ಸ್ಟೀವನ್ ರೇಗೊ
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಮೌಲ್ಯ ಮಾಪನ ಕಾರ್ಯಕ್ಕೆ ಆರಂಭದಲ್ಲಿಯೇ ವಿಘ್ನ ಎದುರಾಗಿದೆ. ಅತಿಥಿ ಉಪನ್ಯಾಸಕರು ಪೂರ್ಣ ರೂಪದಲ್ಲಿ ಮೌಲ್ಯಮಾಪನ ಕಾರ್ಯಕ್ಕೆ ಇಳಿಯುತ್ತಿಲ್ಲ. ಪರಿಣಾಮ ಹದಿನೈದು ದಿನಗಳಲ್ಲಿ ಬರಬೇಕಾದ ಫಲಿತಾಂಶ ಒಂದು ತಿಂಗಳು ದಾಟುವ ಸಾಧ್ಯತೆಯಿದೆ. ಜೂ.13ರಂದು ಮಂಗಳೂರು ವಿವಿಗೆ ಸಂಬಂಧಪಟ್ಟಂತೆ ಬಿಕಾಂ, ಬಿಎಸ್ಸಿ, ಬಿಸಿಎ, ಬಿಬಿಎ ಪದವಿಗಳ ಮೌಲ್ಯಮಾಪನ ಕಾರ್ಯ ಆರಂಭವಾಗಿದೆ. ಇದರ ಜತೆಯಲ್ಲಿ ಮೇ 13ರಿಂದ 2,4,6 ಸೆಮಿಸ್ಟರ್ನ ಪದವಿ ತರಗತಿಗಳು ಕೂಡ ಸಾಗುತ್ತಿದೆ. ಇದರ ನಡುವೆ ಮೌಲ್ಯಮಾಪನ ಕಾರ್ಯ ಕೂಡ ಜತೆಗೂಡಿದೆ. ವಿಶೇಷ ಎಂದರೆ ಈ ಬಾರಿ ಮೌಲ್ಯಮಾಪನ ವಿಚಾರದಲ್ಲಿ ಅತಿಥಿ ಉಪನ್ಯಾಸಕರ ಬಳಕೆಯ ವಿಚಾರದಲ್ಲಿ ಮೂಡಿರುವ ಗೊಂದಲಕ್ಕೆ ಪೂರ್ಣ ರೂಪದ ಪರಿಹಾರ ಸಿಕ್ಕಿಲ್ಲ. ಇದರ ಪರಿಣಾಮ ಮೌಲ್ಯ ಮಾಪನ ಕಾರ್ಯ ಆರಂಭದಲ್ಲಿಯೇ ಕುಂಟುತ್ತಾ ಸಾಗುತ್ತಿದೆ.
ಮೌಲ್ಯಮಾಪನಕ್ಕೆ ಅತಿಥಿ ದೇವೋಭವ
ಮಂಗಳೂರು ವಿವಿಯ ಮೌಲ್ಯ ಮಾಪನದ ಶೇ.60ರಷ್ಟು ಅತಿಥಿ ಉಪನ್ಯಾಸಕರಿಂದ ನಡೆಯುತ್ತಿದೆ. ಉಳಿದಂತೆ ಶೇ.40ರಷ್ಟು ಕಾಯಂ ಉಪನ್ಯಾಸಕರಿಂದ ಸಾಗಬೇಕು. ಶೇ.40ರಲ್ಲಿ ಹೆಚ್ಚಿನವರು ಪ್ರಿನ್ಸಿಪಾಲರು, ವಿಭಾಗದ ಉಸ್ತುವಾರಿಗಳು ಆಗಿದ್ದಾರೆ. ಇದರಿಂದ ಮೌಲ್ಯಮಾಪನ ಮುಗಿಸುವ ಮಹತ್ತರ ಹೊಣೆಗಾರಿಕೆ ಅತಿಥಿ ಉಪನ್ಯಾಸಕರಿಗೆ ಸಿಕ್ಕಿದೆ. ಆದರೆ ಕಾಲೇಜು ಶಿಕ್ಷಣ ಇಲಾಖೆ ಹೇಳುವಂತೆ ಅತಿಥಿ ಉಪನ್ಯಾಸಕರು ತರಗತಿ ಅಥವಾ ಮೌಲ್ಯಮಾಪನ ಎರಡಲ್ಲಿ ಒಂದನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು. ಒಂದರಲ್ಲಿ ಹೋದರೆ ಮತ್ತೊಂದರಲ್ಲಿ ಸ್ಯಾಲರಿ ಕಡಿತ ಮಾಡಲಾಗುತ್ತದೆ. ಉಪನ್ಯಾಸಕರ ಅವಧಿಯಲ್ಲಿ ತರಗತಿಯಲ್ಲಿ ಬೋಧನೆ ನಡೆಸಬೇಕು ಅಲ್ಲಿಯೇ ವೇತನ ಪಡೆಯಬೇಕು. ಮೌಲ್ಯಮಾಪನಕ್ಕೆ ಹೋದರೆ ತರಗತಿಯ ವೇತನ ಇಲ್ಲ. ಬರೀ ಮೌಲ್ಯಮಾಪನದ ಮೊತ್ತವನ್ನು ಪಡೆಯುವ ಅವಕಾಶ ಸಿಗುತ್ತದೆ ಎನ್ನುವ ವಿಚಾರದಿಂದ ಅತಿಥಿ ಉಪನ್ಯಾಸಕರು ಈ ಬಾರಿ ತರಗತಿಗಳಿಗೆ ಆದ್ಯತೆ ಕೊಡುತ್ತಿದ್ದಾರೆ. ಮೌಲ್ಯಮಾಪನ ಕೆಲಸಕ್ಕೆ ಹೆಚ್ಚು ಮುತುವರ್ಜಿ ತೋರಿಸದೇ ಇರುವುದು ಈ ಬಾರಿ ಮೌಲ್ಯಮಾಪನ ಕೆಲಸಕ್ಕೆ ಬಹಳ ದೊಡ್ಡ ಹೊಡೆತ ಬೀಳುತ್ತಿದೆ.
ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ಪಿ.ಎಲ್. ಧರ್ಮ ಹೇಳುವಂತೆ ಈ ಬಾರಿ ಹದಿನೈದು ದಿನಗಳಲ್ಲಿಯೇ ಫಲಿತಾಂಶ ನೀಡಬೇಕು ಎಂದುಕೊಂಡಿದ್ದೆವು. ಆದರೆ ಅತಿಥಿ ಉಪನ್ಯಾಸಕರ ವಿಚಿತ್ರ ಸಮಸ್ಯೆಯಿಂದ ಮೌಲ್ಯಮಾಪನ ಕೆಲಸ ಬಹಳಷ್ಟು ದಿನ ಮುಂದಕ್ಕೆ ಹೋಗುವ ಸಾಧ್ಯತೆಯಿದೆ. ಈ ಕುರಿತು ಈಗಾಗಲೇ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಮೂಲಕ ಮನವಿ ಮಾಡಿದ್ದೇವೆ. ಕಾಲೇಜು ಶಿಕ್ಷಣ ಇಲಾಖೆಯ ಗಮನಕ್ಕೂ ತರಲಾಗಿದೆ ಎನ್ನುತ್ತಾರೆ ಅವರು.
ಗೊಂದಲಕ್ಕೆ ಸಿಲುಕಿದ ಅತಿಥಿಗಳು
ಅತಿಥಿ ಉಪನ್ಯಾಸಕರು ತಮ್ಮ ಮುಂದಿನ ಹೆಜ್ಜೆ ಇಡುವಲ್ಲಿಯೇ ಗೊಂದಲಕ್ಕೆ ಬಿದ್ದಿದ್ದಾರೆ. ಈಗಾಗಲೇ ಮೌಲ್ಯಮಾಪನ ವಿಚಾರದಲ್ಲಿ ಹಳೆಯ ಆದೇಶಗಳು ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರನ್ನು ಗೊಂದಲಮಯ ಗೊಳಿಸಿದೆ. ಮೌಲ್ಯ ಮಾಪನ ಕಾರ್ಯ ಮಾಡುವ ಅತಿಥಿ ಉಪನ್ಯಾಸಕರ ವೇತವನ್ನು ಕಡಿತ ಮಾಡುವುದು. ಈ ಅವಧಿಯಲ್ಲಿ ವಿವಿಯ ಮೌಲ್ಯಮಾಪನ ಭತ್ಯೆ ಅಥವಾ ಸರಕಾರದ ವೇತನ ಯಾವುದಾದರೂ ಒಂದನ್ನು ಆಯ್ಕೆ ಪಡೆಯಬೇಕು ಎನ್ನುವ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಈ ಕುರಿತು ಇಲಾಖೆ ಸೇರಿದಂತೆ ಯಾರು ಕೂಡ ಸ್ಪಷ್ಟವಾದ ಮಾಹಿತಿ ನೀಡುತ್ತಿಲ್ಲ ಎನ್ನುತ್ತಾರೆ ಅತಿಥಿ ಉಪನ್ಯಾಸಕ ಸತೀಶ್.
ಮಂಗಳೂರು ವಿವಿಯಲ್ಲಿ ಮಾತ್ರ ಈ ಮೌಲ್ಯಮಾಪನ ಸಮಸ್ಯೆ ತಲೆ ದೂರಿದೆ. ರಾಜ್ಯದ ಉಳಿದ ವಿವಿಗಳಲ್ಲಿ ಪರೀಕ್ಷೆ ಮುಗಿಸಿಕೊಂಡು ಮೌಲ್ಯಮಾಪನ ಕೂಡ ಮುಗಿದಿದೆ. ಮಂಗಳೂರು ವಿವಿ ಮೌಲ್ಯಮಾಪನ ಜತೆಗೆ ತರಗತಿ ಕೂಡ ಸಾಗುತ್ತಿರುವುದರಿಂದ ಹೊಸ ಸಮಸ್ಯೆ ಕಾಣಿಸಿಕೊಂಡಿದೆ. ಕಾಯಂ ಉಪನ್ಯಾಸಕರಿಗೆ ಸಂಬಳ, ಭತ್ಯೆ, ರಜೆ ಇರುತ್ತದೆ. ಆದರೆ ಅತಿಥಿ ಉಪನ್ಯಾಸಕರಿಗೆ ಈ ಯಾವುದೇ ಸವಲತ್ತು ಮೌಲ್ಯಮಾಪನ ಸಮಯದಲ್ಲಿ ಇಲ್ಲ. ಇದರಿಂದ ಅತಿಥಿ ಉಪನ್ಯಾಸಕರು ತರಗತಿಯಲ್ಲಿ ಬೋಧಿಸಲು ಇಷ್ಟಪಡಬಹುದು ಎನ್ನುತ್ತಾರೆ ಅತಿಥಿ ಉಪನ್ಯಾಸಕ ಧೀರಜ್ ಹೇಳುತ್ತಾರೆ.
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಮೌಲ್ಯ ಮಾಪನ ಕಾರ್ಯಕ್ಕೆ ಆರಂಭದಲ್ಲಿಯೇ ವಿಘ್ನ ಎದುರಾಗಿದೆ. ಅತಿಥಿ ಉಪನ್ಯಾಸಕರು ಪೂರ್ಣ ರೂಪದಲ್ಲಿ ಮೌಲ್ಯಮಾಪನ ಕಾರ್ಯಕ್ಕೆ ಇಳಿಯುತ್ತಿಲ್ಲ. ಪರಿಣಾಮ ಹದಿನೈದು ದಿನಗಳಲ್ಲಿ ಬರಬೇಕಾದ ಫಲಿತಾಂಶ ಒಂದು ತಿಂಗಳು ದಾಟುವ ಸಾಧ್ಯತೆಯಿದೆ.
ಮೌಲ್ಯಮಾಪನಕ್ಕೆ ಅತಿಥಿ ದೇವೋಭವ
ಮಂಗಳೂರು ವಿವಿಯ ಮೌಲ್ಯ ಮಾಪನದ ಶೇ.60ರಷ್ಟು ಅತಿಥಿ ಉಪನ್ಯಾಸಕರಿಂದ ನಡೆಯುತ್ತಿದೆ. ಉಳಿದಂತೆ ಶೇ.40ರಷ್ಟು ಕಾಯಂ ಉಪನ್ಯಾಸಕರಿಂದ ಸಾಗಬೇಕು. ಶೇ.40ರಲ್ಲಿ ಹೆಚ್ಚಿನವರು ಪ್ರಿನ್ಸಿಪಾಲರು, ವಿಭಾಗದ ಉಸ್ತುವಾರಿಗಳು ಆಗಿದ್ದಾರೆ. ಇದರಿಂದ ಮೌಲ್ಯಮಾಪನ ಮುಗಿಸುವ ಮಹತ್ತರ ಹೊಣೆಗಾರಿಕೆ ಅತಿಥಿ ಉಪನ್ಯಾಸಕರಿಗೆ ಸಿಕ್ಕಿದೆ. ಆದರೆ ಕಾಲೇಜು ಶಿಕ್ಷಣ ಇಲಾಖೆ ಹೇಳುವಂತೆ ಅತಿಥಿ ಉಪನ್ಯಾಸಕರು ತರಗತಿ ಅಥವಾ ಮೌಲ್ಯಮಾಪನ ಎರಡಲ್ಲಿ ಒಂದನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು. ಒಂದರಲ್ಲಿ ಹೋದರೆ ಮತ್ತೊಂದರಲ್ಲಿ ಸ್ಯಾಲರಿ ಕಡಿತ ಮಾಡಲಾಗುತ್ತದೆ. ಉಪನ್ಯಾಸಕರ ಅವಧಿಯಲ್ಲಿ ತರಗತಿಯಲ್ಲಿ ಬೋಧನೆ ನಡೆಸಬೇಕು ಅಲ್ಲಿಯೇ ವೇತನ ಪಡೆಯಬೇಕು. ಮೌಲ್ಯಮಾಪನಕ್ಕೆ ಹೋದರೆ ತರಗತಿಯ ವೇತನ ಇಲ್ಲ. ಬರೀ ಮೌಲ್ಯಮಾಪನದ ಮೊತ್ತವನ್ನು ಪಡೆಯುವ ಅವಕಾಶ ಸಿಗುತ್ತದೆ ಎನ್ನುವ ವಿಚಾರದಿಂದ ಅತಿಥಿ ಉಪನ್ಯಾಸಕರು ಈ ಬಾರಿ ತರಗತಿಗಳಿಗೆ ಆದ್ಯತೆ ಕೊಡುತ್ತಿದ್ದಾರೆ. ಮೌಲ್ಯಮಾಪನ ಕೆಲಸಕ್ಕೆ ಹೆಚ್ಚು ಮುತುವರ್ಜಿ ತೋರಿಸದೇ ಇರುವುದು ಈ ಬಾರಿ ಮೌಲ್ಯಮಾಪನ ಕೆಲಸಕ್ಕೆ ಬಹಳ ದೊಡ್ಡ ಹೊಡೆತ ಬೀಳುತ್ತಿದೆ.
ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ಪಿ.ಎಲ್. ಧರ್ಮ ಹೇಳುವಂತೆ ಈ ಬಾರಿ ಹದಿನೈದು ದಿನಗಳಲ್ಲಿಯೇ ಫಲಿತಾಂಶ ನೀಡಬೇಕು ಎಂದುಕೊಂಡಿದ್ದೆವು. ಆದರೆ ಅತಿಥಿ ಉಪನ್ಯಾಸಕರ ವಿಚಿತ್ರ ಸಮಸ್ಯೆಯಿಂದ ಮೌಲ್ಯಮಾಪನ ಕೆಲಸ ಬಹಳಷ್ಟು ದಿನ ಮುಂದಕ್ಕೆ ಹೋಗುವ ಸಾಧ್ಯತೆಯಿದೆ. ಈ ಕುರಿತು ಈಗಾಗಲೇ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಮೂಲಕ ಮನವಿ ಮಾಡಿದ್ದೇವೆ. ಕಾಲೇಜು ಶಿಕ್ಷಣ ಇಲಾಖೆಯ ಗಮನಕ್ಕೂ ತರಲಾಗಿದೆ ಎನ್ನುತ್ತಾರೆ ಅವರು.
ಗೊಂದಲಕ್ಕೆ ಸಿಲುಕಿದ ಅತಿಥಿಗಳು
ಅತಿಥಿ ಉಪನ್ಯಾಸಕರು ತಮ್ಮ ಮುಂದಿನ ಹೆಜ್ಜೆ ಇಡುವಲ್ಲಿಯೇ ಗೊಂದಲಕ್ಕೆ ಬಿದ್ದಿದ್ದಾರೆ. ಈಗಾಗಲೇ ಮೌಲ್ಯಮಾಪನ ವಿಚಾರದಲ್ಲಿ ಹಳೆಯ ಆದೇಶಗಳು ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರನ್ನು ಗೊಂದಲಮಯ ಗೊಳಿಸಿದೆ. ಮೌಲ್ಯ ಮಾಪನ ಕಾರ್ಯ ಮಾಡುವ ಅತಿಥಿ ಉಪನ್ಯಾಸಕರ ವೇತವನ್ನು ಕಡಿತ ಮಾಡುವುದು. ಈ ಅವಧಿಯಲ್ಲಿ ವಿವಿಯ ಮೌಲ್ಯಮಾಪನ ಭತ್ಯೆ ಅಥವಾ ಸರಕಾರದ ವೇತನ ಯಾವುದಾದರೂ ಒಂದನ್ನು ಆಯ್ಕೆ ಪಡೆಯಬೇಕು ಎನ್ನುವ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಈ ಕುರಿತು ಇಲಾಖೆ ಸೇರಿದಂತೆ ಯಾರು ಕೂಡ ಸ್ಪಷ್ಟವಾದ ಮಾಹಿತಿ ನೀಡುತ್ತಿಲ್ಲ ಎನ್ನುತ್ತಾರೆ ಅತಿಥಿ ಉಪನ್ಯಾಸಕ ಸತೀಶ್.
ಮಂಗಳೂರು ವಿವಿಯಲ್ಲಿ ಮಾತ್ರ ಈ ಮೌಲ್ಯಮಾಪನ ಸಮಸ್ಯೆ ತಲೆ ದೂರಿದೆ. ರಾಜ್ಯದ ಉಳಿದ ವಿವಿಗಳಲ್ಲಿ ಪರೀಕ್ಷೆ ಮುಗಿಸಿಕೊಂಡು ಮೌಲ್ಯಮಾಪನ ಕೂಡ ಮುಗಿದಿದೆ. ಮಂಗಳೂರು ವಿವಿ ಮೌಲ್ಯಮಾಪನ ಜತೆಗೆ ತರಗತಿ ಕೂಡ ಸಾಗುತ್ತಿರುವುದರಿಂದ ಹೊಸ ಸಮಸ್ಯೆ ಕಾಣಿಸಿಕೊಂಡಿದೆ. ಕಾಯಂ ಉಪನ್ಯಾಸಕರಿಗೆ ಸಂಬಳ, ಭತ್ಯೆ, ರಜೆ ಇರುತ್ತದೆ. ಆದರೆ ಅತಿಥಿ ಉಪನ್ಯಾಸಕರಿಗೆ ಈ ಯಾವುದೇ ಸವಲತ್ತು ಮೌಲ್ಯಮಾಪನ ಸಮಯದಲ್ಲಿ ಇಲ್ಲ. ಇದರಿಂದ ಅತಿಥಿ ಉಪನ್ಯಾಸಕರು ತರಗತಿಯಲ್ಲಿ ಬೋಧಿಸಲು ಇಷ್ಟಪಡಬಹುದು ಎನ್ನುತ್ತಾರೆ ಅತಿಥಿ ಉಪನ್ಯಾಸಕ ಧೀರಜ್ ಹೇಳುತ್ತಾರೆ.