ಆ್ಯಪ್ನಗರ

ಮಂಗಳೂರು: ಕೊರಗಜ್ಜನ ಹುಂಡಿಯಿಂದ ಹಣ ಕದ್ದು, ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದವರು ಅರೆಸ್ಟ್!

2020ರ ನವಂಬರ್ ನಲ್ಲಿ ಇವರು ಮಾಡೂರಿನಲ್ಲಿ ರಸ್ತೆ ಬದಿಯಲ್ಲಿದ್ದ ಹುಂಡಿ, ಕುತ್ತಾರು ಆದಿಸ್ಥಳ ಕೊರಗಜ್ಜ ಸ್ವಾಮಿ ದೇವಸ್ಥಾನ, ದೇರಳಕಟ್ಟೆ ಅಯ್ಯಪ್ಪಸ್ವಾಮಿ ದೇವಸ್ಥಾನ, ಕೋಣಾಜೆ ಪರೆಂಡೆಯಲ್ಲಿ ಗೋಪಾಲ ಕೃಷ್ಣ ಮಂದಿರದಲ್ಲಿ ಭಗವಧ್ವಜಕ್ಕೆ ಅಪಮಾನ ಸೇರಿದಂತೆ ವಿವಿಧ ಕಡೆ ಇವರು ಹುಂಡಿ ಹಣವನ್ನು ಕದ್ದಿದ್ದರು. ಇನ್ನು ಹುಂಡಿಯಲ್ಲಿ ಹೆಚ್ಚು ಹಣ ಸಿಗದಿದ್ದಾಗ ಅದಕ್ಕೆ ಮೂತ್ರ ಮಾಡಿ ಬರುತ್ತಿದ್ದರು ಎಂದು ತಿಳಿದುಬಂದಿದೆ.

Vijaya Karnataka Web 6 Feb 2021, 9:06 am
ಮಂಗಳೂರು: ಕರಾವಳಿ ಅಂದರೆ ದೇವರು ಹಾಗೂ ದೈವಗಳಿಗೆ ವಿಶೇಷ ಸ್ಥಾನ ನೀಡುವ ನಾಡು. ಇಲ್ಲಿ ದೇವರು ಹಾಗೂ ದೈವಗಳನ್ನು ವಿಶೇಷವಾಗಿ ಜನರು ನಂಬುತ್ತಾರೆ. ಅಂತಹ ದೇವರು-ದೈವಗಳ ಸ್ಥಾನಕ್ಕೆ ತೆರಳಿ ಹುಂಡಿಯಲ್ಲಿದ್ದ ಹಣವನ್ನು ಎಗರಿಸಿರುವುದು ಮಾತ್ರವಲ್ಲದೆ, ಹುಂಡಿಗೆ ಮೂತ್ರ ವಿಸರ್ಜನೆ ಮಾಡಿದ್ದ ವಿಕೃತಿ ಮನಸ್ಸಿನ ಕಳ್ಳರು ಇದೀಗ ಅರೆಸ್ಟ್‌ ಆಗಿದ್ದಾರೆ.
Vijaya Karnataka Web suhail


ಹೌದು, ದೇವರ ಹಾಗೂ ದೈವದ ಹುಂಡಿಗೆ ಕನ್ನ ಹಾಕುತ್ತಿದ್ದುದಲ್ಲದೆ, ಹುಂಡಿಗೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದರು. ಕೋಣಾಜೆ ಹಾಗೂ ಉಳ್ಳಾಲ ಪೊಲೀಸ್‌ ಠಾಣೆ ವ್ಯಾಪ್ತಿಯ ಕೆಲ ದೇವಸ್ಥಾನ ಹಾಗೂ ದೈವಸ್ಥಾನಗಳಲ್ಲಿ ಅನಾಚಾರವೆಸಗಲಾಗಿತ್ತು. ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಸಂಬಂಧ ಎರಡು ಠಾಣೆಗಳಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.

ಇದೀಗ ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಮಹಮ್ಮದ್ ಸುಹೈಲ್ ಹಾಗೂ ನಿಜಾಮುದ್ದೀನ್ ಎಂದು ಗುರುತಿಸಲಾಗಿದೆ. ತಲಪಾಡಿ ಬಳಿಯ ಕೆ.ಸಿ.ರೋಡ್ ನಿವಾಸಿಗಳಾಗಿರುವ ಇವರು ಹುಂಡಿಯಿಂದ ಹಣ ಕದ್ದಿದಲ್ಲದೆ, ಮೂತ್ರ ಮಾಡಿರುವುದು ನಾವೇ ಎಂದು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು: ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಇದೇ ಮೊದಲ ಬಾರಿಗೆ ಮಂಗಳಮುಖಿ ಆಯ್ಕೆ!

2020ರ ನವಂಬರ್ ನಲ್ಲಿ ಇವರು ಮಾಡೂರಿನಲ್ಲಿ ರಸ್ತೆ ಬದಿಯಲ್ಲಿದ್ದ ಹುಂಡಿ, ಕುತ್ತಾರು ಆದಿಸ್ಥಳ ಕೊರಗಜ್ಜ ಸ್ವಾಮಿ ದೇವಸ್ಥಾನ, ದೇರಳಕಟ್ಟೆ ಅಯ್ಯಪ್ಪಸ್ವಾಮಿ ದೇವಸ್ಥಾನ, ಕೋಣಾಜೆ ಪರೆಂಡೆಯಲ್ಲಿ ಗೋಪಾಲ ಕೃಷ್ಣ ಮಂದಿರದಲ್ಲಿ ಭಗವಧ್ವಜಕ್ಕೆ ಅಪಮಾನ ಸೇರಿದಂತೆ ವಿವಿಧ ಕಡೆ ಇವರು ಹುಂಡಿ ಹಣವನ್ನು ಕದ್ದಿದ್ದರು. ಇನ್ನು ಹುಂಡಿಯಲ್ಲಿ ಹೆಚ್ಚು ಹಣ ಸಿಗದಿದ್ದಾಗ ಅದಕ್ಕೆ ಮೂತ್ರ ಮಾಡಿ ಬರುತ್ತಿದ್ದರು ಎಂದು ತಿಳಿದುಬಂದಿದೆ.

ಆದರೆ ಕಾಣಿಗೆ ಡಬ್ಬಕ್ಕೆ ಕಾಂಡೋಮ್‌ ನಾವು ಹಾಕಿಲ್ಲ ಎಂದು ಆರೋಪಿಗಳು ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಹೀಗಾಗಿ ಈ ಅನೀತಿ ಕೆಲಸಗಳ ಹಿಂದೆ ಇನ್ನಷ್ಟು ಜನರಿರುವ ಕಾರಣ ಪೊಲೀಸರು ತನಿಖೆ ಮತ್ತಷ್ಟು ತೀವ್ರಗೊಳಿಸಿದ್ದಾರೆ. ಸದ್ಯ ಇಬ್ಬರು ಆರೋಪಿಗಳು ಜೈಲು ಪಾಲಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ