ಆ್ಯಪ್ನಗರ

ಪ್ರೆಸ್‌ ಸ್ಟಿಕರ್‌ ಅಂಟಿಸಿ ಮಂಗಳೂರಿನಲ್ಲಿ ಓಡಾಡಿದ ಬೆಂಗಳೂರು ಗಾಡಿ!

ಲಾಕ್‌ಡೌನ್‌ ಸಂದರ್ಭ ಪ್ರೆಸ್‌ ಸ್ಟಿಕ್ಕರ್‌ ಬಳಸಿ ಮಂಗಳೂರಿನಲ್ಲಿ ಓಡಾಡುತ್ತಿದ್ದ ಬೆಂಗಳೂರಿನ ವಾಹನವೊಂದನ್ನು ನಗರ ಸಂಚಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಗರದಲ್ಲಿ ನಿನ್ನೆ 221 ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

Vijaya Karnataka Web 6 Apr 2020, 3:23 pm
ಮಂಗಳೂರು: ಲಾಕ್‌ಡೌನ್‌ ಸಂದರ್ಭ ಪ್ರೆಸ್‌ ಸ್ಟಿಕ್ಕರ್‌ ಬಳಸಿ ನಗರದಲ್ಲಿ ಓಡಾಡುತ್ತಿದ್ದ ಬೆಂಗಳೂರಿನ ವಾಹನವೊಂದನ್ನು ಮಂಗಳೂರು ನಗರ ಸಂಚಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
Vijaya Karnataka Web mangaluru


ಆಂಗ್ಲಪತ್ರಿಕೆಯೊಂದರ ಪ್ರೆಸ್‌ ಸ್ಟಿಕ್ಕರ್‌ ಬಳಸಿದ ಇನೋವಾ ವಾಹನ ನಗರದಲ್ಲಿಓಡಾಡುತ್ತಿತ್ತು. ನಗರ ಪೊಲೀಸರು ಅನುಮಾನದಿಂದ ತಡೆದು ವಿಚಾರಿಸಿದಾಗ ಕಾರಿನವರ ಬಳಿ ಸ್ಪಷ್ಟ ಉತ್ತರ ಸಿಗಲಿಲ್ಲ. ಕೂಡಲೇ ಕಾರು ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಕಾರಿನ ಮಾಲೀಕ ಬೆಂಗಳೂರಿನ ಆಲಿ ಹಸನ್‌ ಎಂದು ತಿಳಿದುಬಂದಿದೆ. ಕಾರನ್ನು ಪಾಂಡೇಶ್ವರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.



221 ಕೇಸು: ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಲಾಕ್‌ಡೌನ್‌ ಉಲ್ಲಂಘನೆ ಮಾಡಿ ಸಂಚರಿಸುತ್ತಿದ್ದ 221 ವಾಹನಗಳನ್ನು ನಗರ ಪೊಲೀಸರು ಭಾನುವಾರ ಮುಟ್ಟುಗೋಲು ಹಾಕಿ, ಕೇಸು ದಾಖಲಿಸಿದ್ದಾರೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ತಪಾಸಣೆ ನಡೆಸಲಾಗುತ್ತಿದೆ. ಆದರೂ ಕೆಲವರು ಲಾಕ್‌ಡೌನ್‌ ಉಲ್ಲಂಘನೆ ಮಾಡುತ್ತಿದ್ದು, ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ