ಆ್ಯಪ್ನಗರ

ದಿಢೀರ್ ರದ್ದಾದ ರೈಲು, ಮಂಗಳೂರಿನಲ್ಲಿ ಅತಂತ್ರರಾದ ವಲಸೆ ಕಾರ್ಮಿಕರು

ಮಂಗಳೂರಿನಿಂದ ಪಶ್ಚಿಮ ಬಂಗಾಳಕ್ಕೆ ತೆರಳಬೇಕಾಗಿದ್ದ ರೈಲು ದಿಢೀರ್ ರದ್ದಾದ ಪರಿಣಾಮ ನೂರಾರು ಕಾರ್ಮಿಕರು ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ. ಮಂಗಳೂರಿನ ಕೈಗಾರಿಕಾ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಈ ಕಾರ್ಮಿಕರ ಸಂಕಷ್ಟಕ್ಕೆ ಜಿಲ್ಲಾಡಳಿತ ಸ್ಪಂದಿಸಬೇಕಿದೆ.

Vijaya Karnataka Web 28 May 2020, 10:16 am
ಮಂಗಳೂರು: ಕೊರೊನಾ ಲಾಕ್‌ಡೌನ್‌ ಪರಿಣಾಮ ವಲಸೆ ಕಾರ್ಮಿಕರ ಸಂಕಷ್ಟ ಮುಂದುವರಿದಿದೆ. ನಿಗದಿಯಾಗಿದ್ದ ರೈಲು ದೀಢಿರ್‌ ರದ್ದಾದ ಪರಿಣಾಮ ಮಂಗಳೂರಿನಲ್ಲಿ ಪಶ್ಚಿಮ ಬಂಗಾಳದ ನೂರಾರು ವಲಸೆ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ.
Vijaya Karnataka Web maigrent workers


ಮಂಗಳೂರಿನ ಎಸ್‌ಇಜೆಡ್‌, ಎಂಆರ್‌ಪಿಎಲ್‌ ಸೇರಿದಂತೆ ವಿವಿಧ ಕೈಗಾರಿಕೆಗಳು ಹಾಗೂ ನಿರ್ಮಾಣ ವಲಯಗಳಲ್ಲಿ ಪಶ್ಚಿಮ ಬಂಗಾಳದ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಲಾಕ್‌ಡೌನ್ ಕಾರಣದಿಂದ ತಮ್ಮ ಊರುಗಳಿಗೆ ತೆರಳಲು ಹೊರಟು ನಿಂತಿದ್ದ ಅವರಿಗೆ ಗುರುವಾರ ಮಂಗಳೂರಿನಿಂದ ರೈಲಿನ ವ್ಯವಸ್ಥೆ ಇದೆ ಎಂದು ತಿಳಿಸಲಾಗಿತ್ತು.

ಮಂಗಳೂರಿನಲ್ಲೊಬ್ಬ ಹೃದಯವಂತ, ವಲಸೆ ಕಾರ್ಮಿಕರ ಪಾಲಿಗಿವರು ಆಪದ್ಬಾಂಧವ!

ಈ ಮಾಹಿತಿಯ ಹಿನ್ನೆಲೆಯಲ್ಲಿ ಬಾಡಿಕೆಯಲ್ಲಿದ್ದ ರೂಂಗಳನ್ನು ತೊರೆದು ಕಾರ್ಮಿಕರು ಹೊರಟು ಬಂದಿದ್ದಾರೆ. ಚೆಕ್‌ ಪಾಯಿಂಟ್‌ಗಳಿಗೆ ಕಾರ್ಮಿಕರು ಬಂದರೂ ರೈಲು ದಿಢೀರ್ ಆಗಿ ರದ್ದಾಗಿದೆ ಎಂಬ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ. ಪರಿಣಾಮ ನೂರಾರು ಸಂಖ್ಯೆಯ ಕಾರ್ಮಿಕರು ಪರದಾಡುವಂತಾಗಿದೆ.

ಲಾಕ್‌ಡೌನ್ ಪರಿಣಾಮ ಬಹುತೇಕ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಈಗಾಗಲೇ ಸಾಕಷ್ಟು ಮಂದಿ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಿದ್ದಾರೆ. ಒರಿಸ್ಸಾ, ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಉತ್ತರ ಭಾರತದ ವಿವಿಧ ರಾಜ್ಯಗಳಿಗೆ ತೆರಳಿದ್ದಾರೆ.

ಕೊರೊನಾ ಭಯಕ್ಕಿಂತ ಹಸಿವಿನಿಂದ ಸಾಯೋ ಭಯ ಕಾಡ್ತಿದೆ! ಮಂಗಳೂರಿನ ಕಾರ್ಮಿಕರ ನೋವಿನ ಕಥೆ

ಇದೀಗ ಪಶ್ಚಿಮ ಬಂಗಾಳದ ಸುಮಾರು 1000 ರಷ್ಟು ಕಾರ್ಮಿಕರು ಊರಿಗೆ ತೆರಳಲು ರೈಲು ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ಈ ಕುರಿತಾಗಿ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಮಿಕ ಆಯುಕ್ತ ನಟರಾಜ್‌ ಅವರನ್ನು ವಿಚಾರಿಸಿದರೆ ಈ ಕುರಿತಾಗಿ ಮಾಹಿತಿ ಇಲ್ಲ ಎನ್ನುತ್ತಾರೆ.

ಒಟ್ಟಿನಲ್ಲಿ ಬಾಡಿಗೆ ರೂಂಗಳನ್ನು ತೊರೆದು ಬಂದ ವಲಸೆ ಕಾರ್ಮಿಕರು ಅತಂತ್ರರಾಗಿ ಬೀದಿಯಲ್ಲಿ. ವಾಪಸ್ ಕೊಠಡಿಗೆ ತೆರಳುವಂತಿಲ್ಲ. ಊರಿಗೆ ಹೋಗುವಂತಿಲ್ಲ ಎಂಬ ಸ್ಥಿತಿಯಲ್ಲಿದ್ದಾರೆ. ಜಿಲ್ಲಾಡಳಿತ ಕೂಡಲೇ ಈ ಕುರಿತಾಗಿ ಗಮನಹರಿಸಬೇಕಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ