇತುವೆ ಕೆಳಭಾಗದಲ್ಲೇ ಮರಳು ತೆಗೆಯುತ್ತಿದ್ದ ಕಾರಣ ಪಿಲ್ಲರುಗಳು ದುರ್ಬಲವಾಗಿ ಮೂಲರಪಟ್ನ ಸೇತುವೆ ಕುಸಿದು ಬಿದ್ದಿತ್ತು. ಈಗ ಅದೇ ಸರದಿ ಮರವೂರು ಸೇತುವೆಯದ್ದಾಗಿದೆ. ಸ್ಥಳಕ್ಕೆ ಕಾವೂರು-ಬಜಪೆ ಪೊಲೀಸರು ತೆರಳಿದ್ದು, ಈ ರಸ್ತೆಯಲ್ಲಿ ಜನಸಂಚಾರ-ವಾಹನ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ.