ಮಂಗಳೂರು: ಐದು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ತಂಗಿಯ ಚಿನ್ನಾಭರಣ ಅಪಹರಿಸಿ ಅಕ್ಕ ಪ್ರಿಯತಮನೊಂದಿಗೆ ಪರಾರಿಯಾಗಿರುವುದಾಗಿ ಸುರತ್ಕಲ್ ಠಾಣೆಗೆ ದೂರು ನೀಡಲಾಗಿದೆ. ಪರಾರಿಯಾದ ಮಹಿಳೆ ಚೊಕ್ಕ ಬೆಟ್ಟುವಿನ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಳು. ಮಹಿಳೆಯ ಪತಿ ದುಬೈನಲ್ಲಿರುವುದರಿಂದ ಈಕೆ ತನ್ನ ತಂದೆ ಮನೆಯಲ್ಲಿಯೇ ವಾಸ್ತವ್ಯವಿದ್ದಳು. ಸುಮಾರು 5 ತಿಂಗಳ ಹಿಂದೆ ಮಹಿಳೆಯ ತಂಗಿ ಮದುವೆಯಾಗಿದ್ದು, ಆಕೆಯ ಒಡವೆ ತಂದೆ ಮನೆಯಲ್ಲಿಯೇ ಇತ್ತು.
ಜು.26ರಂದು ಹಿರಿಯ ಮಗಳು ತಾನು ಕರ್ತವ್ಯ ನಿರ್ವಹಿಸುತ್ತಿದ್ದ ಶಾಲೆಗೆ ಹೋಗಿದ್ದು, ಮರಳಿ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಮನೆಯ ಕಪಾಟು ತೆಗೆದು ನೋಡಿದಾಗ ಕಿರಿಯ ಮಗಳ ಒಡವೆಗಳು ನಾಪತ್ತೆಯಾಗಿದೆ.
ಕಾಣೆಯಾದ ಮಹಿಳೆ ಕೃಷ್ಣಾಪುರದ ಯುವಕನನ್ನು ಪ್ರೀತಿಸುತ್ತಿದ್ದು, ಆತನ ಜತೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಮಹಿಳೆಯ ತಂದೆ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ.
ಜು.26ರಂದು ಹಿರಿಯ ಮಗಳು ತಾನು ಕರ್ತವ್ಯ ನಿರ್ವಹಿಸುತ್ತಿದ್ದ ಶಾಲೆಗೆ ಹೋಗಿದ್ದು, ಮರಳಿ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಮನೆಯ ಕಪಾಟು ತೆಗೆದು ನೋಡಿದಾಗ ಕಿರಿಯ ಮಗಳ ಒಡವೆಗಳು ನಾಪತ್ತೆಯಾಗಿದೆ.
ಕಾಣೆಯಾದ ಮಹಿಳೆ ಕೃಷ್ಣಾಪುರದ ಯುವಕನನ್ನು ಪ್ರೀತಿಸುತ್ತಿದ್ದು, ಆತನ ಜತೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಮಹಿಳೆಯ ತಂದೆ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ.