ಆ್ಯಪ್ನಗರ

ಮಂಗಳೂರು ಗೋಲಿಬಾರ್ : ಎಚ್‌ಡಿಕೆ ಸಿಡಿಸಿದ್ರು ಸಿ ಡಿ ಬಾಂಬ್

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಗಲಭೆ ಹಾಗೂ ಪೊಲೀಸ್ ಗೋಲಿಬಾರ್ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ವಿಡಿಯೋವನ್ನು ಬಿಡುಗಡೆ ಮಾಡಿದ್ದು ರಾಜ್ಯ ಸರಕಾರ ಹಾಗೂ ಪೊಲೀಸರ ನಡೆಯನ್ನು ವಿರೋಧಿಸಿದ್ದಾರೆ.

Vijaya Karnataka Web 10 Jan 2020, 1:11 pm
ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದಿದ್ದ ಪ್ರತಿಭಟನೆ ವೇಳೆ ಗಲಭೆ ಹಾಗೂ ಗೋಲಿಬಾರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಸಿಡಿ ಬಿಡುಗಡೆ ಮಾಡಿದ್ದಾರೆ. ಒಟ್ಟು 35 ದೃಶ್ಯಗಳನ್ನು ಒಳಗೊಂಡಿರುವ ಸಿಡಿಯಲ್ಲಿ ಪ್ರತಿಭಟನೆಯ ಆರಂಭದಿಂದ ಹಿಡಿದು ಗೋಲಿಬಾರ್‌ ಘಟನೆಯವರೆಗಿನ ಸಂಪೂರ್ಣ ದೃಶ್ಯಾವಳಿಗಳು ಒಳಗೊಂಡಿದೆ.

ಡಿಸೆಂಬರ್ 19 ರಂದು ಮಂಗಳೂರಿನ ಸ್ಟೇಟ್‌ಬ್ಯಾಂಕ್‌ನಲ್ಲಿ ಯುವಕರ ಗುಂಪೊಂದು ಪ್ರತಿಭಟನೆಗೆ ಮುಂದಾಗಿತ್ತು. ಪ್ರತಿಭಟನೆಗೆ ಅವಕಾಶ ನೀಡದ ಪೊಲೀಸರು ಲಾಠಿ ಚಾರ್ಜ್‌ ಮೂಲಕ ಗುಂಪನ್ನು ಚದುರಿಸಿದ್ದರು. ಬಳಿಕ ಪೊಲೀಸರ ಮೇಲೆ ಕಲ್ಲುತೂರಾಟ ನಡೆದಿದ್ದು ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗೋಲಿಬಾರ್‌ ನಡೆಸಿದ್ದರು.


ವಿಡಿಯೋ: ಮಂಗಳೂರು ಗಲಭೆ ವಿಡಿಯೋ ರಿಲೀಸ್‌ ಮಾಡಿದ ಎಚ್‌. ಡಿ ಕುಮಾರಸ್ವಾಮಿ

ಘಟನೆಯಲ್ಲಿ ಜಲೀಲ್‌ ಹಾಗೂ ನೌಶೀನ್ ಮೃತಪಟ್ಟಿದ್ದಾರೆ. ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಈ ಪ್ರಕರಣದ ಕುರಿತಾಗಿ ಪೊಲೀಸರು ಈ ಹಿಂದೆ ಸಿಡಿ ಬಿಡುಗಡೆ ಮಾಡಿದ್ದರು. ಘಟನೆಗೆ ಪ್ರತಿಭಟನಾಕಾರರೇ ಕಾರಣ ಹಾಗೂ ಇದೊಂದು ಪೂರ್ವ ಯೋಜಿತ ಕೃತ್ಯ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು.

ಮಂಗಳೂರು ಪೌರತ್ವ ಗಲಭೆಗೆ ಹೊಸ ಟ್ವಿಸ್ಟ್ , ಮೂಟೆಯಲ್ಲಿತ್ತು ರಾಶಿ ರಾಶಿ ಕಲ್ಲು ! ವಿಡಿಯೋದಲ್ಲಿ ಏನಿದೆ?

ಇದೀಗ ಮಾಜಿ ಸಿಎಂ ಎಚ್‌ಡಿಕೆ ಘಟನೆಯ ದಿನದ ಸಂಪೂರ್ಣ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಒಟ್ಟು 35 ದೃಶ್ಯಗಳನ್ನು ಈ ಸಿ ಡಿ ಒಳಗೊಂಡಿದೆ. ಗಲಭೆ ದಿನದಂದು ಗೂಡ್ಸ್ ಅಟೋದಲ್ಲಿ ಕಲ್ಲು ತುಂಬಿಕೊಂಡು ಬಂದಿರುವ ದೃಶ್ಯಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದರು. ಆದರೆ ಪೊಲೀಸರ ವಾದವನ್ನು ಎಚ್ ಡಿ ಕುಮಾಸ್ವಾಮಿ ಬಿಡುಗಡೆ ಮಾಡಿರುವ ಸಿಡಿಯಲ್ಲಿ ಅಲ್ಲಗಳೆದಿದ್ದಾರೆ.

ಆಟೋದಲ್ಲಿ ಗಲಭೆಗೆ ಯಾವುದೇ ಕಲ್ಲುಗಳನ್ನು ಸಾಟಾಗ ಮಾಡಿಲ್ಲ. ಬದಲಾಗಿ ಮಂಗಳೂರಿನ ಬಂದರು ಪ್ರದೇಶದಲ್ಲಿರುವ ಹಾಜಿ ರೆಸಿಡೆನ್ಸಿ ಕಟ್ಟಡ ರಿಪೇರಿಯ ಕಸವನ್ನು ತುಂಬಿಕೊಂಡು ಹೋಗಿದ್ದ ಆಟೋ ಚಾಲಕ ಗಲಭೆಯ ಕಾರಣಕ್ಕಾಗಿ ಆಟೋವನ್ನು ಬಂದರು ಪ್ರದೇಶದಲ್ಲಿ ನಿಲ್ಲಿಸಿದ್ದ. ಆದರೆ ಪೊಲೀಸರು ಈ ಆಟೋದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ತೋರಿಸಿ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮಂಗಳೂರು ಗೋಲಿಬಾರ್‌: ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಜಾತ್ಯತೀತ ಪಕ್ಷಗಳ ಧರಣಿ

ಅಲ್ಲದೆ ಮಂಗಳೂರಿನ ಬಂದರು ಪ್ರದೇಶದಲ್ಲಿರುವ ಎಂ ಮನೋಹರ್ ಕಿಣಿ ಎಂಬುವವರ ಬಂದೂಕಿನ ಅಂಗಡಿಯನ್ನು ಗಲಭೆಕೋರರು ದೋಚಲು ಮುಂದಾಗಿದ್ದಾರೆ ಎಂದು ಪೊಲೀಸರು ಹೇಳಿಕೆ ನೀಡಿದ್ದು ಸುಳ್ಳು ಎಂದು ಆರೋಪಿಸಿರುವ ಎಚ್‌ಡಿಕೆ, ಅಂಗಡಿಯ ಬಾಗಿಲನ್ನು ಒಡೆದಿದ್ದಾರೆ ಆದರೆ ಯಾವುದೇ ಕಳ್ಳತನ ನಡೆದಿಲ್ಲ ಅಂಗಡಿ ಮಾಲೀಕರ ಹೇಳಿಕೆಯನ್ನು ವಿಡಿಯೋ ಮೂಲಕ ಬಿಡುಗಡೆಗೊಳಿಸಿದ್ದಾರೆ.

ಮಂಗಳೂರು ಗಲಭೆ ಪೂರ್ವನಿಯೋಜಿತ ; ಗೃಹ ಸಚಿವ ಬೊಮ್ಮಾಯಿ ಗಂಭೀರ ಆರೋಪ

ಈ ಕುರಿತಾಗಿ ಸುದ್ದಿಗೋಷ್ಠಿ ನಡೆಸಿರುವ ಕುಮಾರಸ್ವಾಮಿ, ಪೌರತ್ವ ಕಾಯ್ದೆ ಪ್ರತಿಭಟನೆಯ ದಿನದಂದು ಮಂಗಳೂರಿನಲ್ಲಿ ರಾಜ್ಯ ಸರಕಾರ ಹಾಗೂ ಪೊಲೀಸರು ಮಾಡಿರುವುದು ತಪ್ಪು. ಲಾಠಿಚಾರ್ಜ್‌ ಸಂದರ್ಭದಲ್ಲಿ ಪತ್ರಕರ್ತರ ಮೇಲೂ ಹಲ್ಲೆಯಾಗಿದೆ ಹಾಗೂ ಬಸ್‌ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದವರ ಮೇಲೂ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಆಯುಕ್ತ ಡಾ. ಹರ್ಷ ಅವರ ನಡೆ ಅನುಮಾನಾಸ್ಪದವಾಗಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ